ರಕ್ಷಾಬಂಧನ ಸ್ತ್ರೀಯು ಪುರುಷನಿಗೆ ಕಟ್ಟುವುವುದರಲ್ಲಿ ಶ್ರೇಷ್ಠವಿದೆ : ಸಂಗೀತಾ ಪ್ರಭು

Monday, August 7th, 2017
Rakshbandhana

ಮಂಗಳೂರು: ನಗರದ ಬೋಳೂರಿನ ಪ್ರಭು ನಿವಾಸ ಕಂಪೌಂಡ್ ನಲ್ಲಿನ ಸೇವಾಕೇಂದ್ರದಲ್ಲಿ ಪತ್ರಕರ್ತರಿಗೆ ಸೇರಿದಂತೆ ಧರ್ಮಪ್ರೇಮಿಗಳನ್ನು ಒಟ್ಟುಸೇರಿಸಿ ಶಾಸ್ತ್ರೋಕ್ತವಾಗಿ ರಾಖಿ ಕಟ್ಟಲಾಯಿತು. ಸನಾತನ ಸಂಸ್ಥೆಯ ವಕ್ತಾರರಾದ ಸೌ. ಸಂಗೀತಾ ಪ್ರಭು ಇವರು ರಕ್ಷಾಬಂಧನದ ಮಹತ್ವದ ಕುರಿತಾಗಿ ಮಾತನಾಡುತ್ತಾ, ಶ್ರಾವಣ ಮಾಸದ ಹುಣ್ಣಿಮೆಯ ದಿನ ಸೋದರನಿಗೆ ಸೋದರಿಯು ರಕ್ಷೆಯನ್ನು ಕಟ್ಟುವುದಕ್ಕೆ ರಕ್ಷಾಬಂಧನ ಎಂದು ಹೇಳುತ್ತಾರೆ, ‘ಪಾತಾಳದಲ್ಲಿನ ಬಲಿರಾಜನ ಕೈಗೆ ಲಕ್ಷ್ಮೀಯು ರಾಖಿಯನ್ನು ಕಟ್ಟಿ ಅವನನ್ನು ತನ್ನ ಸಹೋದರನನ್ನಾಗಿ ಮಾಡಿಕೊಂಡು ನಾರಾಯಣನನ್ನು ಮುಕ್ತಗೊಳಿಸಿದಳು. ಆ ದಿನ ಶ್ರಾವಣ ಹುಣ್ಣಿಮೆ ಇತ್ತು.’ ರಾಖಿಯನ್ನು […]