ಪಣಂಬೂರು : ಪ್ರವಾಸಿಗರನ್ನು ರಕ್ಷಿಸಿದ ಜೀವ ರಕ್ಷಕ ಪಡೆಯ ಸಿಬ್ಬಂದಿ .
Monday, October 2nd, 2017ಮಂಗಳೂರು: ಪಣಂಬೂರು ಬೀಚ್ನಲ್ಲಿ ನೀರಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರನ್ನು ಬೀಚ್ನಲ್ಲಿರುವ ಜೀವ ರಕ್ಷಕ ಪಡೆಯ ಸಿಬ್ಬಂದಿ ರಕ್ಷಿಸಿದ್ದಾರೆ. ಬೆಂಗಳೂರು ದಾಸರ ಹಳ್ಳಿಯ 8ನೇ ಕ್ರಾಸ್ನ ಮೆಕ್ಯಾನಿಕ್ಗಳಾದ ಸಾದಿಕ್ (21), ನರಸಿಂಹ ಮೂರ್ತಿ (19) ಎಂಬುವವರನ್ನು ರಕ್ಷಣೆ ಮಾಡಲಾಗಿದೆ . ಬೆಂಗಳೂರಿನ ದಾಸರಹಳ್ಳಿಯ 8 ನೇ ಕ್ರಾಸ್ ನಿವಾಸಿಗಳಾದ ಇವರು ಮಂಗಳೂರಿಗೆ ಪ್ರವಾಸಕ್ಕಾಗಿ ಬಂದಿದ್ದರು.