ನೆಟ್ಟಣ : ರೈಲಿನಲ್ಲಿ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಆರೋಪಿ ಬಂಧನ

Thursday, October 24th, 2019
mangu

ಕಡಬ : ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಆರೋಪಿಯನ್ನು ಹಾಗೂ ಆತನ ಜೊತೆಗಿದ್ದ ಎನ್ನಲಾದ ಮತ್ತೋರ್ವನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಬುಧವಾರದಂದು ಸುಬ್ರಹ್ಮಣ್ಯ ರೋಡ್ – ಮಂಗಳೂರು ರೈಲಿನಲ್ಲಿ ನಡೆದಿದೆ. ಬಂಧಿತ ಆರೋಪಿಯನ್ನು ಬೆಂಗಳೂರಿನ ಕೆಂಗೇರಿ ನಿವಾಸಿ ಮಂಜು(27) ಎಂದು ಗುರುತಿಸಲಾಗಿದೆ. ನೆಟ್ಟಣದಿಂದ ಮಂಗಳೂರಿಗೆ ತೆರಳುತ್ತಿದ್ದ ರೈಲಿನ ಮಹಿಳಾ ಬೋಗಿಗೆ ಹತ್ತಿದ ಆರೋಪಿಯು ಮಹಿಳೆ ಒಬ್ಬರೇ ಇರುವುದನ್ನು ಕಂಡು ಮಾನಭಂಗಕ್ಕೆ ಯತ್ನಿಸಿದ್ದು, ಈ ವೇಳೆ ಮಹಿಳೆಯು ಚೈನ್ ಎಳೆದು ರೈಲನ್ನು ನಿಲ್ಲಿಸಿದ್ದಾರೆ. ತಕ್ಷಣವೇ […]

ಕೆಎಂಎಫ್ ನೂತನ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

Saturday, August 31st, 2019
KMF

ಬೆಂಗಳೂರು : ಕೆಎಂಎಫ್ ಚುನಾವಣಾ ದಿನಾಂಕ‌‌ ಹೊರ ಬೀಳುತ್ತಿದ್ದಂತೆ ಮುಂಬೈ ಸೇರಿದ್ದ 11 ಹಾಲು ಒಕ್ಕೂಟದ ನಿರ್ದೇಶಕರು ಇಂದು ಒಟ್ಟಿಗೆ ಮಿನಿ ಬಸ್ನಲ್ಲಿ ಕೆಎಂಎಫ್ ಕೇಂದ್ರ ಕಚೇರಿ ತಲುಪಿದ್ದಾರೆ. ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದಂತೆ 11.45ಕ್ಕೆ ಅಜ್ಞಾತ ಸ್ಥಳಕ್ಕೆ ತೆರಳಿದ್ದ ನಿರ್ದೇಶಕರು ಆಗಮಿಸಿದರು. ರಾಜ್ಯದ ಹಾಲು ಒಕ್ಕೂಟದ 11 ನಿರ್ದೇಶಕರು ಒಟ್ಟಾಗಿಯೇ ಮಿನಿ ಬಸ್ನಲ್ಲಿ ಡೈರಿ ವೃತ್ತದ ಬಳಿ ಇರುವ ಕೆಎಂಎಫ್ ಕೇಂದ್ರ ಕಚೇರಿಗೆ ಆಗಮಿಸಿದರು. ಕಾಂಗ್ರೆಸ್ ಮತ್ತು […]

ಬೆಂಗಳೂರಿನ ಕಾಂತರಾಜ್ ಮತ್ತು ತಂಡದವರಿಂದ ಪುಷ್ಪಾಲಂಕಾರ ಸೇವೆ

Thursday, December 6th, 2018
decoration

ಧರ್ಮಸ್ಥಳ: ಬೆಂಗಳೂರಿನ ಕಾಂತರಾಜ್ ಮತ್ತು ಬಳಗದವರು ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಗುರುವಾರ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನ, ಹೆಗ್ಗಡೆಯವರ ನಿವಾಸ (ಬೀಡು) ಹಾಗೂ ದೇವಸ್ಥಾನದ ಒಳಾಂಗಣವನ್ನು ಪುಷ್ಪಾಲಂಕಾರ ಮಾಡಿ ಸೇವೆಯಿಂದ ಧನ್ಯತೆಯನ್ನು ಹೊಂದಿದರು. ಸುಮಾರು ನಾಲ್ಕು ಲಕ್ಷ ರೂಪಾಯಿ ಮೌಲ್ಯದ ವಿವಿಧ ಅಲಂಕಾರಿಕ ಹೂ ಗಳನ್ನು ಬೆಂಗಳೂರಿನಿಂದ ತಂದು ಗುರುವಾರ ಅಲಂಕಾರ ಸೇವೆಯನ್ನು ಸಮರ್ಪಿಸಿದರು. ಇವರ ಜೊತೆ ರವಿ, ರಮೇಶ್, ಮತ್ತು ಮಂಜು ಹಾಗೂ ಇತರ ಭಕ್ತಾದಿಗಳು ಸಹಕರಿಸಿದರು.

ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ನಿರ್ಮಾಪಕ ಮಂಜು ಕಣಕ್ಕೆ?

Monday, April 23rd, 2018
k-manju

ಬೆಂಗಳೂರು: ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದಿಂದ ಕನ್ನಡ ಸಿನಿಮಾ ನಿರ್ಮಾಪಕ ಕೆ ಮಂಜು ಅವರು ಕಣಕ್ಕಿಳಿಯುವ ಸುದ್ದಿ ಬಂದಿದೆ. ಜೆಡಿಎಸ್ ನಿಂದ ಟಿಕೆಟ್ ಪಡೆದು ಸ್ಪರ್ಧಿಸಲು ಕೆ ಮಂಜು ಸಿದ್ಧರಾಗಿದ್ದಾರೆ. ಈ ಮುಂಚೆ ಕಾಂಗ್ರೆಸ್ ಟಿಕೆಟ್ ಬಯಸಿದ್ದರು. ಅದರೆ, ಈಗ ಜೆಡಿಎಸ್ ವರಿಷ್ಠ ಎಚ್. ಡಿ ದೇವೇಗೌಡರನ್ನು ಭೇಟಿ ಮಾಡಿ, ಬಿ ಫಾರಂ ಪಡೆಯಲಿದ್ದು, ಇಂದೇ ನಾಮಪತ್ರ ಸಲ್ಲಿಸಲಿದ್ದಾರೆ ಎಂಬ ಮಾಹಿತಿಯಿದೆ. ಬೊಮ್ಮನಹಳ್ಳಿ ಕ್ಷೇತ್ರದಿಂದ ಒಕ್ಕಲಿಗ ಮಹಾಸಂಸ್ಥಾನದ ಚಂದ್ರಶೇಖರಸ್ವಾಮೀಜಿ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಈಗ […]