ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಗಾಂಧಿ ಅಭಿಯಾನ-150 ಜಾಥಾ

Tuesday, October 16th, 2018
gandhiji2

ಮಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮ ದಿನಾಚರಣೆಯ 150ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಗಾಂಧಿ ಅಭಿಯಾನ- 150 ಜಾಥಾ ಸೋಮವಾರ ಮಂಗಳೂರಿಗೆ ಆಗಮಿಸಿತು. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಏರ್ಪಟ್ಟ ಕಾರ್ಯಕ್ರಮದಲ್ಲಿ ಜಿಲ್ಲಾಡಳಿತದ ಪರವಾಗಿ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತರಾದ ಪ್ರಮೀಳಾ ಅವರು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಗಾಂಧೀಜಿಯವರ ಸಂದೇಶಗಳು ಸರ್ವಕಾಲಕ್ಕೂ ಸಲ್ಲುವಂತದ್ದಾಗಿದೆ. ಈ ನಿಟ್ಟಿನಲ್ಲಿ ಇದನ್ನು ನಿರಂತರವಾಗಿ ಪಾಲಿಸುತ್ತಾ ಬರಬೇಕು ಎಂದು ಹೇಳಿದರು. ದಕ್ಷಿಣ ಕನ್ನಡ […]

ಶಬರಿಮಲೆ ಕ್ಷೇತ್ರಕ್ಕೆ ಮಹಿಳೆಯರ ಪ್ರವೇಶ ಖಂಡಿಸಿ ಮಂಗಳೂರಿನಲ್ಲಿ ಶಬರಿಮಲೆ ಸಂರಕ್ಷಣಾ ಪಾದಯಾತ್ರೆ

Tuesday, October 16th, 2018
vadvyas-kamath

ಮಂಗಳೂರು: ಕೇರಳದ ತಿರುವನಂತಪುರದಲ್ಲಿ ಶಬರಿಮಲೆ ಕ್ಷೇತ್ರಕ್ಕೆ ಮಹಿಳೆಯರ ಪ್ರವೇಶ ಹಾಗೂ ಅಲ್ಲಿನ ಪಿಣರಾಯಿ ಸರಕಾರದ ಹಿಂದೂ ವಿರೋಧಿ ನೀತಿಯನ್ನು ಖಂಡಿಸಿ ಮಂಗಳೂರಿನಲ್ಲಿ ಶಬರಿಮಲೆ ಸಂರಕ್ಷಣಾ ಪಾದಯಾತ್ರೆ ನಡೆಯಿತು. ಕೇರಳ ರಾಜ್ಯ ಬಿಜೆಪಿ ಸಹಪ್ರಭಾರಿಯೂ, ದಕ್ಷಿಣ ಕನ್ನಡ ಲೋಕಸಭಾ ಸದಸ್ಯರೂ ಆದ ನಳಿನ್ ಕುಮಾರ್ ಕಟೀಲ್, ಶಾಸಕರುಗಳಾದ ಡಿ ವೇದವ್ಯಾಸ ಕಾಮತ್, ರಾಜೇಶ್ ನಾಯ್ಕ್, ಎಸ್ ಅಂಗಾರ, ಉಮಾನಾಥ ಕೋಟ್ಯಾನ್, ಸಂಜೀವ್ ಮಠಂದೂರು ಡಾ|ಭರತ್ ಶೆಟ್ಟಿ, ಹರೀಶ್ ಪೂಂಜಾ ಹಾಗೂ ಮತ್ತಿತ್ತರರು ಪಾದಯಾತ್ರೆಯಲ್ಲಿ ಭಾಗವಹಿಸಿದರು.

