ತೂಮಿನಾಡು: ಲೀಗ್ ನಿಂದ ಸುಮಾರು 40 ರಷ್ಟು ಯುವಕರು ಸಿಪಿಎಂ ಗೆ ಸೇರ್ಪಡೆ

Tuesday, April 12th, 2016
Muslim Leeg

ಮಂಜೇಶ್ವರ : ಮುಸ್ಲಿಂ ಲೀಗ್ ನಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದ ತೂಮಿನಾಡು ಹಾಗೂ ಕುಂಜತ್ತೂರು ಪರಿಸರದ ಸುಮಾರು 40 ರಷ್ಟು ಯುವಕರು ಲೀಗ್ ನಲ್ಲಿ ಬೇಸೆತ್ತು ಸಿಪಿಎಂ ಗೆ ಸೇರ್ಪಡೆಗೊಂಡ ಘಟನೆ ನಡೆದಿದೆ. ಸಕ್ರಿಯವಾಗಿ ಕಾರ್ಯಕರ್ತರಾಗಿದ್ದ ನಮ್ಮ ಯಾವೊಂದು ಬೇಡಿಕೆಯನ್ನು ಕೂಡಾ ಮುಸ್ಲಿಂ ಲೀಗ್ ನೇತಾರರು ನೆರವೇರಿಸಿಲ್ಲವೆಂಬುದಾಗಿ ಸಿಪಿಎಂ ಗೆ ಸೇರ್ಪಡೆಗೊಂಡ ಯುವಕರ ಮುಖಂಡ ತೂಮಿನಾಡು ನಿವಾಸಿ ಮುನೀರ್ ಕೆ ಎ ತಿಳಿಸಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ವಿಧಾನ ಸಭಾ ಚುನಾವಣೆ ಸನ್ನಿಹಿತವಾಗಿರುವ ಹಿನ್ನೆಲೆಯಲ್ಲಿ ಎಡರಂಗದ ಅಭ್ಯರ್ಥಿ ಸಿ […]

ರೋಟರಿಯವರಿಂದ ಅಭಿನಂದನಾರ್ಹ ಸೇವೆ ಶ್ರೀ. ಯೋಗೀಶ್ ಭಟ್

Thursday, August 13th, 2015
Rotary Bejai

ಮಂಗಳೂರು : ದ.ಕ.ಜಿ.ಪಂ. ಹಿ.ಪ್ರಾ ಶಾಲೆ ಕಾಪಿಕಾಡು ಶಾಲೆಗೆ ಸಂಪೂರ್ಣ ಸುಣ್ಣ ಬಣ್ಣ ಬಳಿದು (ಪೈಂಟಿಂಗ್) ಶಾಲೆಯ ಸುತ್ತಮುತ್ತ ಬೆಳೆದಂತಹ ಹುಲ್ಲು ಮತ್ತು ಗಿಡಗಳನ್ನು ಕಡಿದು ಸ್ವಚ್ಛಗೊಳಿಸಿ ಶಾಲೆಯ ಅಂದವನ್ನು ಹೆಚ್ಚಿಸುವಲ್ಲಿ ಸುಮಾರು ರೂ. 1,50,000.00 ವರೆಗೆ ವೆಚ್ಛ ಮಾಡಿದ ಕುರಿತು ಸೇವೆಯನ್ನು ಗುರುತಿಸಿ ಶಾಲಾ ಅಭಿವೃದ್ಧಿ ಸಮಿತಿ ಹಾಗೂ ಶಿಕ್ಷಕರಿಂದ ರೋಟರಿ ಕ್ಲಬ್ ಆಫ್ ಮಂಗಳೂರು ಸೆಂಟ್ರಲ್‌ನ ಅಧ್ಯಕ್ಷರಾದ ಶ್ರೀ. ಇಲಿಯಾಸ್ ಸಾಂಟಿಸ್ ಇವರನ್ನು ಅಭಿನಂದಿಸಲಾಯಿತು. ಸಭೆಯ ಮುಖ್ಯ ಅತಿಥಿಯಾಗಿ ಮಾಜಿ ಶಾಸಕರಾದ ಶ್ರೀ. ಎನ್. […]