Blog Archive

ವಿದ್ವತ್ ಮೇಲೆ ಹಲ್ಲೆ ಪ್ರಕರಣ: 3ನೇ‌ ಆರೋಪಿ ಶ್ರೀಕೃಷ್ಣನಿಂದ ವಿದ್ವತ್​ಗೆ ನಿರಂತರ ಕರೆ?

Thursday, November 22nd, 2018
nalapad

ಬೆಂಗಳೂರು: ವಿದ್ವತ್ ಮೇಲೆ ನಲಪಾಡ್ ಗ್ಯಾಂಗ್ ಯುಬಿ ಸಿಟಿಯಲ್ಲಿ ನಡೆಸಿದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಮೂರನೇ ಆರೋಪಿ ಶ್ರೀಕೃಷ್ಣ ಪ್ರಕರಣದಲ್ಲಿ ರಾಜಿ ಮಾಡಿಕೋ ಎಂದು ಪದೇ ಪದೆ ವಿದ್ವತ್ಗೆ ಕರೆ ಮಾಡುತ್ತಿದ್ದಾನೆಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಇದರಿಂದ ವಿದ್ವತ್ ತನಗೆ ಜೀವ ಬೆದರಿಕೆ ಇದೆ ಎಂದು ಸಿಸಿಬಿ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿ ದೂರು ನೀಡಿದ್ದಾನೆ. ಈ ಹಿನ್ನೆಲೆ ವಿದ್ವತ್ಗೆ ಭದ್ರತೆ ನೀಡುವಂತೆ ಸಂಜಯ್ ನಗರ ಪೊಲೀಸರಿಗೆ ಸಿಸಿಬಿ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ. ಜೊತೆಗೆ ಆರೋಪಿ […]

ಜೂಜಾಟ ಆಡುತ್ತಿದ್ದ 13 ಮಂದಿ ಸಿಸಿಬಿ ಪೊಲೀಸರ ವಶಕ್ಕೆ

Wednesday, October 31st, 2018
police

ಮಂಗಳೂರು: ನಗರದ ಕೂಳೂರು ಎಂಬಲ್ಲಿ ಅಂದರ್ ಬಾಹರ್ ಜೂಜಾಟ ಆಡುತ್ತಿದ್ದ 13 ಮಂದಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನಿತ್ಯಾನಂದ ಶೆಟ್ಟಿ, ಸುಜಯ್ ಎಸ್ ಶೆಟ್ಟಿ, ಲ್ಯಾನ್ಸಿ ಡಿಸೋಜ, ಕಾರ್ತಿಕ್ ದಿನೇಶ್ ಅಂಚನ್, ರಘು ಎನ್ ಕೆ, ಅವಿನಾಶ್, ಮಹೇಶ್ ಕುಮಾರ್ ಶೆಟ್ಟಿ, ದೀಕ್ಷಿತ್ ಕುಮಾರ್, ಗಣೇಶ್ ಕುಮಾರ್, ದೀಪಕ್ ಶೆಟ್ಟಿ, ಮುಹಮ್ಮದ್ ಮುಸ್ತಫಾ, ಕೌಶಿಕ್ ಗೌಡ, ಮುಹಮ್ಮದ್ ಹನೀಫ್ ಬಂಧಿತ ಆರೋಪಿಗಳು. ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೂಳೂರು ಎಂಬಲ್ಲಿ ಜೂಜಾಟ ಆಡಲಾಗುತ್ತಿದೆ ಎಂಬ ಖಚಿತ […]

ಆಯುಧ ಪೂಜೆ ಮಾಡಿ ಸಂಕಷ್ಟಕ್ಕೆ ಸಿಲುಕಿದ ಮುತ್ತಪ್ಪ ರೈ: ಸಿಸಿಬಿಯಿಂದ ವಿಚಾರಣೆ

Saturday, October 20th, 2018
muttappa-rai

ಬೆಂಗಳೂರು: ಆಯುಧ ಪೂಜೆ ದಿನ ಕತ್ತಿ, ಡ್ರಾಗರ್ ರಿವಾಲ್ವರ್ ಇಟ್ಟು ಪೂಜೆ ಮಾಡಿದ್ದ ಮಾಜಿ ಡಾನ್ ಮುತ್ತಪ್ಪ ರೈ ಇಂದು ಸಿಸಿಬಿ ಕಚೇರಿಗೆ ಹಾಜರಾಗಿ ಈ ಕುರಿತು ಸ್ಪಷ್ಟನೆ ನೀಡಲಿದ್ದಾರೆ. ಆಯುಧ ಪೂಜೆ ವೇಳೆ ಇಟ್ಟಿದ್ದ ರಿವಾಲ್ವರ್, ಬಂದೂಕುಗಳಿಗೆ ಲೈಸನ್ಸ್ ತೋರಿಸಿ ವಿಚಾರಣೆಗೆ ಹಾಜರಾಗುವಂತೆ ನಿನ್ನೆ ಸಿಸಿಬಿಯಿಂದ ರೈಗೆ ನೋಟಿಸ್ ನೀಡಲಾಗಿತ್ತು. ನೋಟಿಸ್ ತಲುಪಿದ 24 ತಾಸುಗಳ ಒಳಗಾಗಿ ವಿಚಾರಣೆಗೆ ಹಾಜರಾಗುವಂತೆ ರೈ‌ಗೆ ಸಿಸಿಬಿ ಖಡಕ್ ಸೂಚನೆ ನೀಡಿದ್ದ ಹಿನ್ನೆಲೆ ಇಂದು ಮುತ್ತಪ್ಪ ರೈ ಎಸಿಪಿ ಮರಿಯಪ್ಪ […]

ಮಾದಕ ವಸ್ತುಗಳ ಸೇವನೆ ಪ್ರಚೋದನೆ ನೀಡಿದ ಆರೋಪ..ಚಂದನ್ ಶೆಟ್ಟಿಗೆ ಬಿಗ್ ರಿಲೀಫ್!

