ಬೊಳುವಾರು ವಾಣಿಜ್ಯ ಮಳಿಗೆಯಲ್ಲಿ ಅಗ್ನಿ ಅವಘಡ

Thursday, October 15th, 2020
Boluvaru

ಪುತ್ತೂರು: ಉಪ್ಪಿನಂಗಡಿ ರಸ್ತೆಯ ಬೊಳುವಾರು ಏಕಮುಖ ರಸ್ತೆಯ ಬಳಿಯಲ್ಲಿ ವಾಣಿಜ್ಯ ಮಳಿಗೆಯಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ಗುರುವಾರ ನಸುಕಿನ ವೇಳೆ ನಡೆದಿದೆ. ಹೈವೇ ಪಟ್ರೋಲ್ ಪೊಲೀಸರ ಸಕಾಲಿಕ ಮಾಹಿತಿಯಿಂದ ಭಾರಿ ಅನಾಹುತ ತಪ್ಪಿದೆ. ಬೊಳುವಾರಿನಲ್ಲಿರುವ ಹ್ಯಾರಿಂಗ್ ಸ್ಟುಡಿಯೊ ಸೆಲೂನ್, ಡಿ.ಕೆ.ಮೊಬೈಲ್ ಮತ್ತು ತರಕಾರಿ ಅಂಗಡಿಗಳಿಗೆ ಬೆಂಕಿ ಹತ್ತಿಕೊಂಡಿತ್ತು. ಗಸ್ತು ನಿರತ ಹೈವೇ ಪಟ್ರೋಲ್ ಸಿಬ್ಬಂದಿಗಳ ಸಕಾಲಿಕ ಮಾಹಿತಿಯ ಮೂಲಕ ತಕ್ಷಣ ಅಗ್ನಿಶಾಮಕದಳದವರು ಆಗಮಿಸಿ ಸತತ ಮೂರುವರೆ ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಶಮನಗೊಳಿಸಿದ್ದಾರೆ. ಪುತ್ತೂರು- ಉಪ್ಪಿನಂಗಡಿ […]

ಚಿಲ್ಲರೆ ಸಮಸ್ಯೆ ಪರಿಹಾರಕ್ಕೆ ದೇರೇಬೈಲು ಶಾಖೆ ಮ್ಯಾನೇಜರ್‌ ತೋರಿಸಿರುವ ಸ್ಪಂದನೆ

Wednesday, November 16th, 2016
Note-solution

ಮಂಗಳೂರು: ಬ್ಯಾಂಕ್‌ನಲ್ಲಿ 500 ರೂ., 1,000 ರೂ. ನೋಟು ವಿನಿಮಯ ಸಂದರ್ಭ ಎದುರಾಗುವ ಚಿಲ್ಲರೆ ಸಮಸ್ಯೆ ಪರಿಹಾರಕ್ಕೆ ಪ್ರತಿಷ್ಠಿತ ಬ್ಯಾಂಕೊಂದರ ದೇರೇಬೈಲು ಶಾಖೆ ಮ್ಯಾನೇಜರ್‌ ತೋರಿಸಿರುವ ಸ್ಪಂದನೆ ಸಾರ್ವತ್ರಿಕ ಪ್ರಶಂಸೆಗೆ ಪಾತ್ರವಾಗಿದೆ. ಬ್ಯಾಂಕ್‌ಗೆ ಹಿರಿಯ ನಾಗರಿಕರೋರ್ವರು ಹಳೆ ನೋಟು ವಿನಿಮಯಕ್ಕೆ ಬಂದಿದ್ದರು. ಚಿಲ್ಲರೆ ಸಮಸ್ಯೆಯಿಂದ 2,000 ರೂ. ಹೊಸ ನೋಟು ನೀಡುವುದು ಅನಿವಾರ್ಯವಾಯಿತು. ಇದನ್ನು ಚಿಲ್ಲರೆ ಮಾಡಲು ಸಮಸ್ಯೆಯಾಗುತ್ತಿದ್ದೆ ಎಂದು ಮ್ಯಾನೇಜರ್‌ ಅವರಲ್ಲಿ ತೋಡಿಕೊಂಡಾಗ ತನ್ನಲ್ಲಿದ್ದ ವೈಯಕ್ತಿಕ ಚಿಲ್ಲರೆ ಹಣವನ್ನು ಅವರಿಗೆ ನೀಡಿದರು. ಇದೇ ರೀತಿ ಸಮಸ್ಯೆ […]