ಕನ್ನಡ ನಾಡು, ನುಡಿ, ಜಲ ಸಂರಕ್ಷಣೆಗೆ ಕರವೇ ಮುಖಂಡ ಸಂತೋಷ ಸುಬ್ಬಣ್ಣವರ ಕರೆ
Monday, January 25th, 2021ಧಾರವಾಡ : ರಾಜ್ಯದ ನುಡಿ, ಜಲ ಸಂರಕ್ಷಣೆಗೆ ಧಾರವಾಡ ಜಿಲ್ಲಾದ್ಯಂತ ಕರ್ನಾಟಕ ರಕ್ಷಣಾ ವೇದಿಕೆ ( ಪ್ರವೀಣ ಶೆಟ್ಟಿ ಬಣ) ಯು ಸದಸ್ಯತ್ವ ಅಭಿಯಾನ ಆರಂಭಿಸಿದೆ ಎಂದು ಕರವೇ ಜಿಲ್ಲಾ ಮುಖಂಡ ಸಂತೋಷ ಸುಬ್ಬಣ್ಣವರ ತಿಳಿಸಿದ್ದಾರೆ. ಜಿಲ್ಲೆಯ ಕಲಘಟಗಿ, ಅಳ್ನಾವರ, ಅಣ್ಣಿಗೇರಿ, ನವಲಗುಂದ, ಕುಂದಗೋಳ, ಹುಬ್ಬಳ್ಳಿ ಹಾಗೂ ಧಾರವಾಡ ತಾಲೂಕಿನಾದ್ಯಂತ ನಮ್ಮ ಸಂಘಟನೆಯ ಕಾರ್ಯಕರ್ತರು ಸದಸ್ಯತ್ವ ಅಭಿಯಾನ ಆರಂಭಿಸಲಿದ್ದಾರೆ ಎಂದು ಸಂತೋಷ ಸುಬ್ಬಣ್ಣವರ ತಿಳಿಸಿದ್ದಾರೆ. ವರದಿ : ಶಂಭು ಹಬ್ಬಳ್ಳಿ