Blog Archive

ಸರ್ಕಾರಿ ಜಾಗದಲ್ಲಿ ಕ್ರೈಸ್ತರು-ಹಿಂದೂಗಳ ನಡುವೆ ಆರಾಧನೆಗೆ ಕಿತ್ತಾಟ

Saturday, September 29th, 2018
Koragajja

ಮಂಗಳೂರು : ಸರ್ಕಾರಿ ಜಾಗದಲ್ಲಿ ಕ್ರೈಸ್ತರು ಮತ್ತೆ ಹಿಂದೂಗಳ ನಡುವೆ ಆರಾಧನೆ ಮಾಡುವ ವಿಚಾರದಲ್ಲಿ ಕಿತ್ತಾಟ ಆರಂಭ ಗೊಂಡಿದ್ದು ಮೇರಿಯ ಮಾತೆಯ ಆರಾಧನೆಯ ಸ್ಥಳದಲ್ಲಿ ಶುಕ್ರವಾರ ಮಧ್ಯರಾತ್ರಿ ನಂತರ ಕೊರಗಜ್ಜ ದೈವದ ಆರಾಧನೆ ಆರಂಭ ಗೊಂಡಿದೆ. ಬಂಟ್ವಾಳ ತಾಲೂಕು ಕುಂಟ್ರಕಳದ ಸರ್ಕಾರಿ ಸ್ಥಳದಲ್ಲಿ ಅನಧಿಕೃತವಾಗಿ ಮೇರಿ ಆರಾಧನೆ ಬಗ್ಗೆ ಇತ್ತೀಚೆಗೆ ಹಿಂದೂ ಸಂಘಟನೆಯ ಕಾರ್ಯಕರ್ತರು ಆಕ್ಷೇಪ ಎತ್ತಿದ್ದರು. ಕ್ರೈಸ್ತರು ಆರಾಧನೆ ಮಾಡುತ್ತಿದ್ದ ಸ್ಥಳದಲ್ಲಿ ಕೊರಗಜ್ಜ ದೈವದ ಮೂರ್ತಿ ಇರಿಸಿ ಹಿಂದೂ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಕಳೆದ 45 ವರ್ಷಗಳಿಂದ ಕುಂಟ್ರಕಳದಲ್ಲಿ ಮಾತೆ ಮೇರಿಯ ಮೂರ್ತಿಯನ್ನಿಟ್ಟು ಕ್ರೈಸ್ತರು  ಕೆಲವು  ಆರಾಧನೆ ಮಾಡುತ್ತಿದ್ದರು. ಸೆ.28 ಮಧ್ಯರಾತ್ರಿ  ಹಿಂದೂಗಳ ತಂಡ […]

ಜಿಲ್ಲೆಯಲ್ಲಿ ಹಿಂದೂಗಳನ್ನು ಕಡೆಗಣಿಸಿದ್ದೇ ಕಾಂಗ್ರೆಸ್ ಸೋಲಲು ಕಾರಣ : ಬೋಜೆಗೌಡ

Saturday, August 4th, 2018
bojegwoda

ಮಂಗಳೂರು : ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಹಿಂದೂಗಳನ್ನು ಕಡೆಗಣಿಸಿದ್ದೇ ಕಾಂಗ್ರೆಸ್  ಸೋಲಲು ಪ್ರಮುಖ ಕಾರಣ ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ನೆಲಕಚ್ಚಲು ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದದ್ದೇ ಕಾರಣ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಈ ಹಿಂದೆ 8 ವಿಧಾನ ಸಭಾ ಕ್ಷೇತ್ರಗಳ ಪೈಕಿ 7 ರಲ್ಲಿ ಗೆದ್ದಿದ್ದ ಕಾಂಗ್ರೆಸ್ ಕಳೆದ ಚುನಾವಣೆಯಲ್ಲಿ 7 ಕ್ಷೇತ್ರವನ್ನು ಕಳೆದು ಕೊಂಡು ಕೇವಲ 1 ಸ್ಥಾನ ಪಡೆಯಿತು ಎಂದು ಜೆಡಿಎಸ್ ಮುಖಂಡ ಬೋಜೆಗೌಡ ಅಭಿಪ್ರಾಯ ಪಟ್ಟಿದ್ದಾರೆ. ಮಂಗಳೂರಿನಲ್ಲಿ […]