ಮನೆ ಮಂದಿಯನ್ನು ಕೊಲ್ಲಲು ಜಿಲೆಟಿನ್ ಕಡ್ಡಿಗಳನ್ನು ಇಟ್ಟು ಮನೆ ಸ್ಫೋಟಿಸಲು ಯತ್ನ

Tuesday, October 16th, 2018
mangaluru

ಮಂಗಳೂರು: ಮನೆ ಮಂದಿಯನ್ನು ಕೊಲ್ಲಲು ಜಿಲೆಟಿನ್ ಕಡ್ಡಿಗಳನ್ನು ಇಟ್ಟು ಮನೆ ಸ್ಫೋಟಿಸಲು ಯತ್ನಿಸಿದ ಘಟನೆ ಪುತ್ತೂರು ತಾಲೂಕಿನ ಕಬಕ ಪೋಳ್ಯ ಎಂಬಲ್ಲಿ ನಡೆದಿದೆ. ಮನೆ ಮಂದಿಯನ್ನು ಕೊಲ್ಲಲು ಜಿಲೆಟಿನ್ ಕಡ್ಡಿಗಳನ್ನು ಮನೆಯ ಸುತ್ತಲೂ ಇರಿಸಿ ಈ ದುಷ್ಕೃತ್ಯ ಎಸಗಲಾಗಿದೆ. ಕಬಕ ಪೋಳ್ಯದ ನಾರಾಯಣ ಪ್ರಸಾದ್ ಎಂಬವರ ಮನೆಯಲ್ಲಿ ಸೋಮವಾರ ತಡರಾತ್ರಿ ಈ ಘಟನೆ ನಡೆದಿದೆ. ಸ್ಫೋಟಕ ಸಿಡಿದು ನಾರಾಯಣ ಪ್ರಸಾದ್ ಅವರ ಪತ್ನಿ ಶಾಲಿನಿ ಅವರ ಕಾಲಿಗೆ ಗಾಯಗಳಾಗಿವೆ. ಮನೆಯ ಹೊರಭಾಗದ ನಾಲ್ಕು ಮೂಲೆಗಳಲ್ಲಿ ಬಂಡೆ ಒಡೆಯಲು […]

60 ತಾಸುಗಳ ಬಳಿಕ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಉಪವಾಸ ಅಂತ್ಯ

Tuesday, October 16th, 2018
subramanya

ಸುಬ್ರಹ್ಮಣ್ಯ: ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ 60 ತಾಸುಗಳ ಬಳಿಕ ಸೋಮವಾರ ಉಪವಾಸ ಅಂತ್ಯಗೊಳಿಸಿದ್ದಾರೆ. ಶ್ರೀ ನರಸಿಂಹ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಎಳನೀರು ಸೇವನೆ ಮೂಲಕ ಉಪವಾಸ ಕೊನೆಗೊಳಿಸಿದರು. ಉಡುಪಿಯ ಪೇಜಾವರ ಶ್ರೀಗಳು, ಸುತ್ತೂರು ಶ್ರೀಗಳು, ಮುಖ್ಯಮಂತ್ರಿ ಕುಮಾರಸ್ವಾಮಿ, ಸಚಿವ ಎಚ್‌.ಡಿ. ರೇವಣ್ಣ ದೂರವಾಣಿ ಕರೆ ಮಾಡಿ ದ್ದಲ್ಲದೇ, ಜಿಲ್ಲಾಡಳಿತ ಕೂಡ ಉಪವಾಸ ಕೈಬಿಡಲು ಕೋರಿತ್ತು. ಮಠದ ಪರಿವಾರವಲ್ಲದೇ, ಅನೇಕ ಮಂದಿ ಭಕ್ತರೂ ನನ್ನೊಂದಿಗೆ ಉಪವಾಸ ಮಾಡುವುದಾಗಿ ಹೇಳಿದ್ದರು. ನವರಾತ್ರಿಯ ಸಂದರ್ಭ ಯಾರಿಗೂ ನನ್ನಿಂದ […]

ಶ್ರೀ ದುರ್ಗಾ ಬಾಲಗೋಕುಲ ಪ್ರಥಮ ವಾರ್ಷಿಕೋತ್ಸವದಲ್ಲಿ, ಮನಸೂರೆಗೊಂಡ ಮಕ್ಕಳ ನೃತ್ಯ ವೈವಿದ್ಯ

Monday, October 15th, 2018
Sri Durga Balagokula

ಮಂಗಳೂರು : ಶ್ರೀ ದುರ್ಗಾ ಬಾಲಗೋಕುಲದ ಪ್ರಥಮ ವಾರ್ಷಿಕೋತ್ಸವದ ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮವನ್ನು ಶ್ರೀ ದುರ್ಗಾದೇವಿ ಕ್ಷೇತ್ರ ತೌಡುಗೋಳಿ ಇದರ ವಠಾರದಲ್ಲಿ ಬೆಳಗ್ಗೆ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಗೋವಿಂದ ಗುರುಸ್ವಾಮಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ವರ್ಕಾಡಿ ನೀರೋಳಿಕೆ ಶ್ರೀ ಮಾತಾ ಸೇವಾಶ್ರಮದ ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು, ಹರೀಶ್ ಕನ್ನಿಗುಳಿ, ನಾರಾಯಣ ಭಟ್ ಲಾಡ, ಶ್ರೀ ದುರ್ಗಾ ಬಾಲಗೋಕುಲದ ಅಧ್ಯಕ್ಷೆ ಪ್ರತಿಭಾ ದಿನೇಶ್, ಕಾರ‍್ಯದರ್ಶಿ ಶಿವರಾಜ್, ಉಪಾಧ್ಯಕ್ಷರಾದ ದಿನೇಶ್ ಗುರಿಕಾರ ಮರಿಕಾಪು, ಕೋಶಾಧಿಕಾರಿ ಮಮತಾ ತೌಡುಗೋಳಿ, […]

