ಕುಂಟಿಕಾನ ದ ಬಳಿ ಪಾರ್ಕ್ ಮಾಡಲಾಗಿದ್ದ ಟೆಂಪೋ ಟ್ರಾವೆಲರ್ ಕಳ್ಳತನ, ಮೂವರ ಬಂಧನ

Saturday, September 23rd, 2023
ಕುಂಟಿಕಾನ ದ ಬಳಿ ಪಾರ್ಕ್ ಮಾಡಲಾಗಿದ್ದ ಟೆಂಪೋ ಟ್ರಾವೆಲರ್ ಕಳ್ಳತನ, ಮೂವರ ಬಂಧನ

ಮಂಗಳೂರು: ಮಂಗಳೂರಿನ ಕುಂಟಿಕಾನ ಫ್ಲೈಓವರ್ ಬಳಿ ಪಾರ್ಕ್ ಮಾಡಿದ್ದ ಟೆಂಪೋ ಟ್ರಾವೆಲರ್ ವಾಹನವನ್ನು ಉರ್ವ ಪೊಲೀಸರು ಕಾರ್ಯಾಚರಣೆ ನಡೆಸಿ ಬೆಳಗಾವಿಯಲ್ಲಿ ಪತ್ತೆ ಹಚ್ಚಿದ್ದು, ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಹೊರ ರಾಜ್ಯದ ನಿವಾಸಿಗಳಾದ ಅರೀಫ್ ಉಲ್ಲಾಖಾನ್ ಯಾನೆ ಅರೀಫ್, ಅಮಿತ್ ಬಾಹುಬಲಿ ಪಂಚೋಡಿ ಯಾನೆ ಬೇಬಿ ಮತ್ತು ಸುರೇಂದ್ರ ಕುಮಾರ್ ಬಂಧಿತ ಆರೋಪಿಗಳು. ಟೆಂಪೋ ಟ್ರಾವೆಲರ್ ಸೆ. 14 ರಂದು ರಾತ್ರಿ ಕಳವಾಗಿದ್ದು ಸುಮಾರಾಕ್ 15 ಲಕ್ಷ ರೂ. ಮೌಲ್ಯದ್ದಾಗಿತ್ತು ಈ ಬಗ್ಗೆ ಉರ್ವ ಠಾಣೆಯಲ್ಲಿ […]

ಮಗು ಮಾರಾಟ ಜಾಲ ಪತ್ತೆ: ಆರೋಪಿಗಳ ಬಂಧನ

Thursday, August 4th, 2016
child-trafficking

ಮಂಗಳೂರು: ಮಗು ಮಾರಾಟ ಮಾಡಲು ಯತ್ನಿಸಿದ ಜಾಲವನ್ನು ಬೇಧಿಸಿರುವ ಉರ್ವ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ನಗರದ ಚಿಲಿಂಬಿ ಕೆನರ ಬ್ಯಾಂಕ್ ಬಳಿ ಮಗು ಹಿಡಿದುಕೊಂಡು ನಿಂತಿದ್ದ ಜಲೀಲ್ (43), ಆತನ ಪತ್ನಿ ಮೈಮುನಾ ಹಾಗೂ ರೇಶ್ಮಾ (22) ಎಂಬ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ. ಆರು ತಿಂಗಳ ಹಿಂದೆ ರೇಶ್ಮಾಳಿಗೆ ಅರಸೀಕೆರೆಯಲ್ಲಿ ಒಂದು ವರ್ಷ ಮೂರು ತಿಂಗಳ ಹೆಣ್ಣುಮಗುವೊಂದು ಸಿಕ್ಕಿದೆ. ಅದನ್ನು 90 ಸಾವಿರ ರೂ.ಗೆ ಮಾರಾಟ ಮಾಡಲು ಸಹಾಯ ಮಾಡಿದವರೇ ಆರೋಪಿಗಳಾದ ಜಲೀಲ್ ಹಾಗೂ ಆತನ ಪತ್ನಿ […]

ನಮ್ಮ ಸಂಸ್ಕೃತಿಯಲ್ಲಿ ಹೆತ್ತ ತಾಯಿಯನ್ನು ಪ್ರತ್ಯಕ್ಷ ದೇವರೆಂದು ಆರಾಧಿಸಲಾಗುತ್ತಿದೆ

Thursday, February 25th, 2016
Ankatimar

ಮುಳ್ಳೇರಿಯಾ: ವಿಶ್ವದಲ್ಲಿ ಶ್ರೇಷ್ಠ ನಾಗರೀಕತೆಯನ್ನು ಹೊಂದಿರುವ ಭಾರತ ತನ್ನ ವಿವಿಧ ಆಚಾರ,ವೈವಿಧ್ಯಮಯ ಸಂಸ್ಕೃತಿ ಹಾಗೂ ಆರಾಧನೆಗಳಿಂದ ಮಹತ್ವ ಪಡೆದಿದೆ.ದೇವರ ಮೇಲಿನ ಅಪಾರ ನಂಬಿಕೆ,ವಿಶ್ವಾಸಗಳಿಂದ ದೇವರ ಕೋಣೆಯಂತೆ ನಮ್ಮ ದೇಶ ಇತರ ರಾಷ್ಟ್ರಗಳಿಗೆ ಆಕರ್ಷಿಸಲ್ಪಡುತ್ತಿದೆಯೆಂದು ಧಾರ್ಮಿಕ ಮುಂದಾಳು ವಸಂತ ಪೈ ಬದಿಯಡ್ಕ ಅಭಿಪ್ರಾಯ ವ್ಯಕ್ತಪಡಿಸಿದರು. ಅಂಕತ್ತಿಮಾರ್ ಶ್ರೀರಕ್ತೇಶ್ವರಿ ದೈವಸ್ಥಾನದ ನಾಗ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವದಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡುತ್ತಿದ್ದರು. ನಮ್ಮ ಸಂಸ್ಕೃತಿಯಲ್ಲಿ ಹೆತ್ತ ತಾಯಿಯನ್ನು ಪ್ರತ್ಯಕ್ಷ ದೇವರೆಂದು ಆರಾಧಿಸಲಾಗುತ್ತಿದೆ.ಬೇರೆಲ್ಲೂ ಕಂಡು ಬರಲಾರದ ಈ […]