ಕಾಂಗ್ರೆಸ್‌ – ಜೆಡಿಎಸ್‌ ಹಿಂದೂ ವಿರೋಧಿ ನೀತಿ

Thursday, June 7th, 2018
police

ಉಡುಪಿ: ರಾಜ್ಯದ ಹಿಂದಿನ ಸರಕಾರದಲ್ಲಿ ಸಿದ್ದರಾಮಯ್ಯ ಹಿಂದೂ ವಿರೋಧಿಯಾಗಿ ವರ್ತಿಸುತ್ತಿದ್ದರು. ಈಗ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಎರಡೂ ಕೂಡ ಒಂದಾಗಿ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಉಡುಪಿ ಶಾಸಕ ಕೆ. ರಘಪತಿ ಭಟ್‌ ಹೇಳಿದ್ದಾರೆ. ಪೆರ್ಡೂರಿನ ಗೋಸಾಗಾಟ ಪ್ರಕರಣದಲ್ಲಿ ಅಮಾಯಕರನ್ನು ಬಂಧಿಸಿರುವುದನ್ನು ಖಂಡಿಸಿ ಮತ್ತು ಸರಕಾರದ ಹಿಂದೂ ವಿರೋಧಿ ನೀತಿಯನ್ನು ವಿರೋಧಿಸಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಜೂ.6ರಂದು ಬಿಜೆಪಿ, ವಿಎಚ್‌ಪಿ ಮತ್ತು ಬಜರಂಗದಳ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಗೋಸಾಗಾಟ ರಾಜಾರೋಷವಾಗಿ […]

ರಾಜ್ಯಸಭೆ ಸ್ಥಾನಕ್ಕಾಗಿ ಪ್ರಕಾಶ್ ರೈ ಹಿಂದೂ ಸಮಾಜಕ್ಕೆ ಅವಮಾನ ಮಾಡುತ್ತಿದ್ದಾರೆ

Thursday, May 3rd, 2018
bhartiya-party

ಮಂಗಳೂರು: ಕಾಂಗ್ರೆಸ್‌ನವರು ರಾಜ್ಯಸಭೆ ಸ್ಥಾನವನ್ನು ಕೊಡಬಹುದು ಎಂಬ ಆಸೆಯಿಂದ ನಟ ಪ್ರಕಾಶ್ ರೈ ಅವರು ಹಿಂದೂ ಸಮಾಜಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಮಂಗಳೂರಿನಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹಲವಾರು ದಿನಗಳಿಂದ ತಾನೊಬ್ಬ ವಿಚಾರವಾದಿ ಎಂದು ಫೋಸ್ ನೀಡುವುದಕ್ಕಾಗಿ ತಾನೊಬ್ಬ ಜಾತ್ಯಾತೀತವಾದಿ ಎಂದು ಪ್ರಚಾರ ನಡೆಸಲು ಹಿಂದೂ ಧರ್ಮವನ್ನು ಪ್ರಕಾಶ್‌ ರೈ ಅವಮಾನಿಸುತ್ತಿದ್ದಾರೆ. ಅವರಿಗೆ ಯಾವುದೇ ನೈತಿಕತೆ ಇಲ್ಲ ಎಂದು ಹೇಳಿದರು. ಸ್ಮಾರ್ಟ್ ಸಿಟಿ ಯೋಜನೆಗೆ ಮಂಗಳೂರು ಆಯ್ಕೆಯಾದ್ರೂ […]

