ನೇತ್ರಾವತಿ ನದಿಗೆ ಹಾರಿ ಮಹಿಳೆಯೋರ್ವಳು ಆತ್ಮಹತ್ಯೆಗೆ ಶರಣು

Monday, December 19th, 2016
Tulasi

ಮಂಗಳೂರು: ಮಹಿಳೆಯೋರ್ವಳು ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಂದು ಸಂಜೆ ಉಳ್ಳಾಲ ಠಾಣಾ ವ್ಯಾಪ್ತಿಯ ನೇತ್ರಾವತಿ ಸೇತುವೆಯಲ್ಲಿ ನಡೆದಿದೆ. ಕಂಕನಾಡಿ ಬೈಪಾಸ್ ರಸ್ತೆಯ ವಿಜಯ್‌ ಎಂಬುವರ ಪತ್ನಿ ತುಳಸಿ (51) ಆತ್ಮಹತ್ಯೆಗೆ ಶರಣಾದ ಮಹಿಳೆ. ಜೆಪ್ಪು ಸಮೀಪ ಬಸ್ಸಿನಿಂದ ಇಳಿದ ಮಹಿಳೆ ನೇತ್ರಾವತಿ ಸೇತುವೆವರೆಗೆ ನಡೆದುಕೊಂಡು ಬಂದಿದ್ದು, ಅಲ್ಲಿ ವ್ಯಾನಿಟಿ ಬ್ಯಾಗ್ ಹಾಗೂ ಚಪ್ಪಲಿಯನ್ನು ಇಟ್ಟು ನದಿಗೆ ಹಾರಿದ್ದಾರೆ ಎನ್ನಲಾಗಿದೆ. ತುಳಸಿ ನದಿಗೆ ಹಾರುವುದನ್ನು ಕಂಡ ದ್ವಿಚಕ್ರ ಸವಾರರೊಬ್ಬರು ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ […]

ಕುಂಬಳೆಯ ಚಾಲಕರಿಗೆ ವಿಶೇಷ ಮಾಹಿತಿ ಶಿಬಿರ

Thursday, August 11th, 2016
Kumbale-Drivers

ಕುಂಬಳೆ: ಶುಭಯಾತ್ರೆ ಸುರಕ್ಷಿತ ಯಾತ್ರೆ ಹಾಗೂ ಸ್ತ್ರೀಯರ ಸುರಕ್ಷತೆಗೂ, ಸಾರಿಗೆಯ ಸುರಕ್ಷತೆಗೂ ಸಂಬಂಧಿಸಿದಂತೆ ನಿರ್ದೇಶನ ಮತ್ತು ಮಾಹಿತಿ ಶಿಬಿರವನ್ನು ಮಂಗಳವಾರ ಕುಂಬಳೆ ಗ್ರಾಮ ಪಂಚಾಯತು ಪರಿಸರದಲ್ಲಿ ಕುಂಬಳೆ ಠಾಣಾ ಎಸ್‌ಐ ಮೆಲ್ವಿನ್ ಜೋಸ್ ನಡೆಸಿಕೊಟ್ಟರು. ಶಿಬಿರವನ್ನು ಕುಂಬಳೆ ಗ್ರಾಮ ಪಂಚಾಯತು ಅಧ್ಯಕ್ಷ ಕೆ.ಎಲ್.ಪುಂಡರೀಕಾಕ್ಷ ಉದ್ಘಾಟಿಸಿ ಮಾತನಾಡಿ, ಕುಂಬಳೆ ಪರಿಸರದಲ್ಲಿ ಆಟೋ ಓಡಿಸುವಂತಹ ಚಾಲಕರಿಗೆ ಮುಂದಿನ ಎರಡು ವಾರದೊಳಗೆ ಗುರುತಿನ ಚೀಟಿಯನ್ನು ನೀಡುವ ವ್ಯವಸ್ಥೆಯನ್ನು ಮಾಡಲಾಗುವುದು. ಪರವಾನಿಗೆ ಮತ್ತು ಬ್ಯಾಡ್ಜ್ ಇದ್ದವರಿಗೆ ಮಾತ್ರ ಈ ಗುರುತಿನ ಚೀಟಿಯನ್ನು ನೀಡಲಾಗುತ್ತದೆ. […]