ಪಣಂಬೂರು ಸಮೀಪ ಸಮುದ್ರ ತೀರದಲ್ಲಿ ಭಾರೀ ಪ್ರಮಾಣದಲ್ಲಿ ತೈಲ ತ್ಯಾಜ್ಯ ಪತ್ತೆ

Friday, May 13th, 2022
oil Waste

ಸುರತ್ಕಲ್ : ಪಣಂಬೂರು ಸಮೀಪದ ಸುರತ್ಕಲ್ ದೊಡ್ಡ ಕೊಪ್ಪಲು ಸಮುದ್ರ ತೀರದಲ್ಲಿ ಶುಕ್ರವಾರ ಬೆಳಗ್ಗೆ ಭಾರೀ ಪ್ರಮಾಣದಲ್ಲಿ ತೈಲ ತ್ಯಾಜ್ಯ ಹರಿದುಬಂದಿದೆ. ಸಮುದ್ರ ಮಾರ್ಗವಾಗಿ ಸಂಚರಿಸುವ ಹಡಗುಗಳು ಅದಲ್ಲಿರುವ ತ್ಯಾಜ್ಯವನ್ನು ಸಮುದ್ರದಲ್ಲಿ ಸುರಿದಿರುವ ಕುರಿತು ಶಂಕೆ ವ್ಯಕ್ತವಾಗಿದೆ. ಸಮುದ್ರದಲ್ಲಿ ಮುಳುಗಿರುವ ಹಡಗುಗಳಿಂದಲೂ ಇದು ಬಂದಿರುವ ಸಾಧ್ಯತೆ ಇದೆ. ಸುಮಾರು 2- 3 ಕಿ.ಮೀ. ವ್ಯಾಪ್ತಿಯ ಕಲಡ ಕಿನಾರೆಗೆ ತೈಲದ ಜಿಡ್ಡು ಅಪ್ಪಳಿಸುತ್ತಿದೆ. ಮಂಗಳೂರು ಬಂದರಿನಲ್ಲಿ ಲಂಗರು ಹಾಕುವ ಹಡಗುಗಳು ಬಂದರ್ ನಲ್ಲಿ ತ್ಯಾಜ್ಯ ವಿಲೇವಾರಿಗೆ ಶುಲ್ಕ ಪಾವತಿಸಬೇಕಿರುವ […]

ಸೋಮೇಶ್ವರ ಸಮುದ್ರ ತೀರದಲ್ಲಿ ಪ್ಲಾಸ್ಟಿಕ್ ಎಸೆದ ಯುವತಿಯರಿಗೆ ದಂಡ ಹಾಕಿದ ಪುರಸಭೆ

Sunday, November 21st, 2021
ಸೋಮೇಶ್ವರ ಸಮುದ್ರ ತೀರದಲ್ಲಿ ಪ್ಲಾಸ್ಟಿಕ್ ಎಸೆದ ಯುವತಿಯರಿಗೆ ದಂಡ ಹಾಕಿದ ಪುರಸಭೆ

ಮಂಗಳೂರು :  ಬೀಚ್ ಗೆ ಪ್ರವಾಸಕ್ಕೆ ಬಂದ  ಯುವತಿಯರಿಬ್ಬರು  ಸೋಮೇಶ್ವರ ಸಮುದ್ರ ತೀರದಲ್ಲಿ ಪ್ಲಾಸ್ಟಿಕ್ ಎಸೆದಕ್ಕೆ ರೂ. 500 ದಂಡ ವಿಧಿಸಿದ ಘಟನೆ ಭಾನುವಾರ ನಡೆದಿದೆ. ಪ್ರವಾಸಿಗರು  ಸಮುದ್ರ ತೀರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಹಾಕುವುದರಿಂದ ಸೋಮೇಶ್ವರ ಪುರಸಭೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ವಿವಿದ ಸಂಘ ಸಂಸ್ಥೆಗಳ ನೇತ್ರತ್ವದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಿ 1 ಟನ್ ನಷ್ಟು ಪ್ಲಾಸ್ಟಿಕ್ ಸಂಗ್ರಹಿಸಿದ್ದು, ಅಲ್ಲದೆ ಸ್ಥಳದಲ್ಲಿ ಪ್ಲಾಸ್ಟಿಕ್ ಹಾಕದಂತೆ ಎಚ್ಚರಿಸಿ ನಾಮಫಲಕವನ್ನು ಹಾಕಿದೆ. ಭಾನುವಾರ ಕಾರ್ಯಾಚರಣೆ ನಡೆಸಿದ ಪುರಸಭೆ […]