ಅಯ್ಯಪ್ಪ ದೇವರ ಹಾಡಿನಲ್ಲಿ ಯಾವುದೇ ಅವಮಾನ ಮಾಡುವ ಶಬ್ದ ಬಳಕೆಯಾಗಿಲ್ಲ: ಮೊಯ್ದೀನ್‌ ಬಾವ

Monday, March 12th, 2018
mohauiddin-bava

ಮಂಗಳೂರು: ಅಯ್ಯಪ್ಪ ದೇವರ ಹಾಡನ್ನು ನಾನು ವಿಕೃತಗೊಳಿಸಿ ಅಪಮಾನ ಮಾಡಿದ್ದೇನೆಂದು ಮಾಧ್ಯಮಗಳಲ್ಲಿ ಬಂದ ಸುದ್ದಿ ಸತ್ಯಕ್ಕೆ ದೂರವಾದದ್ದು ಹಾಗೂ ಹಾಡಿನಲ್ಲಿ ಯಾವುದೇ ಅವಮಾನ ಮಾಡುವ ಶಬ್ದ ಬಳಕೆಯಾಗಿಲ್ಲ ಎಂದು ಶಾಸಕ ಮೊಯ್ದೀನ್‌ ಬಾವ ಸ್ಪಷ್ಟಪಡಿಸಿದರು. ಅಯ್ಯಪ್ಪ ದೇವರನ್ನು ಅವಮಾನಿಸಿದ್ದೇನೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನನ್ನ ಗಮನಕ್ಕೆ ಬಾರದೆ ನನ್ನ ಅಭಿಮಾನಿ ಅಥವಾ ವಿರೋಧಿಗಳಿಂದ ಈ ಕೃತ್ಯ ನಡೆದಿದೆ. ನಾನು ಅಯ್ಯಪ್ಪ ಸ್ವಾಮಿ ಭಕ್ತ. ಈ ಹಾಡಿನಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ. ಇಂತಹ ಘಟನೆ […]

ನಾನು ಹಿಂದೂ ಭಕ್ತ… ಈದ್‌‌ ಯಾಕೆ ಆಚರಿಸಬೇಕು?: ಯೋಗಿ ಆದಿತ್ಯನಾಥ್‌

Wednesday, March 7th, 2018
uttar-pradesh

ಲಕ್ನೋ: ನಾನು ಒಬ್ಬ ಹಿಂದೂ ಭಕ್ತ… ನಮ್ಮ ಧರ್ಮದ ಬಗ್ಗೆ ನನಗೆ ಹೆಮ್ಮೆ ಇದ್ದು, ನಾನು ಈದ್‌ ಹಬ್ಬ ಯಾಕೆ ಆಚರಣೆ ಮಾಡಬೇಕು ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಪ್ರಶ್ನಿಸಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಸಮಾಜವಾದಿ ಪಕ್ಷದ ವಿರುದ್ಧ ಹರಿಹಾಯ್ದಿರುವ ಯೋಗಿ ಆದಿತ್ಯನಾಥ್‌, “ನಾನು ಹಿಂದೂ ಧರ್ಮದವನಾಗಿದ್ದು, ಹೀಗಾಗಿ ಈದ್‌ ಆಚರಿಸುವುದಿಲ್ಲ. ನನ್ನ ಸ್ವಂತ ಧರ್ಮದಲ್ಲಿ ನಾನು ಹೆಮ್ಮೆ ಪಡುತ್ತೇನೆ… ಇಷ್ಟಕ್ಕೂ ನಾನು ಏಕೆ ಈದ್ ಆಚರಿಸಬೇಕು? ಎಂದಿದ್ದಾರೆ. ಇದೇ ವೇಳೆ ಅವರು […]

