ಅನುಪಮಾ ಶೆಣೈ ಯೂ ಟರ್ನ್ : ರಾಜೀನಾಮೆ ಹಿಂಪಡೆಯಲು ಸಿಎಂಗೆ ಪತ್ರ

Monday, September 19th, 2016
anupama

ಮಂಗಳೂರು: ಕೂಡ್ಲಿಗಿ ಡಿವೈಎಸ್‌ಪಿ ಹುದ್ದೆಗೆ ನೀಡಿದ ರಾಜೀನಾಮೆ ಹಿಂಪಡೆಯುವುದಾಗಿ ಕೋರಿ ಮುಖ್ಯಮಂತ್ರಿಗೆ ಪತ್ರ ಬರೆಯಲಾಗಿದೆ. ಆ. 29ಕ್ಕೆ ಪತ್ರ ಬರೆಯಲಾಗಿದ್ದರೂ ಪರಿಶೀಲಿಸಲಾಗುತ್ತಿದೆ ಎಂದಷ್ಟೇ ಉತ್ತರ ಬಂದಿದೆ ಎಂದು ಕೂಡ್ಲಿಗಿ ಮಾಜಿ ಡಿವೈಎಸ್‌ಪಿ ಅನುಪಮಾ ಶೆಣೈ ತಿಳಿಸಿದ್ದಾರೆ. ಯುವ ಬ್ರಿಗೇಡ್‌ ದ.ಕ. ಜಿಲ್ಲಾ ಘಟಕದ ವತಿಯಿಂದ ನಗರದ ಟಿ.ವಿ. ರಮಣ ಪೈ ಕನ್ವೆನ್ಶನ್‌ ಸೆಂಟರ್‌ನಲ್ಲಿ ನಡೆದ “ಹೈದರಾಬಾದ್‌ ಸ್ವಾತಂತ್ರ್ಯ ಸಂಘರ್ಷ: ಹೈದರಾಬಾದ್‌ ಮುಕ್ತಿ ದಿವಸ್‌’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜೀನಾಮೆ ಹಿಂಪಡೆಯುವ ಕುರಿತು ಪತ್ರ ಬರೆದ ಅನಂತರ ಮುಖ್ಯಮಂತ್ರಿಯವರೇ […]

ನ. 5: ’ರೈಟ್ ಬೊಕ್ಕ ಲೆಫ್ಟ್’ ತುಳು ಚಲನಚಿತ್ರ ಬಿಡುಗಡೆ

Thursday, November 5th, 2015
ನ. 5: ’ರೈಟ್ ಬೊಕ್ಕ ಲೆಫ್ಟ್’ ತುಳು ಚಲನಚಿತ್ರ  ಬಿಡುಗಡೆ

ಮಂಗಳೂರು: ಶ್ರೀ ಮಂಗಳಾಂಬಿಕಾ ಪ್ರೊಡಕ್ಷನ್ ಪುತ್ತೂರು ಲಾಂಛನದಲ್ಲಿ ನಿರ್ಮಾಣವಾಗಿರುವ ’ರೈಟ್ ಬೊಕ್ಕ ಲೆಫ್ಟ್-ನಡುಟು ಕುಡೊಂಜಿ’ ತುಳು ಚಲನಚಿತ್ರದ ಬಿಡುಗಡೆ ಸಮಾರಂಭ ನ. 5ರಂದು ಬೆಳಗ್ಗೆ 9.00ಕ್ಕೆ ಮಂಗಳೂರಿನ ಜೋತಿ ಚಿತ್ರಮಂದಿರದಲ್ಲಿ ಜರಗಲಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 10 ಚಿತ್ರ ಮಂದಿರಗಳಲ್ಲಿ ಚಿತ್ರ ಏಕಕಾಲಕ್ಕೆ ಬಿಡುಗಡೆಗೊಳ್ಳಲಿದೆ. ಜೀವನದಲ್ಲಿ ಸೋತ ವ್ಯಕ್ತಿಯೊಬ್ಬ ಹೇಗೆ ಯಶಸ್ಸು ಸಾಧಿಸುತ್ತಾನೆ ಎಂಬ ಒಳ್ಳೆಯ ಚಿತ್ರಕಥೆಯನ್ನು ರೈಟ್ ಬೊಕ್ಕ ಲೆಫ್ಟ್ ಸಿನಿಮಾ ಹೊಂದಿದೆ. ’ಬಲೆ ತೆಲಿಪಾಲೆ’ ಖ್ಯಾತಿಯ ಸಂದೀಪ್ ಶೆಟ್ಟಿ ಮಾಣಿಬೆಟ್ಟು ಈ […]