ದುಡ್ಡಿಗೆ ಮರುಳಾಗಿ ಮಾಧ್ಯಮಗಳು ಸುದ್ದಿ ಮಾಡುವ ಅಪಾಯಕಾರಿ ದಿನಗಳ ಬಂದಿವೆ : ಉಮಾಪತಿ

Saturday, December 19th, 2015
Media

ಮಂಗಳೂರು : ನಮ್ಮ ನಿತ್ಯದ ಬದುಕು ಮಾರುಕಟ್ಟೆ ಶಕ್ತಿಗಳಿಂದ ಪ್ರಭಾವಿತಗೊಳ್ಳುತ್ತಿದೆ. ದಿನೇದಿನೇ ಇದರ ಸುಳಿಯೊಳಗೆ ಸಿಕ್ಕಿ ಹಾಕಿಕೊಳ್ಳುತ್ತಿದ್ದೇವೆ. ಸಮೂಹ ಮಾಧ್ಯಮಗಳು ಕೂಡ ಈ ಮಾತಿಗೆ ಹೊರತಾಗಿಲ್ಲ. ಮಾಧ್ಯಮಗಳ ಇಂದಿನ ಶೈಲಿಗೆ ಮಾರುಕಟ್ಟೆ ವಿಧಿಸಿರುವ ಹಲವು ಇತಿಮಿತಿಗಳಿವೆ ಎಂದು ಹಿರಿಯ ಪತ್ರಕರ್ತ ಡಿ. ಉಮಾಪತಿ ಹೇಳಿದರು. ಇಲ್ಲಿನ ನಂತೂರು ಬಳಿ ಇರುವ ಶಾಂತಿ ಕಿರಣ ಸಭಾಂಗಣದಲ್ಲಿ ಅಭಿಮತ ಸಂಸ್ಥೆಯು ಆಯೋಜಿಸಿರುವ ಮೂರನೇ ವರ್ಷದ ಜನನುಡಿ ಸಮಾವೇಶದ ನುಡಿ ಮಾರ್ಗ ಗೋಷ್ಠಿಯಲ್ಲಿ ವಿಷಯ ಮಂಡನೆ ಮಾಡಿದ ಅವರು, ಇತ್ತೀಚೆಗೆ ಪ್ರಜ್ಞಾಪೂರ್ವಕವಾಗಿ […]