ಸುಬ್ರಹ್ಮಣ್ಯ ಮೂಲದ ವೈದ್ಯಕೀಯ ವಿದ್ಯಾರ್ಥಿನಿ ಬೆಂಗಳೂರಿನಲ್ಲಿ ಸಾವು

Monday, May 31st, 2021
Prathiksha

ಸುಬ್ರಹ್ಮಣ್ಯ:  ಸುಬ್ರಹ್ಮಣ್ಯ ಮೂಲದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳು  ಆರೋಗ್ಯದಲ್ಲಿ ದಿಢೀರ್ ಏರುಪೇರುಗೊಂಡ  ಬೆಂಗಳೂರಿನಲ್ಲಿ ಮೃತರಾದರು. ಮಂಗಳೂರಿನಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಯಾಗಿರುವ ಕಡಬ ತಾಲೂಕಿನ ಐನೆಕಿದು ಗ್ರಾಮದ ಕೂಜುಗೋಡು ಕಟ್ಟೆಮನೆ ಮನೆತನದ ಬೆಂಗಳೂರಿನ ಉದ್ಯಮಿ ದಿನೇಶ್ ಕೆ. ಅವರ ಪುತ್ರಿ ಪ್ರತೀಕ್ಷಾ(21) ಬೆಂಗಳೂರಿನಲ್ಲಿ ನಿಧನರಾದರು. ದ್ವಿತೀಯ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿದ್ದ ಪ್ರತೀಕ್ಷಾ ಬೆಂಗಳೂರಿನ ಮನೆಗೆ ಹೋಗಿದ್ದರು. ರಕ್ತದೊತ್ತಡ ಕುಸಿತಕ್ಕೊಳಗಾಗಿ  ಅಸೌಖ್ಯಗೊಂಡ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ರಾತ್ರಿ  ನಿಧನರಾದರು. ಅವರು ತಂದೆ, ತಾಯಿ, ಸಹೋದರಿ ಹಾಗೂ ಸಹೋದರನನ್ನು ಅಗಲಿದ್ದಾರೆ. […]

ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ

Wednesday, April 17th, 2019
pratiksha

ಮೂಡುಬಿದಿರೆ : ವಿದ್ಯಾರ್ಥಿನಿಯೋರ್ವಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಮೂಡುಬಿದಿರೆಯಲ್ಲಿ ನಡೆದಿದೆ. ಮಾಂಟ್ರಾಡಿಯ ಹಿನ್ನಲ ಫಲ್ಕೆ ಮನೆಯ ಜಯ ಶೆಟ್ಟಿಯವರ ಪುತ್ರಿ ಪ್ರತೀಕ್ಷಾ(18) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಈಕೆ ಮೂಡುಬಿದಿರೆಯ ಟ್ಯುಟೋರಿಯಲ್‌ನಲ್ಲಿ ಕಲಿತು ಖಾಸಗಿಯಾಗಿ ಪರೀಕ್ಷೆ ಬರೆದಿದ್ದಳು. ಪರೀಕ್ಷೆಯ ಬಳಿಕ ಪ್ರತೀಕ್ಷಾ ಪುಣೆಯಲ್ಲಿರುವ ತನ್ನ ಚಿಕ್ಕಪ್ಪನ ಮನೆಗೆ ತೆರಳಿದ್ದಳು. ಏ 15ರ ಸೋಮವಾರ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ಪರೀಕ್ಷೆಯಲ್ಲಿ ಪ್ರತೀಕ್ಷಾ ಅನುತ್ತೀರ್ಣಳಾಗಿದ್ದಳು. ಅನುತೀರ್ಣಗೊಂಡ ಹಿನ್ನೆಲೆ ನೊಂದ ವಿದ್ಯಾರ್ಥಿನಿ […]

ಯಕ್ಷೋತ್ಸವ 2018: ಆಳ್ವಾಸ್‍ಗೆ ಪ್ರಶಸ್ತಿ

Thursday, February 22nd, 2018
alwas-college

ಮೂಡುಬಿದಿರೆ: ಮಂಗಳೂರಿನ ಎಸ್‍ಡಿಎಂ ಕಾನೂನು ಕಾಲೇಜಿನ ಆಶ್ರಯದಲ್ಲಿ ನಡೆದ ಯಕ್ಷೋತ್ಸವ 2018 ಯಕ್ಷಗಾನ ಸ್ಪರ್ಧೆಯಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ `ಸುದರ್ಶನ ವಿಜಯ’ ಪ್ರಥಮ ಪ್ರಶಸ್ತಿಯನ್ನು ಪಡೆಯುವುದರ ಮೂಲಕ ಸತತ ಮೂರು ವರ್ಷಗಳಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದಿದೆ. ಪ್ರಶಸ್ತಿಯು ಪರ್ಯಾಯ ಫಲಕ, 5 ಸಾವಿರ ರೂಪಾಯಿ ನಗದು ಒಳಗೊಂಡಿದೆ. ಆಳ್ವಾಸ್ ವಿದ್ಯಾರ್ಥಿಗಳಾದ ಶಿವರಾಜ ಬಜಕೂಡ್ಲು ಅತ್ಯುತ್ತಮ ಪುಂಡುವೇಷ, ಪ್ರತೀಕ್ಷಾ ಅತ್ಯುತ್ತಮ ಹಾಸ್ಯ ಪ್ರಶಸ್ತಿಯನ್ನು ಪಡೆದರು. ಶೇಖರ್ ಶೆಟ್ಟಿಗಾರ್ ಅರ್ಥ ವಿನ್ಯಾಸ ,ಮಾರ್ಗದರ್ಶನದಲ್ಲಿ ಪ್ರಸಾದ್ ಚೇರ್ಕಾಡಿ ಅವರು ನಿರ್ದೇಶಿಸಿದರು. […]