ಒಳಚರಂಡಿ ಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರ: ಸಮಗ್ರ ತನಿಖೆಗೆ ಒತ್ತಾಯಿಸಿ ಸಿಪಿಐ(ಎಂ)ನಿಂದ ನಗರಪಾಲಿಕೆ ಚಲೋ
Tuesday, February 20th, 2018ಮಂಗಳೂರು: ಕುಡ್ಸೆಂಪ್ (ಒಳಚರಂಡಿ) ಯೋಜನೆಯಲ್ಲಿ ನಡೆದ ಭ್ರಷ್ಟಾಚಾರವನ್ನು ಉನ್ನತ ತನಿಖೆಗೆ ಒತ್ತಾಯಿಸಿ, ಅಮೃತ್ ಯೋಜನೆಯಿಂದ ಭ್ರಷ್ಟ ಗುತ್ತಿಗೆದಾರರನ್ನು ಹೊರಗಿಡಲು ಆಗ್ರಹಿಸಿ ಹಾಗೂ ನಿಯಮ ಉಲ್ಲಂಘಿಸಿ ನಡೆದಿರುವ ನಗರದ ಹೊಸ ಪಂಪ್ಲೈನ್ ಕಾಮಗಾರಿ ಗುತ್ತಿಗೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಸಿಪಿಐ(ಎಂ) ನೇತೃತ್ವದಲ್ಲಿ ನಗರದಲ್ಲಿ ಇಂದು (ತಾ. 20-02-2018) ಮಂಗಳೂರು ಮಹಾನಗರ ಪಾಲಿಕೆ ಕಚೇರಿ ಎದುರು ಪ್ರತಿಭಟನಾ ಪ್ರದರ್ಶನವನ್ನು ನಡೆಸಲಾಯಿತು. ಬಲ್ಲಾಳ್ಬಾಗ್ನಿಂದ ಮೆರವಣಿಗೆಯಲ್ಲಿ ಹೊರಟ ಸಿಪಿಐ(ಎಂ) ಪಕ್ಷದ ನೂರಾರು ಕಾರ್ಯಕರ್ತರು, ’ಭ್ರಷ್ಟಾಚಾರದಲ್ಲಿ ಶಾಮೀಲಾಗಿರುವ ಶಾಸಕರಿಗೆ ಧಿಕ್ಕಾರ, ಕುಡ್ಸೆಂಪ್ ಹಗರಣ ಮಂಗಳೂರು ನಗರಕ್ಕೊಂದು […]