ಈಜಲು ಹೋದ ಯುವಕರಿಬ್ಬರು ನೀರುಪಾಲು

Wednesday, July 6th, 2016
maravoor-child

ಮಂಗಳೂರು: ಈಜಲು ಹೋದ ಯುವಕರಿಬ್ಬರು ನೀರುಪಾಲಾದ ಘಟನೆ ಮರವೂರು ಸಮೀಪ ನದಿಯಲ್ಲಿ ನಡೆದಿದೆ. ಮೃತರನ್ನು ಅವಿನಾಶ್ (26) ಮತ್ತು ಜೇಸನ್ (24) ಎಂದು ಗುರುತಿಸಲಾಗಿದೆ. ಮರವೂರು ಸೇತುವೆಯ ಕಿಂಡಿ ಅಣೆಕಟ್ಟಿಗೆ ಈಜಲು ಇಳಿದ ಇವರಿಬ್ಬರು ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದೆ. ಮೃತರ ಹೆಚ್ಚಿನ ವಿವರ ಲಭ್ಯವಾಗಿಲ್ಲ. ಮೃತದೇಹಕ್ಕಾಗಿ ಶೋಧ ನಡೆದಿದೆ. ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರು ಕೆರೆಗೆ ಬಿದ್ದು ಯುವಕ ಮೃತ್ಯು-ಸಹೋದರ ಪಾರು

Friday, January 22nd, 2016
Mulleria Accident

ಮುಳ್ಳೇರಿಯಾ: ಕಾರೊಂದು ಕೆರೆಗೆ ಬಿದ್ದು ಸಹೋದರರ ಪೈಕಿ ಓರ್ವ ಮೃತಪಟ್ಟು ಮತ್ತೋರ್ವ ಅದೃಷ್ಟವಶಾತ್ ಪಾರಾದ ಘಟನೆ ಶುಕ್ರವಾರ ಬೆಳಿಗ್ಗೆ ಬೆಳ್ಳೂರು ಸಮೀಪದ ಬಜ ಎಂಬಲ್ಲಿ ನಡೆದಿದೆ. ಬಜ ಅಮರನಾಥ ರೈ ಯವರ ಪುತ್ರ ಸುಪ್ರೀತ್ ರೈ (33)ಮೃತಪಟ್ಟ ದುರ್ದೈವಿ.ಶುಕ್ರವಾರ ಬೆಳಿಗ್ಗೆ ಮನೆಯಂಗಳದಲ್ಲಿ ನಿಲ್ಲಿಸಲಾಗಿದ್ದ ಕಾರನ್ನು ಸಹೋದರ ಗುರು ಕಿರಣ ರೈ ಯನ್ನು ಕುಳ್ಳಿರಿಸಿ ಸ್ಟಾರ್ಟ್ ಮಾಡಿ ಮುಂದಕ್ಕೆ ಚಲಾಯಿಸುವಷ್ಟರಲ್ಲಿ ಅಂಗಳದಿಂದ 10ಮೀಟರ್ ದೂರದ ಕೆರೆಗೆ ಆಕಸ್ಮಿಕವಾಗಿ ಬಿದ್ದು ಅಪಘಾತ ನಡೆಯಿತು. ನೀರಲ್ಲಿ ಮುಳುಗಿದ ಕಾರನ್ನು ತಕ್ಷಣ ಸ್ಥಳೀಯರು […]