ಕಾರಿಗೆ ಕೆಟಿಎಂ ಬೈಕ್ ಡಿಕ್ಕಿ: ಬೈಕ್ ಸವಾರ ಸಾವು

Wednesday, November 14th, 2018
nantoor

ಮಂಗಳೂರು: ನಗರದ ನಂತೂರು-ಕೆಪಿಟಿ ರಸ್ತೆಯಲ್ಲಿ ಕಾರಿಗೆ ಕೆಟಿಎಂ ಬೈಕ್ ಡಿಕ್ಕಿಯಾದ ಪರಿಣಾಮ ಸವಾರ ರಸ್ತೆಗೆ ಬಿದ್ದ ವೇಳೆ ಹಿಂದಿನಿಂದ ಬರುತ್ತಿದ್ದ ಬಸ್ ಸವಾರನ ಮೇಲೆ ಹರಿದ ಪರಿಣಾಮ ಆತ ಮೃತಪಟ್ಟ ಘಟನೆ ನಡೆದಿದೆ. ಕೋಣಾಜೆ ಇನ್ನೋಳಿ ನಿವಾಸಿ ವಿಲ್ಸನ್ (26) ಮೃತಪಟ್ಟ ಯುವಕ. ಸಹ ಸವಾರ ಮೆಂಡೋನ್ಸಾ (24) ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಬೈಕ್‌ನಲ್ಲಿ ಪದುವಾ ಸಮೀಪದಿಂದ ಕೆಪಿಟಿ ಕಡೆ ಹೋಗುತ್ತಿದ್ದಾಗ ಬೈಕ್ ಕಾರಿಗೆ ಡಿಕ್ಕಿಯಾಗಿ ಮಗುಚಿ ಬಿದ್ದಿದೆ. ಈ ವೇಳೆ ಇಬ್ಬರು ಕೂಡ ರಸ್ತೆಗೆ ಬಿದ್ದಿದ್ದು, […]

ನೇಣು ಬಿಗಿದ ಸ್ಥಿತಿಯಲ್ಲಿ ಅಡಿಕೆ ವ್ಯಾಪಾರಿ ಪತ್ತೆ

Wednesday, April 18th, 2018
suicide

ಮಂಗಳೂರು: ನಾಪತ್ತೆಯಾಗಿದ್ದ ಅಡಿಕೆ ವ್ಯಾಪಾರಿ ಕೋಣಾಜೆ ಸಮೀಪದ ತೌಡುಗೋಳಿ ಕಾಡಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ನೇಣುಬಿಗಿದ ಸ್ಥಿತಿಯಲ್ಲಿ ಅಬ್ದುಲ್ ಅಜೀಜ್ (58) ಎಂಬುವರು ಪತ್ತೆ ಆಗಿದ್ದಾರೆ. ಏ. 14 ರಂದು ಅಬ್ದುಲ್ ಅಜೀಜ್ ನಾಪತ್ತೆಯಾಗಿದ್ದರು. ವ್ಯಾಪಾರದಲ್ಲಿ ನಷ್ಟ ಅನುಭವಿಸಿದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಕೋಣಾಜೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.