ಕಮಲಶಿಲೆ ಬ್ರಾಹ್ಮಿ ದುರ್ಗಾಪರಮೇಶ್ವರಿ ಗರ್ಭಗುಡಿಯ ಒಳಗೆ ನುಗ್ಗಿದ ನೀರು

Wednesday, August 5th, 2020
kamalashile

ಉಡುಪಿ : ನಾಗತೀರ್ಥ ಮತ್ತು ಈಗಿನ ಕುಬ್ಜಾ ನದಿಯ ಸಂಗಮ ಸ್ಥಳದಲ್ಲಿರುವ ಕಮಲಶಿಲೆ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವರ್ಷಂಪ್ರತಿ ಯಂತೆ ಈ ವರ್ಷವೂ ಗರ್ಭಗುಡಿಯ ವರೆಗೆ ನೀರು ತುಂಬಿದೆ. ಮಂಗಳವಾರ ಸಂಜೆ  5.45 ತುಂಬಿದ ನೀರು ರಾತ್ರಿ 11 ಗಂಟೆಯ ವರೆಗೂ ಹಾಗೆ ಇತ್ತು ಬಳಿಕ ಸಂಪೂರ್ಣ ಖಾಲಿಯಾಗಿದೆ. ರಾತ್ರಿ  8.30 ಕ್ಕೆ ಪೂಜೆಗೆ ಸೇರಿದ ನೂರಾರು  ಭಕ್ತರು ಪೂಜೆ ಬಳಿಕ ದೇವಸ್ಥಾನದ ಅಂಗಣದಲ್ಲಿ ತುಂಬಿದ್ದ ನೀರಲ್ಲಿ ಮಿಂದು ಕೃತಾರ್ಥರಾದರು. ಇಲ್ಲಿ ದೇವಿಯ ಮೂರ್ತಿ ಉದ್ಭವ ಲಿಂಗದಲ್ಲಿ ಅರಳಿದ ಕಮಲದ ಮೇಲೆ […]

ಅಪಹರಿಸಿದ ಹೆಣ್ಣು ಮಗು ಕುಬ್ಜಾ ನದಿಯಲ್ಲಿ ಶವವಾಗಿ ಪತ್ತೆ

Friday, July 12th, 2019
Sanvika

ಉಡುಪಿ  : ಗುರುವಾರ ತಡ ರಾತ್ರಿ ಸಿದ್ದಾಪುರ ಸಮೀಪದ ಯಡಮೊಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಮ್ಟಿಬೇರು ಎಂಬಲ್ಲಿ ಅಪಹರಣಕ್ಕೊಳಗಾಗಿದ್ದ ಹೆಣ್ಣು ಮಗುವಿನ ಮೃತ ದೇಹ ಕುಬ್ಜಾ ನದಿಯಲ್ಲಿ ಪತ್ತೆಯಾಗಿದೆ. ಕುಮ್ಟಿಬೇರು ನಿವಾಸಿ ಸಂತೋಷ್ ನಾಯ್ಕ್ – ರೇಖಾ ದಂಪತಿಯ ಒಂದು ವರ್ಷದ ಮಗಳು ಸಾನ್ವಿಕಾ ಮೃತ  ದುರ್ದೈವಿ. ನಿನ್ನೆ ತಾಯಿಯೊಂದಿಗೆ ಮಲಗಿದ್ದ ಸಾನ್ವಿಕಾಳನ್ನು ಮುಸುಕುಧಾರಿಯೊಬ್ಬ ಅಪಹರಿಸಿದ್ದಾನೆ ಎಂದು ದೂರು ದಾಖಲಾಗಿತ್ತು. ಶುಕ್ರವಾರ  ಮನೆಯ ಹತ್ತಿರದಲ್ಲೇ ಇರುವ ಕುಬ್ಜಾ ನದಿಯಲ್ಲಿ ಮಗುವಿನ ಶವಪತ್ತೆಯಾಗಿದೆ. ಪೊಲೀಸರು ಮಗುವಿನ ಸಾವಿಗೆ ನಿಖರ ಕಾರಣ ಹುಡುಕುತ್ತಿದ್ದಾರೆ. ಒಂದು ಮಾಹಿತಿ ಪ್ರಕಾರ […]