ಕತಾರಿನಿಂದ ಬೆಂಗಳೂರು ಹಾಗು ಮಂಗಳೂರಿಗೆ ಹೆಚ್ಚುವರಿ ವಿಮಾನ ಸೇವೆಯನ್ನು ಯಾಚಿಸಿ ಪತ್ರ

Sunday, June 7th, 2020
hakki-pikki-dubai

ಕತಾರ್  :  ಕರೋನಾ ಮಹಾಮಾರಿಯ ತಾಂಡವ ಕತಾರಿನಲ್ಲಿ ಇನ್ನೂ ಹೆಚ್ಚುತ್ತಿರುವ ಕಾರಣ, ಹೆಚ್ಚಿನ ಪ್ರಮಾಣದಲ್ಲಿ ಕನ್ನಡಿಗರು ಕೆಲಸ ಕಳೆದುಕೊಂಡು, ಅನ್ನಾಹಾರಗಳಿಗೆ ಕಷ್ಟಪಡುತ್ತಿರುವರು, ಕೆಲವರ ಕುಟುಂಬದ ಸದಸ್ಯರು ಕರ್ನಾಟಕದಲ್ಲಿ ಕಾಲವಾಗಿ ಹೋಗಿರುವರು, ಅವರು ಹಿಂತಿರುಗಲು ತುದಿಗಾಲಿನಲ್ಲಿರುವರು, 6 ಜನ ಹಕ್ಕಿ-ಪಿಕ್ಕಿಗಳನ್ನು ಹಿಂದಕ್ಕೆ ಕಳುಹಿಸಬೇಕಾಗಿದೆ, ಕೆಲವರಿಗೆ ಅನಾರೋಗ್ಯದ ಕಾರಣ ಮಾತೃಭೂಮಿಗೆ ಹಿಂತಿರುಗಬೇಕಾಗಿದೆ, ಮತ್ತು ಹಲವರು ನಿರಾಶ್ರಿತರಾಗಿ ಬೇರೆ ದಾರಿ ಕಾಣದೆ ತಾಯ್ನಾಡಿಗೆ ಹೋಗಲು ಚಡಪಡಿಸುತ್ತಿರುವರು. ದಿನೇ ದಿನೇ ಇಂತಹವರ ಸಂಖ್ಯೆ ಹೆಚ್ಚುತ್ತಿದೆ ಹಾಗೂ ಪರಿಸ್ಥಿತಿ ಗಂಭೀರವಾಗುತ್ತಿದೆ ಎಂದು ಕನ್ನಡಿಗರ ಸಂಸ್ಥೆ ಭಾರತ ಸಮುದಾಯ ಹಿತೈಷಿ […]