ಧಾರ್ಮಿಕ ನಂಬಿಕೆಗೆ ಚ್ಯುತಿ ಬಾರದಂತೆ ಛತ್ರಪಳ್ಳಂ ನವೀಕರಣ-ಪಂ.ಅಧ್ಯಕ್ಷರು
Friday, February 5th, 2016ಕುಂಬಳೆ: ಆರಿಕ್ಕಾಡಿ ಶ್ರೀ ಭಗವತಿ ಆಲಿ ಚಾಮುಂಡಿ ಕ್ಷೇತ್ರದ ಚರಿತ್ರೆಗೆ ಸಂಬಂಧಪಟ್ಟ ಛತ್ರಂಪಳ್ಳವನ್ನು ನವೀಕರಿಸಲು ತೀರ್ಮಾನಿಸಲಾಗಿದೆ. ಕುಂಬಳೆ ಪಂಚಾಯತಿನ ಅಧೀನತೆಯಲ್ಲಿ ಶಾಸಕ ಪಿ.ಬಿ.ಅಬ್ದುಲ್ಲ ರಝಾಕ್ಕ ಮುಖಾಂತರ ಕೇರಳ ಸರಕಾರಕ್ಕೆ ಸಮರ್ಪಿಸಿದ ಯೋಜನೆ ಪ್ರಕಾರ ಕಾಮಗಾರಿ ನಡೆಯುತ್ತಿದೆ. ಆರಿಕ್ಕಾಡಿ ಶ್ರೀ ಭಗವತಿ ಆಲಿ ಚಾಮುಂಡಿ ಕ್ಷೇತ್ರಕ್ಕೆ ಸಂಬಂಧ ಪಟ್ಟ ಈ ಸರೋವರ ಕ್ಷೇತ್ರಕ್ಕೆ ಹಾಗೂ ಧಾರ್ಮಿಕ ನಂಬಿಕೆಗಳಿಗೆ ಚ್ಯುತಿ ಬಾರದಂತೆ ಕೆಲಸ ನಿರ್ವಹಿಸಲು ಕುಂಬಳೆ ಪಂಚಾಯತು ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್ ಅವರು ಸೂಚಿಸಿದ್ದಾರೆ. ಧಾರ್ಮಿಕ ನಂಬಿಕೆಯುಳ್ಳ ಛತ್ರಂಪಳ್ಳ ಅನೇಕ […]