ಪಣಂಬೂರು ಬೀಚ್ ನಲ್ಲಿ ನೀರಾಟವಾಡುತ್ತಿದ್ದ ವಿದ್ಯಾರ್ಥಿ ನೀರುಪಾಲು

Monday, April 8th, 2013
Panamburu beach

ಮಂಗಳೂರು : ಪರೀಕ್ಷೆ ಬರೆಯಲೆಂದು ಚಿಕ್ಕಮಗಳೂರಿನಿಂದ ಮಂಗಳೂರಿಗೆ ಆಗಮಿಸಿದ ವಿದ್ಯಾರ್ಥಿಯೊಬ್ಬ ಪಣಂಬೂರು ಬೀಚ್ ನಲ್ಲಿ ನಿರಾಟವಾಡುತ್ತಿದ್ದ ವೇಳೆ ಸಮುದ್ರದ ಸೆಳೆತಕ್ಕೆ ಸಿಲುಕಿ ಮೃತಪಟ್ಟ ಘಟನೆ ರವಿವಾರ ಸಂಭವಿಸಿದೆ. ಮೃತ ದುರ್ದೈವಿ ಚಿಕ್ಕಮಂಗಳೂರಿನ ಅಕಾಶ್ ಕಡೂರ್ (17). ಚಿಕ್ಕಮಗಳೂರಿನಿಂದ ಮಂಗಳೂರಿಗೆ ಎಇಇಇ ಪರೀಕ್ಷೆ ಬರೆಯಲು ಚಿಕ್ಕಮಂಗಳೂರಿನ ನವೋದಯ ವಿದ್ಯಾಲಯದ ಸುಮಾರು 35 ಮಂದಿ ವಿದ್ಯಾರ್ಥಿಗಳು ಆಗಮಿಸಿದ್ದರು. ಪರೀಕ್ಷೆ ಮುಗಿದ ನಂತರ ಪಣಂಬೂರು ಬೀಚ್ ಗೆ ತೆರಳಿದ ವಿದ್ಯಾರ್ಥಿಗಳು ನೀರಿನಲ್ಲಿ ಆಡುತ್ತಿದ್ದು ಅಕಾಶ್ ಅನಿರೀಕ್ಷಿತವಾಗಿ ಬಂದ ಸಮುದ್ರದ ಅಲೆಗೆ ಸಿಕ್ಕಿ ಸೆಳೆಯಲ್ಪಟ್ಟು […]