Blog Archive

ಯೆಯ್ಯಾಡಿ ಬಳಿ ಭೀಕರ ರಸ್ತೆ ಅಪಘಾತ ಇಬ್ಬರ ಸಾವು

Monday, February 18th, 2013
car hit to bike at Yeyyadi

ಮಂಗಳೂರು : ನಗರದ ಯೆಯ್ಯಡಿ ಕೊಂಚಾಡಿ ಖಾಸಗಿ ಶಾಲೆ ಬಳಿ ಶನಿವಾರ  ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವಕರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂಡುಶೆಡ್ಡೆ ಚಂದ್ರಹಾಸ್ ಮತ್ತು ಸುನಿತಾ ದಂಪತಿ ಪುತ್ರ ಯೋಗೀಶ್ (27) ಮತ್ತು ಕಲ್ಲಡ್ಕ ವೀರಕಂಭದ ಸೋಮಪ್ಪ ನಾಯಕ್ ಮತ್ತು ನೀಲಮ್ಮ ನಾಯಕ್ ಅವರ ಪುತ್ರ ಜಯಪ್ರಕಾಶ್ (23) ಮೃತಪಟ್ಟವರಾಗಿದ್ದಾರೆ. ಸ್ನೇಹಿತರಾದ ಇವರಿಬ್ಬರು ವೃತ್ತಿಯಲ್ಲಿ ಎಲೆಕ್ಟ್ರೀಶಿಯನ್‌ಗಳಾಗಿದ್ದು, ಸುರತ್ಕಲ್ ಬಳಿ ಕೆಲಸ ನಿರ್ವಹಿಸಿ ಸ್ಕೂಟರ್‌ನಲ್ಲಿ ವಾಪಸಾಗುತ್ತಿದ್ದು, ಯೆಯ್ನಾಡಿ ಪೆಟ್ರೋಲ್‌ ಪಂಪ್‌ ಬಳಿ ಜಯ ಪ್ರಕಾಶ್‌ ಮತ್ತು ಯೋಗೀಶ್‌ […]

ನಗರದ ಕುಂಟಿಕಾನ ಬಳಿ ರಸ್ತೆ ಅಪಘಾತ ಬೈಕ್‌ ಸವಾರನ ಸಾವು

Monday, January 7th, 2013
Jeep bike accident

ಮಂಗಳೂರು : ಕುಂಟಿಕಾನ ಎ.ಜೆ. ಆಸ್ಪತ್ರೆ ಬಳಿ ರವಿವಾರ ಜೀಪೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್‌ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೋರ್ವ ಗಾಯ ಗೊಂಡಿರುವ ಘಟನೆ ನಡೆದಿದೆ. ಮೃತ ವ್ಯಕ್ತಿ ಕೋಡಿಕಲ್ ಕಲ್ಪಣೆ ನಿವಾಸಿ ನಾರಾಯಣ ಎಂಬವರ ಪುತ್ರ ಕರುಣಾಕರ್ ಎಂಬುವವರಾಗಿದ್ದಾರೆ. ನಿನ್ನೆ ಸಂಜೆ ಕದ್ರಿಯಿಂದ ಕೋಡಿಕಲ್‌ನತ್ತ ಪಲ್ಸರ್ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಹಿಂದಿನಿಂದ ಬಂದ ಮಹೇಂದ್ರ ಜೀಪೊಂದು ಬೈಕ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್ ವಿರುದ್ಧ ದಿಕ್ಕಿಗೆ ತಿರುಗಿ ಡಿವೈಡರ್‌ಗೆ ಡಿಕ್ಕಿ […]

ಸುರತ್ಕಲ್ ಬಳಿ ಬಸ್ ಕಾರ್ ಡಿಕ್ಕಿ ಮೇಯರ್ ಗೆ ಗಾಯ

Saturday, December 29th, 2012
Mayor Gulzar Banu

ಮಂಗಳೂರು : ಮಂಗಳೂರಿನಿಂದ ಸುರತ್ಕಲ್ ಕಡೆಗೆ ಅತಿ ವೇಗವಾಗಿ ಸಾಗುತ್ತಿದ್ದ ಕೆ ಎಸ್ ಆರ್ ಟಿಸಿ ಬಸ್ ಮಹಾನಗರ ಪಾಲಿಕೆ ಗೆ ತೆರಳುತ್ತಿದ್ದ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಕಾರಿಗೆ ಶುಕ್ರವಾರ ಮಧ್ಯಾಹ್ನ ಡಿಕ್ಕಿ ಹೊಡೆದಿದ ಪರಿಣಾಮ ಮೇಯರ್ ಗಾಯಗೊಂಡಿರುವ ಘಟನೆ ನಡೆದಿದೆ. ಮೇಯರ್ ಗುಲ್ಜಾರ್ ಬಾನು ರವರು ಮನೆಯಿಂದ ಮಹಾನಗರ ಪಾಲಿಕೆಗೆ ಕಾರಿನಲ್ಲಿ ತೆರಳುತ್ತಿದ್ದು, ಸುರತ್ಕಲ್ ಜಂಕ್ಷನ್ ನಲ್ಲಿ ಮುಖ್ಯ ರಸ್ತೆಗೆ ಸಂಪರ್ಕ ಪಡೆಯಲು ಕಾರು ಚಾಲಕ ರಸ್ತೆ ಬದಿ ಕಾರು ನಿಲ್ಲಿಸಿದ್ದ ವೇಳೆ ಮಂಗಳೂರು […]

ಕಾಸರಗೋಡು ರಸ್ತೆ ಅಪಘಾತ ನಾಲ್ವರು ಮೃತ್ಯು

Thursday, December 27th, 2012
auto bus collision Kasargod

ಕಾಸರಗೋಡು : ಕಾಸರಗೋಡು ಜಿಲ್ಲೆಯ ಪಲ್ಲಿಕೆರೆ ಪೂಚಕ್ಕಾಡ್ ಎಂಬಲ್ಲಿ ಬುಧವಾರ ಮಧ್ಯಾಹ್ನ ಆಟೋ ರಿಕ್ಷಾವೊಂದಕ್ಕೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಆಟೋ ಚಾಲಕ ಅಜಾನೂರು ಕಡಪ್ಪುರ ನಿವಾಸಿ ರತೀಶ್ (25), ಮತ್ತು ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಅಂಕಿತ್(13), ಸಚಿನ್ (5), ಅಭಿಷೇಕ್ (4) ಎನ್ನಲಾಗಿದೆ. ಮದುವೆ ಕಾರ್ಯಕ್ರಮವೊಂದನ್ನು ಮುಗಿಸಿ ಹಿಂದಿರುಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾಕ್ಕೆ ಗುದ್ದಿದ ಪರಿಣಾಮ […]