ಅಬ್ಬರ ನಿಲ್ಲಿಸಿದ ವರುಣ…ಮಂಗಳೂರಿಗರು ಸ್ವಲ್ಪ ನಿರಾಳ

Wednesday, May 30th, 2018
mangaluru-rain

ಮಂಗಳೂರು: ನಿನ್ನೆ ಮಳೆ ಅಬ್ಬರದಿಂದ ನಲುಗಿದ್ದ ಕರಾವಳಿ ಜನರು ಇಂದು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ನಿನ್ನೆ ಧಾರಾಕಾರವಾಗಿ ಸುರಿದಿದ್ದ ತನ್ನ ರೌದ್ರಾವತಾರ ನಿಲ್ಲಿಸಿ ಶಾಂತವಾಗಿದೆ. ನಿನ್ನೆ ಬೆಳಗ್ಗೆಯಿಂದ ರಾತ್ರಿಯವರೆಗೆ ಸುರಿದ ಮಹಾ ಮಳೆಯಿಂದ ಮಂಗಳೂರು ನಗರ ತತ್ತರಿಸಿ ಹೋಗಿತ್ತು. ಮಹಾಮಳೆಗೆ ಇಬ್ಬರು ಸಾವಿಗೀಡಾಗಿದ್ದರೆ ಹಲವು ಮನೆಗಳಿಗೆ ಹಾನಿಯಾಗಿದೆ. ಹಲವೆಡೆ ನೆರೆ ಹಾವಳಿ ಪರಿಸ್ಥಿತಿ ಕಾಣಿಸಿಕೊಂಡಿತ್ತು. ರಸ್ತೆಗಳಲ್ಲಿ ನೀರು ತುಂಬಿಕೊಂಡು ವಾಹನ ಸಂಚಾರಕ್ಕೆ ತೊಡಕಾಗಿತ್ತು. ಈ ನಡುವೆ ರಾತ್ರಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆಯೆಂದು ಹವಾಮಾನ ಇಲಾಖೆ ಮುನ್ಸೂಚನೆ […]