ನಟ ದರ್ಶನ್ ವಿರುದ್ಧ ನಿರ್ದೇಶಕ ಇಂದ್ರಜಿತ್ ಲಂಕೇಶ್ ಗಂಭೀರ ಆರೋಪ

Thursday, July 15th, 2021
Darshan-Indrajeeth

ಬೆಂಗಳೂರು : ನಟ ದರ್ಶನ್ ಮತ್ತು ಸ್ನೇಹಿತರ ಗಲಾಟೆ ವಿಚಾರವಾಗಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಸುದ್ದಿಗೋಷ್ಠಿ ನಡೆಸಿ ಹಲವು ಗಂಭೀರ ಆರೋಪಗಳನ್ನ ಮಾಡಿದ್ದಾರೆ. ಸಂದೇಶ್ ದಿ ಪ್ರಿನ್ಸ್  ಹೋಟೆಲಿನಲ್ಲಿ  ದರ್ಶನ್ನೇ ಸಪ್ಲೈಯರ್‌ಗೆ ಹೊಡೆದಿರೋದು ಎಂದು ನೇರವಾಗಿ ಆರೋಪಿಸಿದ್ದು, ಭಾರೀ ಸಂಚಲನ ಮೂಡಿಸಿದೆ. ನಾನು ಹೇಳಿದ ಎಲ್ಲ ಮಾತುಗಳು ನಿಜ ಎಂಬುದನ್ನು ಇಂದ್ರಜಿತ್ ಸ್ಪಷ್ಟ ಪಡಿಸಿದ್ದಾರೆ. ಪ್ರಕರಣದ ಸರಿಯಾದ ತನಿಖೆಯಾಗಬೇಕು ಎಂದರೆ ಸಿಸಿಟಿವಿ ದೃಶ್ಯಗಳನ್ನು ಹೊರತೆಗೆಯಬೇಕು ಎಂದು ಅವರು ಹೇಳಿದ್ದಾರೆ. ಸಣ್ಣದಾಗಿ ಗಲಾಟೆ ನಡೆದಿದ್ದು ನಿಜ, ಆದರೆ ದರ್ಶನ್ ಯಾರಿಗೂ […]

ತುಳು ಚಲನಚಿತ್ರೋತ್ಸವ ಇಂದ್ರಜಿತ್ ಲಂಕೇಶ್ ಉದ್ಘಾಟಿಸಿದರು

Wednesday, January 10th, 2018
film-festival

ಮಂಗಳೂರು: ಸಿನಿಪೊಲಿಸ್ ಸಿನಿಮಾ ಮಂದಿರದಲ್ಲಿ ನಡೆಯುತ್ತಿರುವ ತುಳು ಚಲನಚಿತ್ರೋತ್ಸವದಲ್ಲಿ ನಿನ್ನೆ ಜಯಕಿರಣ ಫಿಲಂಸ್ ಲಾಂಛನದಲ್ಲಿ ತಯಾರಾದ ಚಾಲಿಪೋಲಿಲು ಚಿತ್ರ ಪ್ರದರ್ಶನವನ್ನು ಖ್ಯಾತ ಸಿನಿಮಾ ನಿರ್ದೇಶಕ ,ಪತ್ರಕರ್ತ ಇಂದ್ರಜಿತ್ ಲಂಕೇಶ್ ಉದ್ಘಾಟಿಸಿದರು. ಸಮಾರಂಭದಲ್ಲಿ ದೇವದಾಸ್ ಕಾಫಿಕಾಡ್,ಲಯನ್ ಕಿಶೋರ್ ಡಿ.ಶೆಟ್ಟಿ ಪ್ರಕಾಶ್ ಪಾಂಡೇಶ್ವರ್, ಗಿರೀಶ್ ಶೆಟ್ಟಿ, ಉದಯ ಪೂಜಾರಿ,ಕಿಶೋರ್ ಕೊಟ್ಟಾರಿ ,ರಾಜೇಶ್ ಬ್ರಹ್ಮಾವರ್,ಸಚಿನ್ ಎ ಎಸ್ ಉಪ್ಪಿನಂಗಡಿ, ಗಂಗಾಧರ ಶೆಟ್ಟಿ,ಸಾಯಿಕೃಷ್ಣ,ರಘು ಶೆಟ್ಟಿ, ಸ್ವರ್ಣ ಸುಂದರ್,ಸುನಿಲ್ ನೆಲ್ಲಿಗುಡ್ಡೆ,ಸೂರಜ್,ತಮ್ಮ ಲಕ್ಷ್ಮಣ,ಮೊದಲಾದವರು ಉಪಸ್ಥಿತರಿದ್ದರು.

ರಾಜ್ಯದಲ್ಲಿ ರಾಜಕೀಯ ಹಿನ್ನಲೆಯಲ್ಲಿ ಹತ್ಯೆಗಳು ನಡೆಯುತ್ತಿವೆ :ಇಂದ್ರಜಿತ್ ಲಂಕೇಶ್

Tuesday, January 9th, 2018
indrajit-lankesh

ಮಂಗಳೂರು: ಮಂಗಳೂರಿನ ಕಾಟಿಪಳ್ಳದಲ್ಲಿ ನಡೆದ ದೀಪಕ್ ರಾವ್ ಹಾಗೂ ಕೊಟ್ಟಾರ ಚೌಕಿಯಲ್ಲಿ ನಡೆದ ಅಬ್ದುಲ್ ಬಷೀರ್ ಅವರ ಸಾವು ತುಂಬಾ ನೋವು ತಂದಿದೆ,” ಎಂದು ಹೇಳಿದ ಅವರು, “ರಾಜ್ಯದಲ್ಲಿ ರಾಜಕೀಯ ಹಿನ್ನಲೆಯಲ್ಲಿ ಹತ್ಯೆಗಳು ನಡೆಯುತ್ತಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ,” ಎಂದು ಆರೋಪಿಸಿದರು. “ಮಂಗಳೂರಿನಲ್ಲಿ ನಡೆದ ಎರಡು ಸಾವಿನಲ್ಲೂ ರಾಜಕೀಯ ನಡೆಯುತ್ತಿದೆ,” ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, “ರಾಜಕೀಯಕ್ಕಾಗಿ ಹಾಗೂ ಮತಗಳಿಕೆಯ ಲಾಭಕ್ಕಾಗಿ ಈ ಇಬ್ಬರ ಸಾವನ್ನು ಬಳಸಿಕೊಳ್ಳಬೇಡಿ,” ಎಂದು ಮನವಿ ಮಾಡಿಕೊಂಡರು. “ರಾಜ್ಯದಲ್ಲಿ ಚುನಾವಣೆ ಹತ್ತಿರ […]