ಸುರತ್ಕಲ್‌ ಸಮುದ್ರ ತೀರದಲ್ಲಿ ಕೆಟ್ಟು ನಿಂತ ಡ್ರಜ್ಜರ್ ನಲ್ಲಿ ಕಾವಲುಗಾರನ ಶವ

Monday, April 5th, 2021
dredger

ಮಂಗಳೂರು : ಸುರತ್ಕಲ್‌ನ ಸಮುದ್ರ ತೀರದಲ್ಲಿ ಕೆಟ್ಟು ನಿಂತ ಡ್ರಜ್ಜರ್ ನಲ್ಲಿ ಕಾವಲುಗಾರನ ಶವ ಪತ್ತೆಯಾಗಿದೆ. ಸುರತ್ಕಲ್‌ನ ಗುಡ್ಡಗಾಡು ಕೊಪ್ಲ ಬಳಿಯ ಸಮುದ್ರದಲ್ಲಿ ಕೆಟ್ಟು ನಿಂತ ಡ್ರಜ್ಜರ್ ಭಗವತಿ ಪ್ರೇಮ್ ನಲ್ಲಿ ಶವ ಪತ್ತೆಯಾಗಿದೆ. ಈ ಡ್ರಜ್ಜರ್ ಒಡೆಯಲು ಕಂಪನಿಯೊಂದು ಗುತ್ತಿಗೆ ಪಡೆದಿದೆ. ಇದನ್ನು ನೋಡಿಕೊಳ್ಳಲು ಕಾವಲುಗಾರರನ್ನು ನೇಮಿಸಲಾಗಿತ್ತು. ಈ ಕಾವಲುಗಾರರಲ್ಲಿ ಉತ್ತರ ಕರ್ನಾಟಕ ಮೂಲದ ಶಂಕರ್ (32) ಎಂಬುವರು ರಾತ್ರಿ ಪಾಳಿ ಕೆಲಸ ಮಾಡುತ್ತಿದ್ದರು. ಆದರೆ, ಇಂದು ಬೆಳಗ್ಗೆ ಡ್ರಜ್ಜರ್ನಲ್ಲಿ ಅವರ ಶವ ಪತ್ತೆಯಾಗಿದೆ. ಈ ಸಂಬಂಧ ಸುರತ್ಕಲ್ ಠಾಣಾ […]

ಸಮುದ್ರ ತೀರಕ್ಕೆ ತೇಲಿ ಬಂದ ಕ್ಷಿಪಣಿ ಮಾದರಿಯ ವಸ್ತು

Tuesday, September 22nd, 2020
misile

ಬೈಂದೂರು: ಶಿರೂರು ಕರಾವಳಿ ಸಮುದ್ರ ತೀರದಲ್ಲಿ ಕ್ಷಿಪಣಿ ಮಾದರಿಯ ವಸ್ತುವೊಂದು ಮಂಗಳವಾರ ಮುಂಜಾನೆ ತೇಲಿ ಬಂದಿದೆ. ಸುಮಾರು 10ರಿಂದ 15 ಅಡಿ ಉದ್ದದ ಕೆಂಪು ಬಣ್ಣದ ವಸ್ತು ಇದಾಗಿದ್ದು, ಕಬ್ಬಿಣದಿಂದ ತಯಾರಿಸಲಾಗಿದೆ. ಸ್ಥಳೀಯರಿಗೆ ಈ ಕ್ಷಿಪಣಿ ಮಾದರಿಯ ವಸ್ತು ಕುತೂಹಲಕ್ಕೆ ಕಾರಣವಾಗಿದೆ. ಕರಾವಳಿ ಮೀಸಲು ಪಡೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸುತ್ತಿದ್ದಾರೆ.