ಸಿಗರೇಟ್​ ಒಳಗೆ ಗಾಂಜಾ ಇಟ್ಟು ಮಾರಾಟ.. ಐವರು ಆರೋಪಿಗಳ ಬಂಧನ

Wednesday, December 12th, 2018
arrested

ಬೆಂಗಳೂರು: ಸಿಗರೇಟಿನ ಒಳಗೆ ಗಾಂಜಾ ಇಟ್ಟು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನ ಬಂಧಿಸುವಲ್ಲಿ ನಗರದ ‌ಮಾಗಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ರವಿಕುಮಾರ್, ಮಂಜುನಾಥ, ಅಬ್ದುಲ್ ಕಲಾಂ, ಅರುಣ್ ಪ್ರಸಾದ್, ಸುಬ್ರಮಣಿ ಎಂದು ಗುರುತಿಸಲಾಗಿದೆ. ಈ ಆರೋಪಿಗಳ ಪೈಕಿ ಪ್ರಮುಖ ಆರೋಪಿ ರವಿಕುಮಾರ್ ಎಂಬಾತ ಮಾಗಡಿ ಬಳಿ ಸಾರ್ವಜನಿಕರಿಗೆ ಸಿಗರೇಟ್ ಒಳಗೆ ಗಾಂಜಾ ಇಟ್ಟು ಮಾರಾಟ ಮಾಡುತ್ತಿದ್ದ. ಈತನ ಈ ಕೃತ್ಯಕ್ಕೆ ಈಗಾಗಲೇ ಬಂಧಿಸಲ್ಪಟ್ಟ ಇತರ ಸಹಚರರು ಸಹಾಯ‌ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಇನ್ನು ಆರೋಪಿಗಳ ವಿರುದ್ಧ ಈಗಾಗಲೇ […]

ಬಸ್‌-ತೂಫಾನ್‌ ಢಿಕ್ಕಿ: 8 ಮಂದಿಗೆ ಗಾಯ

Tuesday, May 29th, 2018
bus-accident

ಕಾರ್ಕಳ: ಬಸ್‌ ಹಾಗೂ ತೂಫಾನ್‌ ಟೆಂಪೋ ಮುಖಾಮುಖೀ ಢಿಕ್ಕಿ ಹೊಡೆದು 8 ಮಂದಿ ಗಾಯಗೊಂಡಿರುವ ಘಟನೆ ಕಾರ್ಕಳ ಬೈಲೂರು ಸಮೀಪದಲ್ಲಿ ಸೋಮವಾರ ಸಂಜೆ ಸಂಭವಿಸಿದೆ. ತೂಫಾನ್‌ನಲ್ಲಿದ್ದ ಗಂಗಮ್ಮ (60), ನಿಂಗಮ್ಮ (60), ಹನುಮಂತ ಗೌಡ (34), ಮಂಜುನಾಥ(47), ಸಿದ್ದಪ್ಪ (70), ಗುರು (37), ಲಲಿತ್‌ (39), ರಮೇಶ್‌ (28) ಗಾಯಗೊಂಡವರು. ಈ ಪೈಕಿ ಚಾಲಕ ರಮೇಶ್‌ ಅವರ ಮುಖಕ್ಕೆ ತೀವ್ರ ತರಹದ ಗಾಯವಾಗಿವೆ. ಇದರಲ್ಲಿ ಒಟ್ಟು 11 ಮಂದಿಯಿದ್ದು, ಮೂವರು ಮಕ್ಕಳು ಗಾಯಗಳಿಲ್ಲದೆ ಪಾರಾಗಿದ್ದಾರೆ. ಗಾಯಾಳುಗಳನ್ನು 108 […]