ಸಹಾಯ ಮಾಡುವ ನೆಪದಲ್ಲಿ ವೃದ್ಧೆಯೊಬ್ಬರ 4.32 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಎಗರಿಸಿದ ರಿಕ್ಷಾ ಚಾಲಕ

Wednesday, August 19th, 2020
gold ornament

ಮಂಗಳೂರು : ರಿಕ್ಷಾ ಚಾಲಕನೋರ್ವ ವೃದ್ಧೆಯೊಬ್ಬರ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಲಪಟಾಯಿಸಿ ಬುಧವಾರ ಪೋಲೀಸರ ಬಲೆಗೆ ಬಿದ್ದಿದ್ದಾನೆ. ಶಕ್ತಿನಗರ ನಿವಾಸಿ ಪ್ರವೀಣ್ ರಾಮನಾಯ್ಕಿ (40) ಬಂಧಿತ ಆರೋಪಿ. ಚಿಲಿಂಬಿಯ ಸಮೀಪ ವೃದ್ಧೆಯೊಬ್ಬರಿಗೆ ಸಹಾಯ ಮಾಡುವ ನೆಪದಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಆರೋಪದಲ್ಲಿ  ಉರ್ವ ಪೊಲೀಸರು ಬುಧವಾರ ಆತನನ್ನು ಬಂಧಿಸಿದ್ದಾರೆ. ಜೂ.7ರಂದು ಚಿಲಿಂಬಿಯ ದೇವಸ್ಥಾನವೊಂದರ ಬಳಿ 72 ವರ್ಷದ ವೃದ್ಧೆಗೆ ಸಹಾಯ ಮಾಡುವ ನೆಪದಲ್ಲಿ ಈತ ಚಿನ್ನಾಭರಣ ಕಳವುಗೈದು ಪರಾರಿಯಾಗಿದ್ದ ಎಂದು ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣವನ್ನು ಭೇದಿಸಿದ ಪೊಲೀಸರು, ಆರೋಪಿಯನ್ನು ಬಂಧಿಸಿ […]

ಮದುವೆಯ ಸಹಾಯರ್ಥವಾಗಿ ಕಾಮಾಜೆ ಯುವಕ ಸಂಘದ ವತಿಯಿಂದ ರೂ 5 ಸಾವಿರ ನಗದು

Wednesday, June 11th, 2014
Kammaje yuvaka Mandala

ಬಂಟ್ವಾಳ: ಕಾಮಾಜೆಯ ಶಾಂತ ಅವರ ಮಗಳು ಶುಭಾ ಅವರ ಮಗಳ ಮದುವೆಯ ಸಹಾಯರ್ಥವಾಗಿ ಕಾಮಾಜೆ ಯುವಕ ಸಂಘದ ವತಿಯಿಂದ ರೂ 5 ಸಾವಿರ ನಗದು ನೀಡಲಾಯಿತು. ಸಂಘದ ಅಧ್ಯಕ್ಷ ಬಾಸ್ಕರ್ ಟೈಲರ್, ಉಪಾಧ್ಯಕ್ಷ ವಿನೋದ್ ಕಾಮಾಜೆ , ಕಾರ್ಯದರ್ಶಿ ಉಮೇಶ್ ಕುಲಾಲ್ ಮತ್ತು ಸಂಘದ ಪದಾಧಿಕಾರಿಗಳು ಹಾಜರಿದ್ದರು. ನವೂದಯ ಯುವಕ ಸಂಘದ 2014-15ನೇ ಸಾಲಿನ ಅಧ್ಯಕ್ಷರಾಗಿ ಬಾಸ್ಕರ್ ಟೈಲರ್ ಕಾಮಾಜೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ವಿನೋದ್ ಕಾಮಾಜೆ, ಕಾರ್ಯದರ್ಶಿಯಾಗಿ ಉಮೇಶ್ ಕುಲಾಲ್ ಮೈರಾನ್ಪಾದೆ, ಜತೆ ಕಾರ್ಯದರ್ಶಿಗಳಾಗಿ ರತೀಶ್ ಭಂಡಾರಿ […]