Tuesday, September 4th, 2018
chandan-shetty

ಬೆಂಗಳೂರು: ತಮ್ಮ ಹಾಡಿನಿಂದ ಮಾದಕ ವಸ್ತುಗಳ ಸೇವನೆ ಪ್ರಚೋದನೆ ನೀಡಿದ ಆರೋಪದಡಿ ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿಯನ್ನ ಸಿಸಿಬಿ ವಿಚಾರಣೆ ನಡೆಸಿತ್ತು. ಕೊನೆಗೂ ಈ ಪ್ರಕರಣದಲ್ಲಿ ರ್ಯಾಪರ್ ಚಂದನ್ ಶೆಟ್ಟಿ ನಿರಳಾಗಿದ್ದಾರೆ. ಚಂದನ್ಗೆ ಸಿಸಿಬಿ ಕಳುಹಿಸಿದ ಪತ್ರ ಈನಾಡುಗೆ ಲಭ್ಯವಾಗಿದೆ. ಇನ್ನು ಯಾವುದೇ ವಿಚಾರಣೆ ಅಗತ್ಯವಿಲ್ಲವೆಂದು ಸಿಸಿಬಿ ಘಟಕ ಸ್ಪಷ್ಟಪಡಿಸಿ ಪತ್ರ ಕಳಹಿಸಿದೆ. ಮಹಿಳೆ ಮತ್ತು ಮಾದಕ ದ್ರವ್ಯ ದಳ ತನಿಖಾಧಿಕಾರಿ ಬಿ.ಎಸ್ ಮೋಹನ್ ಕುಮಾರ್ ಅವರು ಚಂದನ್ ಗೆ ಪತ್ರ ರವಾನಿಸಿದ್ದಾರೆ. ನಿಮ್ಮ ಹೇಳಿಕೆಯನ್ನ […]

ಬಜ್ಜೋಡಿ: ಗಾಂಜಾ ಸೇವನೆ,ಯುವಕರು ಪೊಲೀಸ್ ವಶಕ್ಕೆ

Thursday, October 19th, 2017
ganja

ಮಂಗಳೂರು:  ಸಿಸಿಬಿ ಪೊಲೀಸರು ಬಜ್ಜೋಡಿ ಎರಡನೇ ಅಡ್ಡರಸ್ತೆಯಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ  ಯುವಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉರ್ವ ಹ್ಯೊಗೆಬೈಲಿನ ಆಲ್ವಿನ್ ಕ್ಲಿಂಟನ್ (24), ಬಿಕರ್ನಕಟ್ಟೆಯ ಅಜೇಯ್ ಸೆಬಾಸ್ಟಿಯನ್ ಲೋಬೊ (24), ಬಜ್ಜೋಡಿಯ ಜೋಯೆಲ್ ಫರ್ನಾಂಡಿಸ್ (27), ಪಡೀಲ್ನ ಆದಿತ್ಯ (18), ಪಡೀಲ್ ಅಳಪೆಯ ದೇವರಾಜ್ (21), ಮೂಡುಶೆಡ್ಡೆಯ ಅಕ್ಷಯ್ ಸಾಲಿಯಾನ್ (21) ಹಾಗೂ ಎಂ.ಜಿ. ರಸ್ತೆಯ ಅಮೋಘ್ ಹೆಗ್ಡೆ (27) ಬಂಧಿತರು. ಖಚಿತ ಮಾಹಿತಿ ಮೇರೆಗೆ ಇನ್ಸ್‌ಪೆಕ್ಟರ್ ಸುನೀಲ್ ನಾಯಕ್ ಹಾಗೂ ಅವರ ತಂಡ ಬಜ್ಜೋಡಿಯಲ್ಲಿ ಗಾಂಜಾ […]

ಕೊಣಾಜೆ: ಜೂಜಾಟ ಅಡ್ಡೆ ಮೇಲೆ ಸಿಸಿಬಿ ದಾಳಿ

Monday, October 16th, 2017
andar-bahar

ಮಂಗಳೂರು: ಜೂಜಾಟ ಅಡ್ಡೆ ಒಂದರ ಮೇಲೆ ದಾಳಿ ನಡೆಸಿದ ಪೊಲೀಸರು 12 ಜನರನ್ನು ಬಂಧಿಸಿದ ಘಟನೆ ಮಂಗಳೂರಿನಲ್ಲಿ ಕಳೆದ ರಾತ್ರಿ ನಡೆದಿದೆ. ನಗರ ಹೊರವಲಯದ ಕೊಣಾಜೆಯ ಮುಚ್ಚಿಲಕೋಡಿ ಎಂಬಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಅಂದರ್ – ಬಾಹರ್ ಇಸ್ಪೀಟ್ ಆಟವಾಡುತ್ತಿದ್ದ 12 ಜನರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮುಚ್ಚಿಲಕೋಡಿ ಎಂಬಲ್ಲಿ ಜೂಜಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಜೂಜು ಅಡ್ಡೆಯ ಮೇಲೆ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಜೂಜಾಡುತ್ತಿದ್ದ 12 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು […]