ಕಾಂಪೌಂಡ್ ಕುಸಿದು ಹಲವು ಬೈಕ್‍ಗಳಿಗೆ ಹಾನಿ

Thursday, November 17th, 2016
Puttur compound

ಪುತ್ತೂರು: ನಗರದ ಟ್ರಾಫಿಕ್ ಪೊಲೀಸ್ ಠಾಣೆ ಬಳಿಯ ಕಾಂಪೌಂಡ್ ಕುಸಿದು ಹಲವು ಬೈಕ್‍ಗಳಿಗೆ ಹಾನಿಯಾಗಿದೆ. ಬುಧವಾರ ಸಂಜೆ ವೇಳೆಗೆ ಇದ್ದಕ್ಕಿದ್ದಂತೆ ಕಾಂಪೌಂಡ್ ಕುಸಿತವಾಗಿದೆ. ಕಳೆದ ಕೆಲವು ದಿನಗಳಿಂದ ಇಲ್ಲಿನ ಪೈಪ್‌ಗೆ ಹಾನಿಯಾದ ಕಾರಣದಿಂದ ನೀರು ಸೋರಿಕೆಯಾಗುತ್ತಿತ್ತು.ಇದರಿಂದ ಕಾಂಪೌಂಡ್ ತಳಭಾಗ ಸಡಿಲವಾಗಿ ಗೋಡೆ ಕುಸಿದಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಕಾಂಪೌಂಡ್ ಕುಸಿತದಿಂದ ಕಾಂಪೌಂಡ್ ಪಕ್ಕ ಪಾರ್ಕ್ ಮಾಡಿದ್ದ ಬೈಕ್‍ಗಳು ಹಾಗೂ ಇತರ ವಾಹನಗಳಿಗೆ ಹಾನಿಯಾಗಿದೆ.

ನೂತನ ಎಸ್‌ಐಯಾಗಿ ರತ್ನ ಕುಮಾರ್ ಪುತ್ತೂರು ಅಧಿಕಾರ ಸ್ವೀಕಾರ

Wednesday, August 10th, 2016
Rathna-Kumar

ಬಂಟ್ವಾಳ: ಇಲ್ಲಿನ ಟ್ರಾಫಿಕ್ ಪೊಲೀಸ್ ಠಾಣೆಗೆ ನೂತನ ಎಸ್‌ಐಯಾಗಿ ರತ್ನ ಕುಮಾರ್ ಪುತ್ತೂರು ಅವರು ಪದೋನ್ನತಿಗೊಂಡು ಅಧಿಕಾರ ಸ್ವೀಕರಿಸಿದ್ದಾರೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಎಎಸ್‌ಐ ಯಾಗಿ ಕಾರ್ಯನಿರ್ವಹಿಸಿ ಮುಂಬಡ್ತಿಗೊಂಡು ಬಂಟ್ವಾಳ ಟ್ರಾಫಿಕ್ ಪೊಲೀಸ್ ಠಾಣೆಗೆ ಎಸ್‌ಐ ಯಾಗಿ ಅಧಿಕಾರ ಸ್ವೀಕರಿಸಿದ್ದಾರೆ . ಇನ್ನು ಮುಂದೆ ಟ್ರಾಫಿಕ್ ಪೊಲೀಸ್ ಠಾಣೆಗೆ ಎಸ್‌ಐಯಾಗಿ ಚಂದ್ರಶೇಖರಯ್ಯ ಮತ್ತು ರತ್ನ ಕುಮಾರ್‌ರವರು ಕಾರ್ಯ ನಿರ್ವಹಿಸಲಿದ್ದಾರೆ.