ಕೊರೋನಾಗೆ ಹೆದರಿ ಪತ್ನಿ ಮನೆ ಬಳಿ ಬೈಕ್ ನಿಲ್ಲಿಸಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಕೊಂಡ ಶಿಕ್ಷಕ

Tuesday, May 18th, 2021
lokesh

ಮೈಸೂರು: ಕೊರೋನಾ ಅದೆಂತಹ ಸಾಂಕ್ರಾಮಿಕ ನೋಡಿ. ಇಲ್ಲೊಬ್ಬ ಶಿಕ್ಷಕ ಕೊರೋನಾ  ಪಾಸಿಟಿವ್ ಬಂದಿದ್ದಕ್ಕೆ ಮನನೊಂದು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಕೊಂಡ ಘಟನೆ ಕೆ.ಆರ್. ನಗರದಲ್ಲಿ ನಡೆದಿದೆ. ಮೈಸೂರು ಜಿಲ್ಲೆ ಕೆ.ಆರ್.ನಗರದ ಕೋಗಿಲೂರು ಗ್ರಾಮದ ಲೋಕೇಶ್ ಮೃತ ದುರ್ದೈವಿ. ಲೋಕೇಶ್ಗೆ ಕಳೆದ ವರ್ಷ ಮದುವೆ ಆಗಿತ್ತು. ಇವರಿಗೆ ಇತ್ತೀಚಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಕುಟುಂಬಸ್ಥರು‌ ಆತ್ಮಸ್ಥೈರ್ಯ ತುಂಬಿದ್ದರು. ವಾರ್ ರೂಂನಿಂದ ಕರೆ‌ ಮಾಡಿ ಆತಂಕ ಪಡಬೇಡಿ ಎಂದು ತಿಳಿಸಿದ್ದರು. ಪತ್ನಿ‌ ಮನೆಗೆ ಹೋಗುವುದಾಗಿ ತನ್ನ ಮನೆಯಲ್ಲಿ ಹೇಳಿದ್ದ ಲೋಕೇಶ್, ಪತ್ನಿ ಮನೆ […]

ಪುಂಡರ ಗುಂಪೊಂದು ತಾಯಿಯ ತಾಳಿಯನ್ನುಕಸಿದು ಅವಮಾನಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಯುವಕ

Saturday, July 4th, 2020
balaraj

ಮೈಸೂರು:  ತಾಯಿಯ ತಾಳಿಯನ್ನು ಕಿತ್ತುಹಾಕಿ ಅವಮಾನಿಸಿದ್ದಕ್ಕೆ ಬೇಸರಗೊಂಡ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ. ಕೆ.ಆರ್.ನಗರ ತಾಲೂಕಿನ ಮೂಲೆಪೆಟ್ಲು ಗ್ರಾಮದ ನಿವಾಸಿ ಬಾಲರಾಜ್(23) ಮೃತ ಯುವಕ. ಬಾಲರಾಜ್ ತಾಯಿಯೊಂದಿಗೆ ವಾಸವಿದ್ದ. ಇತ್ತೀಚೆಗೆ ನಾಲ್ವರು ಯುವಕರು ಮನೆಗೆ ನುಗ್ಗಿ ಗಲಾಟೆ ಮಾಡಿದ್ದರು. ಅಲ್ಲದೆ, ತಾಯಿಯ ತಾಳಿ ಕಿತ್ತುಹಾಕಿ ಅವಮಾನ ಮಾಡಿದ್ದರು. ಯಾವ ವಿಚಾರಕ್ಕೆ ಗಲಾಟೆ ಮಾಡಿದ್ದರು ಎಂಬುದು ಸ್ಪಷ್ಟವಿಲ್ಲ. ಆದರೆ, ಬಾಲರಾಜ್ ಕೆ.ಆರ್.ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ. ಬಳಿಕ ಪೊಲೀಸರು ಯುವಕರನ್ನು ಕರೆಸಿ ರಾಜಿ ಮಾಡಿ […]

ಮೈಸೂರು : ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿ ಪತ್ತೆ

Friday, January 31st, 2020
chirate-mari

ಮೈಸೂರು : ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿಯೊಂದು ಸಿಕ್ಕಿದ್ದು, ಗ್ರಾಮಸ್ಥರು ಅದನ್ನು ಎತ್ತಿ ಮುದ್ದಾಡಿದ್ದಾರೆ. ಕೆ.ಆರ್.ನಗರ ತಾಲೂಕಿನ ಮಿರ್ಲೆ ಗ್ರಾಮದಲ್ಲಿ ಕಬ್ಬು ಕಟಾವು ವೇಳೆ ಚಿರತೆ ಮರಿಯೊಂದು ಪತ್ತೆಯಾಗಿದೆ. ಒಂದು ತಿಂಗಳ ಗಂಡು ಮರಿ ರಕ್ಷಣೆ ಮಾಡಲಾಗಿದ್ದು, ಸಂತೋಷ್ ಎಂಬವರ ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿ ಪತ್ತೆಯಾಗಿದೆ. ಕಬ್ಬು ಕಟಾವು ಮಾಡುತ್ತಿದ್ದವರು ಚಿರತೆ ಮರಿಯನ್ನು ಕಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖಾ ಸಿಬ್ಬಂದಿಗಳು ಚಿರತೆ ಮರಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.