ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಗುರುಪುರದ ಕೊಳಂಬೆ ನಿವಾಸಿ ಯೋಗಿಣಿ ಮೃತದೇಹ ಪತ್ತೆ

Friday, August 5th, 2016
Yogini

ಮಂಗಳೂರು: ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಯುವತಿಯ ಮೃತದೇಹ ನಿನ್ನೆ ಪತ್ತೆಯಾಗಿದೆ. ಗುರುಪುರದ ಕೊಳಂಬೆ ನಿವಾಸಿ ಯೋಗಿಣಿ ಎಂಬಾಕೆ ಆತ್ಮಹತ್ಯೆಗೆ ಶರಣಾದ ಯುವತಿ. ಯೋಗಿಣಿ ಬೈಕಂಪಾಡಿಯಲ್ಲಿರುವ ಪ್ಲಾಸ್ಟಿಕ್ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದಳು. ಜುಲೈ ಮೂರರಂದು ಕೆಲಸಕ್ಕೆಂದು ಮನೆಬಿಟ್ಟವಳು ಅಂದು ಮಧ್ಯಾಹ್ನವೇ ರಜೆ ಕೇಳಿ ಬಂದಿದ್ದಳು. ಅಲ್ಲಿಂದ ಆಕೆ ಗುರುಪುರದ ಫಲ್ಗುಣಿ ನದಿ ಬಳಿ ತಲುಪಿದ್ದು, ತನ್ನ ಬ್ಯಾಗ್ ಹಾಗೂ ಮೊಬೈಲ್‌ನ್ನು ತಟದಲ್ಲಿಯೇ ಬಿಟ್ಟು ಅಲ್ಲಿಂದಲೇ ನದಿಗೆ ಹಾರಿದ್ದಳು ಎಂದು ಪ್ರತ್ಯಕ್ಷದರ್ಶಿಗಳು ಹೇಳೀದ್ದರು. ವಿಷಯ ಮನೆಯವರಿಗೆ ತಿಳಿದು ಹುಡುಕಾಟ […]

ಮನುಷ್ಯ ಸಂಬಂಧ ವೃದ್ಧಿ ವರ್ತಮಾನದ ತುರ್ತು : ಡಾ. ಕೈರೋಡಿ

Monday, February 29th, 2016
Yuva Friends

ಬಂಟ್ವಾಳ: ಕಳೆದ ಎರಡು ದಶಕಗಳಿಂದೀಚೆಗೆ ಯಾಂತ್ರಿಕವಾಗಿ, ಸೌಲಭ್ಯ ಕೇಂದ್ರಿತವಾಗಿ ಸಾಕಷ್ಟು ಆಶಾದಾಯಕ ಬೆಳವಣಿಗೆಯಾಗಿದೆ. ಆದರೆ ಮನುಷ್ಯ ಮನುಷ್ಯನೊಂದಿಗೆ ಅರಿತು ಬೆರೆತು ಬದುಕುವ ವಾತಾವರಣ ಕ್ಷಿಣಿಸುತ್ತಿವೆ. ಸ್ವಾರ್ಥಪರ ಹಾಗೂ ಸಂಕುಚಿತ ಮನೋಭಾವ ಬಿತ್ತುವ ಸಂಗತಿಗಳೇ ವಿಜೃಂಭಿಸುತ್ತಿವೆ. ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪ್ರಾಧ್ಯಾಪಕ ಡಾ.ಯೋಗೀಶ್ ಕೈರೋಡಿ ನುಡಿದರು. ಅವರು ಬಂಟ್ವಾಳ ತಾಲೂಕಿನ ಕುಕ್ಕಿಪಾಡಿಯ ನೇಲ್ಯಕುವೇರಿನಲ್ಲಿ ಯುವ ಫ್ರೆಂಡ್ಸ್ ಬಳಗದ ವತಿಯಿಂದ ನಡೆದ ಸಾಂಸ್ಕೃತಿಕ ಉತ್ಸವವನ್ನು ಉದ್ಟಾಟಿಸಿ ಮಾತನಾಡುತ್ತಿದ್ದರು. ಭತ್ತದ ಕೃಷಿಯಲ್ಲಿ ಹಾಸು ಹೊಕ್ಕಾಗಿದ್ದ ಮನುಷ್ಯ ಭಾಂಧವ್ಯವಾಗಲಿ ಜನಪದ […]