ಅನ್ನ ನೀಡಿದ ವಾಹನ- ಮದುವೆ ಬಳಿಕ ಜೆಸಿಬಿಯಲ್ಲಿ ವಧು-ವರರ ಮೆರವಣಿಗೆ

Tuesday, June 19th, 2018
marriege

ಮಂಗಳೂರು: ತನ್ನ ಬದುಕಿಗೆ ಅನ್ನ ನೀಡಿದ ವಾಹನ ಜೆಸಿಬಿಯ ಆಪರೇಟರ್ ತಮ್ಮ ಮದುವೆ ಬಳಿಕ ಜೆಸಿಬಿಯಲ್ಲಿ ದಿಬ್ಬಣ ಮಾಡುವ ಮೂಲಕ ಗಮನ ಸೆಳೆದರು. ಪುತ್ತೂರು ತಾಲೂಕಿನ ಸಂಟ್ಯಾರ್‌‌ನ ಜೆಸಿಬಿ ಆಪರೇಟರ್ ಚೇತನ್ ಎಂಬುವರು ಮಮತಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮದುವೆ ಸಮಾರಂಭವು ಸೋಮವಾರ ಪುತ್ತೂರಿನ ಕುಂಬ್ರ ಸಮೀಪದ ಕೊಯಿಲತ್ತಡ್ಕ ಶಿವಕೃಪಾ ಆಡಿಟೋರಿಯಂನಲ್ಲಿ ನಡೆಯಿತು. ಇನ್ನು ಮದುವೆಯ ಬಳಿಕ ಈ ವಧು-ವರರು ಜೆಸಿಬಿಯಲ್ಲಿ ಸುತ್ತಾಡಿ ಗಮನ ಸೆಳೆದರು. ತಾನು ವೃತ್ತಿ ನಡೆಸುವ ಜೆಸಿಬಿಯಲ್ಲಿ ವರ ದಿಬ್ಬಣ ಆಯೋಜಿಸಿದ್ದು ವಿಶೇಷವಾಗಿತ್ತು. ಮದುವೆಯ […]

ಬೇಲ್ ಮೇಲೆ ಜೈಲಿನಿಂದ ಬಂದ ದಿನವೇ ಯುವಕನ ಮೇಲೆ ಅಟ್ಯಾಕ್‌… ಕಲ್ಲಡ್ಕದಲ್ಲಿ ಘಟನೆ

Tuesday, June 12th, 2018
assualt

ಮಂಗಳೂರು: ಯುವಕನೋರ್ವನ ಮೇಲೆ ತಂಡವೊಂದು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಜಿಲ್ಲೆಯ ಬಂಟ್ವಾಳದ ಕಲ್ಲಡ್ಕದಲ್ಲಿ ನಡೆದಿದೆ. ಚೇತನ್ ಮೆಲ್ಕಾರ್ ಹಲ್ಲೆಗೊಳಗಾದ ಯುವಕ. ಕಿರಣ್ ಮೆಲ್ಕಾರ್, ಯೋಗೇಶ್, ಮೋಹನ್, ಕೀರ್ತನ್, ಲೋಕೇಶ್, ಪ್ರಕಾಶ್, ವಿದ್ಯಾಧರ್ ಎಂಬವರ ತಂಡ ಹಲ್ಲೆ ನಡೆಸಿದೆ ಎನ್ನಲಾಗಿದೆ. ಚೇತನ್ ಇಂದಷ್ಟೇ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ. ಹಳೆಯ ದ್ವೇಷದಿಂದ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಗಾಯಾಳು ಚೇತನ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ದನದ ವ್ಯಾಪಾರಿ ಸಾವು ಕೇಸ್‌, ಪೊಲೀಸ್ ಆರೋಪಿಗಳನ್ನು ಕರೆಂಟ್ ತೆಗೆದು ಕರೆದೊಯ್ದ ಪೊಲೀಸರು

Monday, June 4th, 2018
cattle-trader

ಉಡುಪಿ: ದನದ ವ್ಯಾಪಾರಿ‌ ಅನುಮಾನಾಸ್ಪದ ಸಾವು ಪ್ರಕರಣ ಸಂಬಂಧ ಅಮಾನತಾದ ಪೊಲೀಸ್ ಸಹಿತ‌ ಆರೋಪಿಗಳನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು. ಎಸ್‌ಐ ಡಿಎನ್ ಕುಮಾರ್, ಜೀಪು ಚಾಲಕ ಗೋಪಾಲ್, ಹೆಡ್ ಕಾನ್ಸ್‌‌ಟೇಬಲ್‌ ಮೋಹನ್ ಕೋತ್ವಾಲ್ ಹಾಗೂ ಆರೋಪಿಗಳಾದ ಚೇತನ್, ಶೈಲೇಶ್ ಹಾಗೂ ಗಣೇಶ್ ಅವರನ್ನು ಜಿಲ್ಲಾಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಲಾಯಿತು. ನ್ಯಾಯಾಧೀಶರ ಮನೆಗೆ ಹಾಜರು ಪಡಿಸುವ ಮೊದಲು‌ ಆರೋಪಿಗಳಿಗೆ ವೈದ್ಯಕೀಯ ತಪಾಸಣೆ ಮಾಡಲಾಯಿತು. ಜಿಲ್ಲಾಸ್ಪತ್ರೆಯ ಹೊರ‌ ಆವರಣದ‌‌ ಎಲ್ಲಾ ಲೈಟ್ ಬಂದ್ ಮಾಡಿ ಪೊಲೀಸ್ ಆರೋಪಿಗಳನ್ನು ಪೊಲೀಸರು ಕರೆದೊಯ್ದರು.