ಉದ್ಯೋಗ ಕೊಡಿಸುವುದಾಗಿ ನಂಬಿಸಿ 3೦ ಲಕ್ಷ ರೂ. ಪಲಾಯನ ಮಾಡಿದ ದಂಪತಿ

Saturday, September 14th, 2019
hiriyadka

ಉಡುಪಿ : ಉದ್ಯೋಗ ಕೊಡಿಸುವುದಾಗಿ ನಂಬಿಸಿ 3೦ ಲಕ್ಷ ರೂಪಾಯಿ ವಂಚಿಸಿ ಬಜಪೆಯ ಆಸೀಫ್ ಇಸ್ಮಾಯಿಲ್, ಆತನ ಪತ್ನಿ ಫರ್ವಿನ್ ಹಾಗೂ ತಂದೆ ಇಸ್ಮಾಯಿಲ್ ವಿದೇಶಕ್ಕೆ ಪರಾರಿಯಾದ ಘಟನೆ ನಡೆದಿದೆ. ಆತ್ರಾಡಿಯ ಜುಬೇದಾ ಎಂಬಾಕೆಯ ಮಗ ಫರಾನ್ ‌ಗೆ ವಿದೇಶದಲ್ಲಿ ಕೆಲಸ ಕೊಡಿಸಿದ್ದು, ಇದಕ್ಕಾಗಿ ಜುಬೇದಾರವರು ವೀಸಾಕ್ಕೆ 5 ಲಕ್ಷ ರೂಪಾಯಿಯನ್ನು ಆರೋಪಿಗಳಿಗೆ ನೀಡಿದ್ದರು. ಫರಾನ್, ಸೌದಿಯಲ್ಲಿ ಪ್ರಕರಣದ ಪ್ರಮುಖ ಆರೋಪಿ ಆಸೀಫ್ ಇಸ್ಮಾಯಿಲ್‌ನೊಂದಿಗೆ 10 ತಿಂಗಳ ಕಾಲ ಕೆಲಸ ಮಾಡಿದ್ದು, ಆಗ ಯಾವುದೇ ಸಂಬಳ ನೀಡಲಾಗಿಲ್ಲ. ಅಲ್ಲದೆ […]

ಕಲಿಗಾಲದಲ್ಲೂ ಕೊರಗಜ್ಜನ ಪವಾಡ..ಮರಳಿ ಬಂತು ಕದ್ದ ವಿಗ್ರಹ!

Wednesday, August 15th, 2018
koragajja

ಉಡುಪಿ: ಕೊರಗಜ್ಜ ಇದು ಕರಾವಳಿಗರ ಆರಾಧ್ಯ ದೈವ. ಕಲಿಗಾಲದಲ್ಲೂ ಕೊರಗಜ್ಜನ ಪವಾಡ ಮೇಲಿಂದ ಮೇಲೆ ಸಾಬೀತಾಗುತ್ತಿರುವುದರಿಂದ ಈ ದೈವದ ಮೇಲಿನ ನಂಬುಗೆ ಮತ್ತಷ್ಟು ದೃಢವಾಗುತ್ತಾ ಬಂದಿದೆ. ಅಂತಹ ಕೊರಗಜ್ಜನನ್ನೇ ಕದ್ದವರ ಕಥೆ ಏನಾಯ್ತು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ. ನೋಶಿವಾಂಶ ಸಂಭೂತ ಕೊರಗಜ್ಜ ಎನ್ನುವುದು ಕರಾವಳಿಗರ ಇಷ್ಟ ದೈವ. ಏನೇ ಕಷ್ಟ ಬರಲಿ ಮನೆಯ ಸ್ವತ್ತು ಕಳ್ಳತನವಾಗಲಿ, ಮಕ್ಕಳಿಗೆ ಕಾಯಿಲೆ ಬಾಧಿಸಲಿ ಕೊರಗಜ್ಜನಿಗೊಂದು ವೀಳ್ಯದೆಲೆಯ ಹರಕೆ ಹೊತ್ತರೆ ಸಾಕು, ಕ್ಷಣಮಾತ್ರದಲ್ಲಿ ಸಮಸ್ಯೆ ಬಗೆಹರಿಯುತ್ತೆ ಅನ್ನೋದು ಇಲ್ಲಿಯವರ ನಂಬಿಕೆ. […]

ಹಿರಿಯಡ್ಕದಲ್ಲಿ ರೌಡಿ ಶೀಟರ್ ಪ್ರವೀಣ್ ಕುಲಾಲ್ ವರ್ವಾಡಿಯ ಬರ್ಬರ ಹತ್ಯೆ

Tuesday, December 20th, 2016
Praveen Kulal

ಉಡುಪಿ: ಇಲ್ಲಿನ ಹಿರಿಯಡ್ಕದಲ್ಲಿ ರೌಡಿ ಶೀಟರ್ ಪ್ರವೀಣ್ ಕುಲಾಲ್ ವರ್ವಾಡಿ ಎಂಬಾತನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಪ್ರವೀಣ್‌‌ನನ್ನು ಮೂವರು ದುಷ್ಕರ್ಮಿಗಳು ತಲವಾರು, ಕತ್ತಿಯಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಇಂದು ಮಧ್ಯಾಹ್ನ ಸುಮಾರು 12ರ ಸಮಯದಲ್ಲಿ ಹಿರಿಯಡ್ಕದ ದಿಯಾ ಗಾರ್ಡನ್ ಎಂಬ ಬಾರ್‌‌ಗೆ ಪ್ರವೀಣ್ ಬಂದಿದ್ದ. ಅದೇ ಸಮಯದಲ್ಲಿ ಅಲ್ಲಿಗೆ ಒಬ್ಬ ವ್ಯಕ್ತಿ ಆಗಮಿಸಿದ್ದು, ಪರಸ್ಪರ ಮಾತು ಬೆಳೆದಿದೆ. ಈ ಸಂದರ್ಭದಲ್ಲಿ ಅವರಿಬ್ಬರ ಮಧ್ಯೆ ಜಗಳ ಆರಂಭವಾಗಿದೆ. ತಕ್ಷಣ ಬಾರಿನ ಮಾಲೀಕ ಅವರನ್ನು ಹೊರಗೆ […]