ಕಲ್ಲಾಪು: ಖಾಸಗಿ ಬಸ್ ಚಕ್ರದಡಿ ಸಿಲುಕಿ ಬೈಕ್ ಸವಾರ ಮೃತ್ಯು

Monday, November 6th, 2017
accident

ಮಂಗಳೂರು:ನಗರದ ಕಲ್ಲಾಪುವಿನಲ್ಲಿ ಖಾಸಗಿ ಬಸ್ ಚಕ್ರದಡಿ ಸಿಲುಕಿ ಬೈಕ್ ಸವಾರ ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ  ನಡೆದಿದೆ. ಉಳ್ಳಾಲ ಬೈಲ್ ನಿವಾಸಿ ಮಹಮ್ಮದ್ ಸಯ್ಯದ್ ಶಲೀಲ್ ಮೃತ ವಿದ್ಯಾರ್ಥಿ. ತುಂಬೆ ಬಿಎ ಕಾಲೇಜಿನ ಡಿಪ್ಲೋಮಾ ವಿದ್ಯಾರ್ಥಿಯಾದ ಈತ, ಮೊಬೈಲ್‌ನ ಇಯರ್ ಫೋನ್‌ನಲ್ಲಿ ಸಂಭಾಷಣೆ ಮಾಡುತ್ತ ಬೈಕ್ ಚಲಾಯಿಸುತ್ತಿದ್ದ ವೇಳೆ ಬೈಕ್ ಸ್ಕಿಡ್ ಆಗಿದೆ. ಈ ವೇಳೆ ಖಾಸಗಿ ಬಸ್‌ನ ಚಕ್ರದಡಿ ಸಿಲುಕಿ ಸ್ಥಳದಲ್ಲೇ ದಾರುಣವಾಗಿ ಸಾವಿಗೀಡಾಗಿದ್ದಾನೆ. ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ಗುರುಪುರ ಹೊಳೆಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು

Monday, March 4th, 2013
watery grave in Gurupur river

ಮಂಗಳೂರು : ಸ್ನೇಹಿತರ ಜೊತೆ ಗುರುಪುರ ಹೊಳೆಯ ಬಳಿಯ ಅದ್ಯಪಾಡಿ ಡ್ಯಾಂಗೆ ಈಜಲು ತೆರಳಿದ್ದ ವಿದ್ಯಾರ್ಥಿಯೊಬ್ಬ ನೀರಿನ ಸೆಳೆತಕ್ಕೆ ಸಿಲುಕಿ  ಮೃತ ಪಟ್ಟ ಘಟನೆ ಶನಿವಾರ ನಡೆದಿದೆ. ಮೃತಪಟ್ಟ ವಿದ್ಯಾರ್ಥಿ ನಗರದ ಎಸ್.ಡಿ.ಎಂ ಉದ್ಯಮಾಡಳಿತ ಕಾಲೇಜಿನ ಪ್ರಥಮ ವರ್ಷದ ಬಿಬಿಎಂ ವಿದ್ಯಾರ್ಥಿ ನಿಹಾಲ್ ಬಂಗೇರ(18) ಎನ್ನಲಾಗಿದೆ. ಈತ ಬೊಕ್ಕಪಟ್ಣದ ಕರ್ನಲ್‌ ಗಾರ್ಡನ್‌ ಕೇಶವ ಬಂಗೇರ ಮತ್ತು ರತ್ನ ಬಂಗೇರ ರ ಇಬ್ಬರು ಮಕ್ಕಳಲ್ಲಿ ಈತ ಹಿರಿಯವನಾಗಿದ್ದಾನೆ. ಶನಿವಾರ ಬೆಳಗ್ಗೆ ಆಂತರಿಕ ಮೌಲ್ಯಮಾಪನ ಪರೀಕ್ಷೆ ಮುಗಿದ ಬಳಿಕ ಮಧ್ಯಾಹ […]