ಸ್ಮಿತಾ ಠಾಕ್ರೆ ಧರ್ಮಸ್ಥಳದಲ್ಲಿ

Monday, October 15th, 2018
Smitha Thakre

ಉಜಿರೆ: ಬಾಳಾ ಸಾಹೇಬ್ ಠಾಕ್ರೆಯವರ ಕುಟುಂಬದ ಸ್ಮಿತಾ ಠಾಕ್ರೆ ಭಾನುವಾರ ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಮಾಡಿ ಪೂಜೆ ಸಲ್ಲಿಸಿದರು. ಸ್ಮಿತಾ ಠಾಕ್ರೆಯವರ ಮಗ ಐಶ್ವರ್ಯ ಠಾಕ್ರೆ ಜೊತೆಗಿದ್ದರು. ಬಳಿಕ ಬೀಡಿನಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಗಾಂಧಿ- 150 ಅಭಿಯಾನಕ್ಕೆ ಮಂಗಳೂರಿನಲ್ಲಿ ಸ್ವಾಗತ

Monday, October 15th, 2018
gandhi 150

ಮಂಗಳೂರು : ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮ ದಿನಾಚರಣೆಯ 150ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಗಾಂಧಿ ಅಭಿಯಾನ- 150 ಜಾಥಾ ಸೋಮವಾರ ಮಂಗಳೂರಿಗೆ ಆಗಮಿಸಿತು. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಏರ್ಪಟ್ಟ ಕಾರ್ಯಕ್ರಮದಲ್ಲಿ ಜಿಲ್ಲಾಡಳಿತದ ಪರವಾಗಿ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತರಾದ ಪ್ರಮೀಳಾ ಅವರು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಗಾಂಧೀಜಿಯವರ ಸಂದೇಶಗಳು ಸರ್ವಕಾಲಕ್ಕೂ ಸಲ್ಲುವಂತದ್ದಾಗಿದೆ. ಈ ನಿಟ್ಟಿನಲ್ಲಿ ಇದನ್ನು ನಿರಂತರವಾಗಿ ಪಾಲಿಸುತ್ತಾ ಬರಬೇಕು ಎಂದು ಹೇಳಿದರು. ದಕ್ಷಿಣ […]

ಭಾಷೆ ಸಂವಹನೆಗೆ ಮಾತ್ರವಲ್ಲ ಅದು ಸಂಸ್ಕೃತಿಯನ್ನೂ ಪ್ರತಿಬಿಂಬಿಸುತ್ತದೆ: ವಸುಧೇಂದ್ರ

Saturday, October 13th, 2018
manglr

ಮಂಗಳೂರು: ಭಾಷೆಯನ್ನು ಕರಗತ ಮಾಡಿಕೊಂಡ ನಂತರ ಮನುಷ್ಯ ಬೇರೆ ಎಲ್ಲಾ ಪ್ರಾಣಿಗಳಿಗಿಂತ ಭಿನ್ನವಾಗಿ ವ್ಯವಹರಿಸಲು ತೊಡಗಿದ. ಭಾಷೆ ಸಂವಹನೆಗೆ ಮಾತ್ರವಲ್ಲ ಅದು ಸಂಸ್ಕೃತಿಯನ್ನೂ ಪ್ರತಿಬಿಂಬಿಸುತ್ತದೆ ಎಂದು ಖ್ಯಾತ ಬರಹಗಾರ, ಸಣ್ಣ ಕತೆಗಾರ ವಸುಧೇಂದ್ರ ಹೇಳಿದರು. ಮಂಗಳೂರು ವಿವಿಯ ಕನ್ನಡ ವಿಭಾಗ ಏರ್ಪಡಿಸಿದ ಭಾಷೆಯ ಬಗೆಗಿನ ವಿಶೇಷ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು, ಭಾಷೆ ಹೇಗೆ ಸಂಸ್ಕೃತಿಯ ಪ್ರತೀಕವಾಗುತ್ತದೆ ಎಂದು ತಮ್ಮ ಎವರೆಸ್ಟ್‌ ಕೃತಿ ಅನುವಾದ ಮಾಡುವಾಗಿನ ಅನುಭವವನ್ನು ವಿವರಿಸಿದರು. ಹಿಮಾಲಯ ಪರ್ವತಗಳಂತಹ ಎತ್ತರದ ಪರ್ವತಗಳಿಗೆ 4,000 […]

