ಬಾರ್ ಹಾಗೂ ರೆಸ್ಟೋರೆಂಟ್: ರೂಫ್ ಟಾಪ್ ಬಂದ್ ಗೆ ಬಿಬಿಎಂಪಿ ನೋಟಿಸ್
Saturday, January 6th, 2018ಬೆಂಗಳೂರು: ಮುಂಬೈನಲ್ಲಿ ಕಳೆದ ವಾರ ಸಂಭವಿಸಿದ ಅಗ್ನಿ ಅನಾಹುತದ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಬೆಂಗಳೂರಿನಲ್ಲೂ ಬಾರ್ ಮತ್ತು ರೆಸ್ಟೋರೆಂಟ್ ಗಳ ಮೇಲೆ ದಾಳಿ ನಡೆಸಿ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಲು ಆರಂಭಿಸಿದ್ದಾರೆ. ಜಯನಗರ 4ನೇ ಹಂತದಲ್ಲಿರುವ ಕೇಕ್ವಾಲಾ ಸೇರಿದಂತೆ ಮೂರು ರೂಫ್ ಟಾಪ್ ಬಾರ್ ಗಳನ್ನು ಬಂದ್ ಮಾಡುವಂತೆ ಬಿಬಿಎಂಪಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಮುದ್ರಣ ಮಳಿಗೆಗಳ ಮೇಲೆ ದಾಳಿ ನಗರದ ಹಲವು ರೂಫ್ ಟಾಪ್ ಮಳಿಗೆಗಳಿಗೆ ಶುಕ್ರವಾರ(ಜ.05 )ರಂದು ಭೇಟಿ ನೀಡಿದ್ದ ಬಿಬಿಎಂಪಿ ಸದಸ್ಯರು ಹಾಗೂ ಅಧಿಕಾರಿಗಳು, […]