ಬೈರಂಪಳ್ಳಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆಯವರು ಮನೆ ಮನೆಗೆ ತೆರಳಿ ಮತಪ್ರಚಾರ

Thursday, May 3rd, 2018
vinay-kumar

ಕಾಪು: ಕಾಪು ಕ್ಷೇತ್ರ ವ್ಯಾಪ್ತಿಯ ಹಿರಿಯಡ್ಕ ಬ್ಲಾಕ್ ನ ಬೈರಂಪಳ್ಳಿ ವ್ಯಾಪ್ತಿಯಲ್ಲಿ ಕಾಪು ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆಯವರು ಮನೆ ಮನೆಗೆ ತೆರಳಿ ಮತಪ್ರಚಾರ ನಡೆಸಿದರು. ಈ‌ ಸಂದರ್ಭ ಮಾತನಾಡಿದ ಶಾಸಕ ಸೊರಕೆ, ಕಳೆದ ಬಾರಿಯ ಶಾಸಕರು 10 ವರ್ಷಗಳಲ್ಲಿ ಅಭಿವೃದ್ಧಿ ಮಾಡಲಾಗದಿದ್ದನ್ನು ನನ್ನ ಅವಧಿಯಲ್ಲಿನ 5 ವರ್ಷಗಳಲ್ಲಿ ಮಾಡಿತೋರಿಸಲಾಗಿದೆ ಎಂದು ಹೇಳಿದರು. ಬೈರಂಪಳ್ಳಿ ವ್ಯಾಪ್ತಿಯ 6 ಬೂತ್ ಗಳಲ್ಲಿ ಮನೆ ಮನೆಗೆ ತೆರಳಿ ಮತ ಪ್ರಚಾರ ನಡೆಸಲಾಯಿತು. ಹಿರಿಯಡ್ಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ […]

ಬಾವಿಗೆ ಬಿದ್ದು ಚಿರತೆ ಸಾವು

Wednesday, January 31st, 2018
chitaa-well

ಉಡುಪಿ: ಆಹಾರ ಅರಸುತ್ತ ಬಂದ ಚಿರತೆಯೊಂದು ಬಾವಿಗೆ ಬಿದ್ದು ಮೃತಪಟ್ಟ ಘಟನೆ ಪೆರ್ಡೂರು ಸಮೀಪದ ಬೆಳ್ಳರ್ಪಾಡಿಯ ಸುತ್ತುಬಲ್ಲೆ ಎಂಬಲ್ಲಿ ಸೋಮವಾರ ಬೆಳಕಿಗೆ ಬಂದಿದೆ. ಆಹಾರ ಅರಸುತ್ತ ಬಂದ 2 ವರ್ಷ ಪ್ರಾಯದ ಗಂಡು ಚಿರತೆಯು ಸುತ್ತುಬಲ್ಲೆಯ ಸತೀಶ್ ಕುಲಾಲ್ ಎಂಬುವವರ ಆವರಣವಿಲ್ಲದ ಬಾವಿಗೆ ಬಿದ್ದಿದೆ. ನೀರು ತುಂಬಿದ್ದ ಬಾವಿಯಿಂದ ಮೇಲೆ ಬರಲಾಗದೆ ಚಿರತೆ ಸಾವನ್ನಪ್ಪಿದ್ದು, ಚಿರತೆಯ ಮೃತದೇಹವನ್ನು ಕಂಡು ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳೀಯರ ಸಹಕಾರದಿಂದ ಚಿರತೆಯ ಮೃತದೇಹವನ್ನು […]