ಸ್ಯಾಂಡಲ್ ವುಡ್ ನಲ್ಲಿ ‘ಅಧಿಕ ಪ್ರಸಂಗಿ’ಯ ಆಟ ಶುರು

Saturday, October 13th, 2018
adika-prasangi-3

ಬೆಂಗಳೂರು: ಈ ಪ್ರಪಂಚದಲ್ಲಿ ಅಧಿಕ ಪ್ರಸಂಗಿಗಳಿಗೆ ಕೊರತೆಯಿಲ್ಲ. ನಿಮ್ಮ ಸುತ್ತಮುತ್ತ ಫ್ರೆಂಡ್ಸ್, ಸಂಬಂಧಿಗಳಲ್ಲಿ, ಮನೆಗಳಲ್ಲಿ ‘ಅಧಿಕ ಪ್ರಸಂಗಿ’ ಅಂತ ಒಬ್ರಾದ್ರೂ ಇದ್ದೇ ಇರ್ತಾರೆ. ಅಯ್ಯೋ ಇದೇನಪ್ಪಾ, ಅಧಿಕ ಪ್ರಸಂಗಿ ಬಗ್ಗೆ ಈಗ್ಯಾಕೆ ಮಾತು ಅಂತೀರಾ..! ಇದೇ ಶೀರ್ಷಿಕೆಯಡಿ ಒಂದು ಅದ್ಭುತ ಪ್ರಯೋಗಾತ್ಮಕ ಸಿನಿಮಾ ರೆಡಿಯಾಗ್ತಿದೆ. ‘ಅಧಿಕ ಪ್ರಸಂಗಿ’ ಅಂದ್ರೆನೆ ಒಂಥರ ವಿಚಿತ್ರ, ಅದರಲ್ಲೂ ಅದೇ ಬೇಸ್ ಮೇಲೆ ಇಂಥ ಸಿನಿಮಾ ಬರ್ತಾ ಇರೋದು ಮತ್ತೊಂದು ಇಂಟ್ರೆಸ್ಟಿಂಗ್ ಸುದ್ದಿ. ಚಿತ್ರದ ಮೊದಲ ಪೋಸ್ಟರ್ ನಲ್ಲಿಯೇ ‘ಅಧಿಕ ಪ್ರಸಂಗಿ’ ತನ್ನ […]

ಶ್ರೀ ಕ್ಷೇತ್ರ ಕದ್ರಿ ರಾಜಾಂಗಣದಲ್ಲಿ ‘ಅತಿಕಾಯ ಕಾಳಗ’ ತಾಳ ಮದ್ದಳೆ

Saturday, October 13th, 2018
kadri-temple

ಮಂಗಳೂರು: ಕಲ್ಕೂರ ಪ್ರತಿಷ್ಠಾನದ ವತಿಯಿಂದ ಶ್ರೀ ಕ್ಷೇತ್ರ ಕದ್ರಿ ರಾಜಾಂಗಣದಲ್ಲಿ ‘ಸಂಯಮಂ’ ಬಳಗದವರಿಂದ ’ಅತಿಕಾಯ ಕಾಳಗ’ ತಾಳ ಮದ್ದಳೆ ಜರಗಿತು. ಈ ಸಂದರ್ಭ ಸಂಯಮಂ ತಂಡದ ಹಿರಿಯ ಕಲಾವಿದ ಮಲ್ಪೆ ವಾಸುದೇವ ಸಾಮಗ ಅವರನ್ನು ನವರಾತ್ರಿಯ ಸಂಭ್ರಮದ ನಿಮಿತ್ತ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಸನ್ಮಾನಿಸಿದರು. ಈ ಸಂದರ್ಭ ಜನಾರ್ದನ ಹಂದೆ, ಕದಳಿ ಕಲಾ ಕೇಂದ್ರದ ಪ್ರಮುಖ ರಮೇಶ್ ಭಟ್‌ ಕದ್ರಿ, ಸಂಘಟಕ ಕೇಶವ ಹೆಗಡೆ, ಕದ್ರಿ ದೇವಳದ ವ್ಯವಸ್ಥಾಪನ ಸಮಿತಿಯ ಸದಸ್ಯ ಸುರೇಶ್‌ಕುಮಾರ್, […]