ಯುಟಿ ಖಾದರ್ ರನ್ನು ಹಿಂದೂ ಧರ್ಮಕ್ಕೆ ಆಹ್ವಾನಿಸಿದ ಒಳ್ಳೆ ಹುಡುಗ ಪ್ರಥಮ್

Monday, January 15th, 2018
pratham

ಮಂಗಳೂರು: ಸಚಿವ ಯುಟಿ ಖಾದರ್ರ ಮುಸ್ಲಿಂರನ್ನು ಅನುಮಾನದಿಂದ ನೋಡುತ್ತಾರೆ ಹೇಳಿಕೆಗೆ ಸಾಮಾಜಿಕ ಜಾಲತಾಣ ಬಾರಿ ವಿರೋಧ ವ್ಯಕ್ತವಾಗುತ್ತಿದ್ದು ಇನ್ನು ಬಿಗ್ಬಾಸ್ ಖ್ಯಾತೀಯ ಪ್ರಥಮ್ ಕೂಡಾ ಖಾದರ್ ಗೆ ತಮ್ಮದೇ ಶೈಲಿಯಲ್ಲಿ ಆಕ್ರೋಶ ಹೊರ ಹಾಕಿದ್ದಾರೆ. ಧಾರವಾಡದ ಕಲಾಭವನದಲ್ಲಿ ಏರ್ಪಡಿಸಲಾಗಿದ್ದ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಸಮ್ಮೇಳನದಲ್ಲಿ ಮಾತನಾಡಿದ ಅವರು, ಖಾದರ್ ಎಂದು ಹೇಳಿದ ತಕ್ಷಣ ವಿಮಾನ ನಿಲ್ದಾಣದಲ್ಲಿ ಒಂದು ಸಾರಿ ಅಲ್ಲ, ಬದಲಾಗಿ ಎರಡು ಸಾರಿ ತಪಾಸಣೆ ಮಾಡಲಾಗುತ್ತದೆ. ಈ ರೀತಿಯಾದರೂ ನಾವು ಏನು ಮಾಡೊಕೆ ಆಗಲ್ಲ, […]

ಹಿಂದೂ ಬಾಂಧವರಿಂದ 1.12 ಲಕ್ಷ ರೂ. ಧನಸಹಾಯ

Thursday, January 11th, 2018
vedike

ಸುಬ್ರಹ್ಮಣ್ಯ: ಇತ್ತೀಚೆಗೆ ಮಂಗಳೂರಿನ ಕಾಟಿಪಳ್ಳದಲ್ಲಿ ಹತ್ಯೆಗೊಳಗಾದ ದೀಪಕ್‌ ರಾವ್‌ ಅವರ ಕುಟುಂಬದ ನೆರವಿಗೆ ಕುಕ್ಕೆ ಸುಬ್ರಹ್ಮಣ್ಯ ಜಾಗೃತ ಹಿಂದೂ ಸಮಾಜ ಮುಂದಾಗಿದ್ದು ಸಾಂತ್ವನ ನಿಧಿ ಸಂಗ್ರಹಿಸಿದೆ, ಈ ವೇಳೆ ಲಕ್ಷಕ್ಕೂ ಮಿಕ್ಕಿದ ಧನ ಸಂಗ್ರಹವಾಗಿದೆ. ಪುತ್ರನನ್ನು ಕಳೆದುಕೊಂಡಿರುವ ತಾಯಿ, ಅಣ್ಣನಿಲ್ಲದ ನೋವಿನಲ್ಲಿರುವ ಮೂಗ ಸಹೋದರನ ನೋವಿಗೆ ಸ್ಥಳೀಯ ಹಿಂದೂ ಬಾಂಧವರು ಸ್ಪಂದಿಸಿ, ಎರಡು ದಿನಗಳ ಕಾಲ ಸಾಂತ್ವನ ನಿಧಿ ಸಂಗ್ರಹ ಅಭಿಯಾನ ನಡೆಸಿದ್ದರು. ಕ್ಷೇತ್ರಕ್ಕೆ ಆಗಮಿಸಿದ ಭಕ್ತರು, ಸ್ಥಳಿಯ ಉದ್ಯಮಿಗಳು, ವರ್ತಕರು, ವ್ಯಾಪಾರಸ್ಥರು, ನಾಗರಿಕರು ಸಾಕಷ್ಟು ನೆರವು ನೀಡಿದ್ದಾರೆ. […]

