ರೈಲಿನಡಿಗೆ ಬಿದ್ದು ಅಮೆಮಾರ್ ನಿವಾಸಿ ಮೃತ್ಯು

Friday, June 22nd, 2018
farangipete

ಮಂಗಳೂರು: ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ರೈಲಿನಡಿಗೆ ಬಿದ್ದು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಪುದು ಗ್ರಾಮದ ಅಮೆಮಾರ್ ಎಂಬಲ್ಲಿ ಇಂದು ಮುಂಜಾನೆ ನಡೆದಿದೆ. ಮೃತರನ್ನು ಅಮೆಮಾರಿನ ನಿವಾಸಿ ಫಾರೂಕ್(45) ಎಂದು ಗುರುತಿಸಲಾಗಿದೆ. ಫಾರೂಕ್ ಅವರು ಮಂಗಳೂರು ಬಂದರಿನ ಧಕ್ಕೆಯಲ್ಲಿ ಉದ್ಯೋಗಿಯಾಗಿದ್ದು, ಇಂದು ಮುಂಜಾನೆ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಹಳಿ ದಾಟುತ್ತಿದ್ದ ವೇಳೆ ಆಕಸ್ಮಿಕವಾಗಿ ರೈಲಿನಡಿಗೆ ಬಿದ್ದು ಮೃತಪಟ್ಟಿರಬೇಕೆಂದು ಶಂಕಿಸಲಾಗಿದೆ. ಬಳಿಕ ಇದೇ ದಾರಿಯಲ್ಲಿ ಹೋಗುವವರು ಇವರನ್ನು ಕಂಡು ಆಸ್ಪತ್ರೆಗೆ ಸಾಗಿಸಿದರೂ ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು. […]

ಶಾಸಕದ್ವಯರ ಮಧ್ಯೆ ಕಿತ್ತಾಟ ತಂದಿಟ್ಟ ಹಾಸ್ಯ ಚಟಾಕಿ!

Friday, March 2nd, 2018
mohiuddin-bava

ಮಂಗಳೂರು: ತಾರಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಾಸಕರು ಸಿಡಿಸಿದ ಹಾಸ್ಯ ಚಟಾಕಿಯೊಂದು ಗಂಭೀರ ರೂಪ ತಾಳಿ ಶಾಸಕದ್ವಯರಾದ ಅಭಯಚಂದ್ರ ಜೈನ್ ಹಾಗೂ ಮೊಯ್ದಿನ್ ಬಾವ ನಡುವೆ ತಳ್ಳಾಟ, ಚೀರಾಟ ನಡೆಯಿತು. ಪಿಲಿಕುಳದಲ್ಲಿ ತಾರಾಲಯ ವೀಕ್ಷಣೆಗೂ ಮುನ್ನ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎಂ.ಆರ್. ಸೀತಾರಾಂ ಅವರನ್ನು ಮಾತಿಗೆಳೆದ ಶಾಸಕ ಮೊಯ್ದಿನ್ ಬಾವ, ಮೇಯರ್ ಕವಿತಾ ಅವರ ಅಧಿಕಾರವಧಿ ಮುಗಿಯುತ್ತಾ ಬಂತು ಎಂದರು. ಅದಕ್ಕೆ ಪ್ರತಿಯಾಗಿ ಸಚಿವರು, ಹಾಗಂತ ಅವರನ್ನು ಸುಮ್ಮನೆ ಇರಲು ಬಿಡಬೇಡಿ. ಏನಾದರೂ ಅವಕಾಶ ಕಲ್ಪಿಸಿಕೊಡಿ. ನಾವೆಲ್ಲಾ […]