ಬಸ್ ನಲ್ಲಿ ಸಾಗಿಸುತ್ತಿದ್ದ ಪಾನ್ ಮಸಾಲೆ ಸಹಿತ ಓರ್ವ ಸೆರೆ
Wednesday, September 7th, 2016ಉಪ್ಪಳ: ಬಸ್ನಲ್ಲಿ ಸಾಗಿಸುತ್ತಿದ್ದ 1803 ಪ್ಯಾಕೆಟ್ ಪಾನ್ಮಸಾಲೆ ಸಹಿತ ಓರ್ವನನ್ನು ವಾಮಂಜೂರು ಚೆಕ್ಪೋಸ್ಟ್ನಲ್ಲಿ ಅಬಕಾರಿ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ಸೋಮವಾರ ಮಧ್ಯಾಹ್ನ ಮಂಗಳೂರಿನಿಂದ ಕಾಸರಗೋಡಿಗೆ ತೆರಳುತ್ತಿದ್ದ ಕರ್ನಾಟಕ ಸಾರಿಗೆ ಸಂಸ್ಥೆ ಬಸ್ನಲ್ಲಿ ತಪಾಸಣೆ ನಡೆಸಿದಾಗ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿಟ್ಟ ಪಾನ್ ಮಸಾಲೆ ಪತ್ತೆಯಾಗಿದೆ. ಈ ಸಂಬಂಧ ನೀಲೇಶ್ವರ ನಿವಾಸಿ ರಜಾಕ್ ಎಂಬವರ ಪುತ್ರ ಶಬೀರ್ (24) ಎಂಬಾತನನ್ನು ಸೆರೆ ಹಿಡಿದಿದ್ದಾರೆ. ಬಳಿಕ ಆತನನ್ನು ಮಂಜೇಶ್ವರ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ವಾಮಂಜೂರು ಚೆಕ್ಪೋಸ್ಟ್ ಅಬಕಾರಿ ಅದಿಕಾರಿಗಳಾದ ಶಂಕರನ್, ರೆನ್ನಿ ಫೆರ್ನಾಂಡೀಸ್, ಉಮ್ಮರ್ […]