ಒಂಬತ್ತನೇ ಮಹಡಿಯಿಂದ ಬಿದ್ದ ಭದ್ರತಾ ಸಿಬ್ಬಂದಿ ಮೃತ್ಯು

Monday, November 23rd, 2020
mutturaj

ಮಂಗಳೂರು : ಒಂಬತ್ತನೇ ಮಹಡಿಯಿಂದ  ಕಾಲು ಜಾರಿ ಕೆಳಗೆ ಬಿದ್ದ ಭದ್ರತಾ ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟ ಘಟನೆ ಉಳ್ಳಾಲದಲ್ಲಿ ನಡೆದಿದೆ. ಇಲ್ಲಿನ ಠಾಣಾ ವ್ಯಾಪ್ತಿಯ ನಗರಸಭೆ ಕಚೇರಿ ಬಳಿ ಇರುವ ಇನ್‌ಪಾಲ ಬಹುಮಹಡಿ ಕಟ್ಟಡದಲ್ಲಿ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಚೆಂಬುಗುಡ್ಡೆ ನಿವಾಸಿ ಮುತ್ತುರಾಜ(55) ಎಂದು ಗುರುತಿಸಲಾಗಿದೆ. ಕಟ್ಟಡದ 9ನೆ ಮಹಡಿಗೆ ತೆರಳಿದ್ದ ಅವರು, ಟ್ಯಾಂಕ್ ನಲ್ಲಿ ನೀರು ಪರಿಶೀಲನೆ ಮಾಡುತ್ತಿದ್ದ ಸಂದರ್ಭ ಅಕಸ್ಮಾತ್ ಕಾಲುಜಾರಿ ಕೆಳಗೆ ಬಿದ್ದಿದ್ದಾರೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರರಕಣ ದಾಖಲಾಗಿದೆ.

ಚೆಂಬುಗುಡ್ಡೆಯಲ್ಲಿ ವೃದ್ಧ ದಂಪತಿಗಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ

Wednesday, June 19th, 2019
chombugudde

ಮಂಗಳೂರು : ತೊಕ್ಕೊಟ್ಟುವಿನ ಚೆಂಬುಗುಡ್ಡೆಯಲ್ಲಿ ವೃದ್ಧ ದಂಪತಿಗಳ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಮನೆಯೊಳಗೆ ಪತ್ತೆಯಾಗಿದೆ. ದಂಪತಿಗಳು ಬೆಂಕಿ ಹಚ್ಚಿಕೊಂಡು ಆತ್ಮ ಹತ್ಯೆ ಮಾಡಿಕೊಂಡಿರುವ ಬಗ್ಗೆ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಪದ್ಮನಾಭ(72) ಹಾಗೂ ವಿಮಲ(60) ಆತ್ಮಹತ್ಯೆ ಮಾಡಿಕೊಂಡ ವೃದ್ಧ ದಂಪತಿ. ಚೆಂಬುಗುಡ್ಡೆಯಲ್ಲಿರುವ ಮನೆಯೊಳಗೆ ದಂಪತಿಗಳ ಶವ ಪತ್ತೆಯಾಗಿದ್ದು ಆತ್ಮಹತ್ಯೆ ಮಾಡಿಕೊಂಡಿರ ಬಹುದು ಎಂದು ಶಂಕಿಸಲಾಗಿದೆ. ದಂಪತಿಗಳ ಮೃತದೇಹ ಮನೆಯೊಳಗೆ ಸುಟ್ಟು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ದಂಪತಿಗಳಿಗೆ ಅನಾರೋಗ್ಯ ವಿದ್ದು,  ಅದನ್ನು ಗುಣ ಪಡಿಸಲು ಸಾಧ್ಯ ವಾಗದುದರಿಂದ ಈ ರೀತಿ ಆತ್ಮಹತ್ಯೆ ಮಾಡಿಕೊಂಡಿರ […]

ಅಂತ್ಯ ಸಂಸ್ಕಾರದ ವೇಳೆ ಕಣ್ ಬಿಟ್ಟ ಮಗು ಚಿಕಿತ್ಸೆ ಫಲಕಾರಿಯಾಗದೆ ಸಾವು

Sunday, August 24th, 2014
infant died

ಮಂಗಳೂರು : ತೊಕ್ಕೊಟ್ಟು ಚೆಂಬುಗುಡ್ಡೆಯಲ್ಲಿರುವ ಸ್ಮಶಾನದಲ್ಲಿ ಅಂತ್ಯಸಂಸ್ಕಾರದ ವೇಳೆ ಮಗುವಿನ ಬಾಯಿಗೆ ಕೊನೆಯ ಗುಟುಕು ಹಾಲು ಹಾಕುವ ಸಂದರ್ಭ ಮಗು ಕಣ್ ಬಿಟ್ಟು ಹಾಲು ಚಪ್ಪರಿಸಿ ಮೈ ಅಲ್ಲಾಡಿಸಿ ಪೋಷಕರಿಗೆ ಅಚ್ಚರಿ ಮೂಡಿಸಿ ಸಂತಸವನ್ನು ತಂದಿತ್ತು. ಮಗುವನ್ನು ಕೂಡಲೇ ಮಂಗಳೂರಿನ ಎಸ್ ಸಿಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗುವಿನ ತಂದೆ ವೈದ್ಯರ ವಿರುದ್ದ ದೂರನ್ನು ನೀಡಿದ್ದರು. ಆದರೆ ಭಾನುವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿರುವ ಸುದ್ದಿ ಬಂದಿದೆ. ಸ್ವಾತಂತ್ರ್ಯೋತ್ಸವ (ಅ.15) ದಂದು ಹೆರಿಗೆ ನೋವಿನಿಂದ ಬಳಲುತ್ತಿದ್ದ ಗೌರಿ […]