ಬಾವರವರ ಫ್ಲೆಕ್ಸ್ ಹರಿದು ಹಾಕಿರುವ ಕಿಡಿಗೇಡಿಗಳ ವಿರುದ್ಧ ಪೊಲೀಸರಿಗೆ ದೂರು

Saturday, October 14th, 2017
Mohayuddin bhava

ಮಂಗಳೂರು: ಶಾಸಕ ಮೊಹಯುದ್ದೀನ್‌ ಬಾವರವರ ಫ್ಲೆಕ್ಸ್ (ಬ್ಯಾನರ್) ಹರಿದು ಹಾಕಿರುವ ಕಿಡಿಗೇಡಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ. ಕಾಂಕ್ರೀಟ್ ರಸ್ತೆಗೆ 12 ಕೋಟಿ ರೂ. ವೆಚ್ಚದಲ್ಲಿ ನಡೆಯುವ ಕಾಮಗಾರಿಗೆ ಶಾಸಕರ ವಿಶೇಷ ಮುತವರ್ಜಿಯಿಂದ ಪಡೆದ ಅನುದಾನದಲ್ಲಿ ನಡೆಯುವ ರಸ್ತೆ ಅಭಿವೃದ್ಧಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸ್ಥಳೀಯ ನಾಗರಿಕರು ಹಾಗೂ ಶಾಸಕರ ಅಭಿಮಾನಿಗಳು, ಕೈಗಾರಿಕೋದ್ಯಮಿಗಳು ಮೊಹಯುದ್ದೀನ್‌ ಬಾವರವರಿಗೆ ಅಭಿನಂದನೆ ಸಲ್ಲಿಸಿ ಫ್ಲೆಕ್ಸ್‌ ಹಾಕಿದ್ದರು. ಆದರೆ ಕಿಡಿಗೇಡಿಗಳು 4 ಫ್ಲೆಕ್ಸ್ ಬೋರ್ಡ್‌ಗಳನ್ನು ಹರಿದು ಹಾಕಿದ್ದಲ್ಲದೇ, ಪದೇಪದೇ ಬ್ಯಾನರ್ ಹರಿದು ಹಾಕಿದ್ದಾರೆ. ಈ […]

ಪಣಂಬೂರು : ಪ್ರವಾಸಿಗರನ್ನು ರಕ್ಷಿಸಿದ ಜೀವ ರಕ್ಷಕ ಪಡೆಯ ಸಿಬ್ಬಂದಿ .

Monday, October 2nd, 2017
panamburu

ಮಂಗಳೂರು: ಪಣಂಬೂರು ಬೀಚ್‌ನಲ್ಲಿ ನೀರಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರನ್ನು ಬೀಚ್‌ನಲ್ಲಿರುವ ಜೀವ ರಕ್ಷಕ ಪಡೆಯ ಸಿಬ್ಬಂದಿ ರಕ್ಷಿಸಿದ್ದಾರೆ. ಬೆಂಗಳೂರು ದಾಸರ ಹಳ್ಳಿಯ 8ನೇ ಕ್ರಾಸ್‌ನ ಮೆಕ್ಯಾನಿಕ್‌ಗಳಾದ ಸಾದಿಕ್ (21), ನರಸಿಂಹ ಮೂರ್ತಿ (19) ಎಂಬುವವರನ್ನು ರಕ್ಷಣೆ ಮಾಡಲಾಗಿದೆ . ಬೆಂಗಳೂರಿನ ದಾಸರಹಳ್ಳಿಯ 8 ನೇ ಕ್ರಾಸ್‌ ನಿವಾಸಿಗಳಾದ ಇವರು ಮಂಗಳೂರಿಗೆ ಪ್ರವಾಸಕ್ಕಾಗಿ ಬಂದಿದ್ದರು.