ನಳಿನ್ ರಾಜಕೀಯ ಆಟಕ್ಕೆ ಜನರಿಂದ ಅಂತಿಮ ಮೊಳೆ: ಸಿಪಿಐ ಮುಖಂಡ ವಿ.ಕುಕ್ಯಾನ್
Monday, October 29th, 2018ಮಂಗಳೂರು: ಮಂಗಳೂರಿನ ಸುರತ್ಕಲ್ ಎಂಐಟಿಕೆ ಟೋಲ್ ಗೇಟ್ ಮುಚ್ಚುವಂತೆ ಆಗ್ರಹಿಸಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಏಳನೇ ದಿನಕ್ಕೆ ಕಾಲಿಟ್ಟಿದೆ. ಇಂದಿನ ಧರಣಿಯಲ್ಲಿ ಭಾಗಿಯಾಗಿದ್ದ ಸಿಪಿಐ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ವಿ. ಕುಕ್ಯಾನ್ ಅವರು ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಕಿಡಿಕಾರಿದ್ದಾರೆ. ಮೊದಲು ಅವರ ಅನೈತಿಕ ರಾಜಕಾರಣದ ಕೂಸಾಗಿರುವ ಸುರತ್ಕಲ್ ಟೋಲ್ ಗೇಟ್ ಗೆ ಬೆಂಕಿಹಚ್ಚಲಿ. ಜನತೆಯ ಬದುಕಿನ ನೆಮ್ಮದಿಗೆ ಬೆಂಕಿ ಹಚ್ಚುವ ರಾಜಕಾರಣವನ್ನು ಇನ್ನಾದರು ಕೈಬಿಡಲಿ. ಇಲ್ಲದಿದ್ದಲ್ಲಿ ಈ ಬಾರಿ ನಳಿನ್ ರ ರಾಜಕೀಯ […]