ಪಿಲಿ ಚಾಮುಂಡಿ ಕಲ್ಲಿನ ಬೇಲಿ ತೆರವು; ಬೆಳ್ತಂಗಡಿಯಲ್ಲಿ ಆಕ್ರೋಶ

Wednesday, January 10th, 2018
hindu-parishat

ಬೆಳ್ತಂಗಡಿ: ಇಲ್ಲಿನ ಗುರುವಾಯನಕೆರೆಯಲ್ಲಿರುವ ಅಪಾರ ಭಕ್ತರ ನಂಬಿಕೆಯ ಸ್ಥಳವಾದ ಪಿಲಿ ಚಾಮುಂಡಿ ಕಲ್ಲಿನ ಬೇಲಿ ತೆರವು ಮಾಡಿರುವುದನ್ನು ಖಂಡಿಸಿ ಹಿಂದೂ ಪರ ಸಂಘಟನೆಯ ಸಾವಿರಾರು ಕಾರ್ಯಕರ್ತರು ಮಂಗಳವಾರ ಬೆಳ್ತಂಗಡಿಯಿಂದ ಗುರುವಾಯನಕರೆಯ ವರೆಗೆ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ. ‘ನಮ್ಮ ನಡಿಗೆ ಪಿಲಿ ಚಾಮುಂಡಿ ಕಲ್ಲಿನೆಡೆ’ ಎಂಬ ಹೆಸರಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಗಿದ್ದು, ಮಹಿಳೆಯರೂ ಸೇರಿದಂತೆ ಹಿಂದೂ ಪರ ಸಂಘಟನೆಯ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದಾರೆ. ಡಿಸೆಂಬರ್‌ ತಿಂಗಳಿನಲ್ಲಿ ಇಲ್ಲಿ ನೇಮ ನಡೆದ ಬಳಿಕ ಕಲ್ಲಿಗೆ […]

ಹಿಂದೂಗಳಿಗೆ ಅಭದ್ರತೆ: ಮಟ್ಟಾರು

Saturday, January 6th, 2018
Rathnakar-hegde

ಉಡುಪಿ: ಹಿಂದೂಗಳಿಗೆ ಕರ್ನಾಟಕದಲ್ಲಿ ಅಭದ್ರತೆ ಕಾಡುತ್ತಿದೆ. ಉಡುಪಿ, ದ.ಕ., ಉ.ಕ. ಜಿಲ್ಲೆಗಳಲ್ಲಿ ಕ್ಷೋಭೆ ಆವರಿಸಿದೆ. ಲವ್‌ ಜೆಹಾದ್‌ ಮೂಲಕ ಹಿಂದೂ ಯುವತಿ ಯ ರನ್ನೂ ದಾರಿ ತಪ್ಪಿಸುವ ಕಾರ್ಯವಾಗುತ್ತಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಮಂಗಳೂರಿನಲ್ಲಿ ಶಾಸಕ ಮೊದಿನ್‌ ಬಾವಾ ಅವರು ಆರೋಪಿಯ ಭಾವ ಕಾಪು ಬಿಜೆಪಿ ಕಾರ್ಯಕರ್ತನೆಂದು ಹೇಳಿದ್ದಾರೆ. ಇದು ಶುದ್ಧ ಸುಳ್ಳು. ಆರೋಪ ಕೇಳಿಬಂದಾಗ ಸ್ವತಃ ಪರಿಶೀಲಿಸಿದಾಗ ಕಾಪುವಿನಲ್ಲಿ ಅಂತಹ ಕಾರ್ಯ ಕರ್ತನೇ ಬಿಜೆಪಿಯಲ್ಲಿ ಇಲ್ಲವೆನ್ನುವ ಸತ್ಯ ಗೊತ್ತಾಗಿದೆ. ಬಾವಾ […]