ಕೋವಿಡ್ ವೈರಸ್ ಗೆ ಕಲ್ಲಡ್ಕದ 45ವರ್ಷದ ವ್ಯಕ್ತಿ ಬಲಿ

Thursday, July 2nd, 2020
covid-death

ಬಂಟ್ವಾಳ: ಕೋವಿಡ್ ವೈರಸ್ ಗೆ ಬಂಟ್ವಾಳ ತಾಲೂಕಿನಲ್ಲಿ 5ನೇ ಬಲಿಯಾಗಿದ್ದು, ಕಲ್ಲಡ್ಕ ಭಾಗದ 45ವರ್ಷದ ವ್ಯಕ್ತಿಯೋರ್ವರು ಮೃತಪಟ್ಟಿದ್ದಾರೆ. ಮಂಗಳೂರು ಖಾಸಗಿ ಆಸ್ಪತ್ರೆಗೆ ಕಿಡ್ನಿ ಸಮಸ್ಯೆ ಯ ಚಿಕಿತ್ಸೆಗಾಗಿ ದಾಖಲಾಗಿದ್ದರು. ಆದಿತ್ಯವಾರ ವೈದ್ಯರ ಪರೀಕ್ಷೆಯ ಬಳಿಕ ಅವರಿಗೆ ಕೋವಿಡ್ ಸೊಂಕು ತಗಿಲಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ ಇವರಿಗೆ ಸೊಂಕಿನ ಮೂಲ ಯಾವುದು ಎಂಬುದು ದೃಡವಾಗಿಲ್ಲ. ಇವರು ಪ್ರಥಮ ಚಿಕಿತ್ಸೆ ಪಡೆದ ಕಲ್ಲಡ್ಕ ದ ಖಾಸಗಿ ಆಸ್ಪತ್ರೆಯ ನ್ನು ಸೋಮವಾರದಿಂದ ಸೀಲ್ ಡೌನ್ ಮಾಡಲಾಗಿದೆ. ಮೃತ ವ್ಯಕ್ತಿಯ ಪುತ್ರ […]

ಕೋವಿಡ್ ವೈರಸ್ ನಮ್ಮ ಜತೆಯಲ್ಲಿ ಅನೇಕ ವರ್ಷಗಳ ಕಾಲ ಇರುವಂಥದ್ದು : ಪ್ರಧಾನಿ

Wednesday, May 13th, 2020
Narendra Modi

ಹೊಸದಿಲ್ಲಿ: ಕೋವಿಡ್ ವೈರಸ್ ನಮ್ಮ ಜತೆಯಲ್ಲಿ ಅನೇಕ ವರ್ಷಗಳ ಕಾಲ ಇರುವಂಥದ್ದು ಎಂದು ಹಲವಾರು ತಜ್ಞರು ಹೇಳಿದ್ದಾರೆ ಎಂದ ಪ್ರಧಾನಿ, ನಾವು ಯಾವಾಗಲೂ ಮಾಸ್ಕ್ ಗಳನ್ನು ಧರಿಸೋಣ, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳೋಣ. ಅವೆಲ್ಲದರ ಜತೆಗೆ ದೇಶದ ಆರ್ಥಿಕತೆಗೂ ಶ್ರಮಿಸೋಣ ಎಂದು ಪ್ರಧಾನಿ ಹೇಳಿದ್ದಾರೆ. ಕೋವಿಡ್ ಸಂಕಷ್ಟದಿಂದ ಕುಸಿದಿರುವ ದೇಶದ ಆರ್ಥಿಕತೆಯನ್ನು ಮೇಲೆತ್ತಲು ಪ್ರಧಾನಿ ಮೋದಿ 20 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಆರ್ಥಿಕ ಪ್ಯಾಕೇಜ್‌ ಘೋಷಿಸಿದ್ದಾರೆ. ಮಂಗಳವಾರ ರಾತ್ರಿ ದೂರದರ್ಶನದ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, […]

‘ವೆಲ್ ಕಂ ಟು ಇಂಡಿಯಾ ಕೋವಿಡ್ ವೈರಸ್’ ಎಂದು ಟಿಕ್ ಟಾಕ್ ವಿಡಿಯೋ ಮಾಡಿದ ವ್ಯಕ್ತಿಯ ಬಂಧನ

Saturday, April 4th, 2020
sayyad

ಮಹಾರಾಷ್ಟ್ರ:  ಟಿಕ್ ಟಾಕ್ ದ ವಿಡಿಯೋ ಮೂಲಕ ಕೋವಿಡ್ 19 ವೈರಸ್ ಬಗ್ಗೆ ವಿಕೃತಿ ಮೆರೆದ 40 ವರ್ಷದ ವ್ಯಕ್ತಿಯೊಬ್ಬನನ್ನು ನಾಶಿಕ್ ಗ್ರಾಮಾಂತರ ಠಾಣೆಯ ಪೊಲೀಸರು ಇಂದು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಮಾಲೆಗಾಂವ್ ನಿವಾಸಿ ಸಯ್ಯದ್ ಜಮೀಲ್ ಬಾಬು ಎಂದು ಗುರುತಿಸಲಾಗಿದೆ. ಈತ ಟಿಕ್ ಟಾಕ್ ನಲ್ಲಿ ‘ವೆಲ್ ಕಂ ಟು ಇಂಡಿಯಾ ಕೊರೊನಾ’ ಎಂಬ ಟೈಟಲ್ ಕೊಟ್ಟು ತಾನು ವಿಕೃತಿ ಮೆರೆಯುವ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿದ್ದ. ಆ ವಿಡಿಯೋದಲ್ಲಿ ಸಯ್ಯದ್ ನೋಟುಗಳನ್ನು ನೆಕ್ಕುತ್ತಾ, ಮೂಗನ್ನು […]