ಬೆಂಗಳೂರು ನಗರದಲ್ಲಿ ನೀರು ಕೊಡುವ ನೂತನ ಎಟಿಎಂ ಉದ್ಘಾಟನೆ..!

Wednesday, June 27th, 2018
soumya-reddy

ಬೆಂಗಳೂರು: ನಗರದಲ್ಲಿ ನೀರು ಕೊಡುವ ನೂತನ ಎಟಿಎಂವೊಂದನ್ನು ಉದ್ಘಾಟನೆ ಮಾಡುವ ಮೂಲಕ ಹೊಸ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಲಾಯಿತು. ಜಯನಗರದ ಭೈರಸಂದ್ರದಲ್ಲಿ ಈ ನೀರು ಕೊಡುವ ಎಟಿಎಂ ಅನ್ನು ಶಾಸಕ ರಾಮಲಿಂಗಾರೆಡ್ಡಿ ಇಂದು ಸಾರ್ವಜನಿಕರಿಗಾಗಿ ಲೋಕಾರ್ಪಣೆಗೊಳಿಸಿದರು. ಎಟಿಎಂ ಕಾರ್ಡ್ ಇನ್ಸರ್ಟ್ ಮಾಡಿದ್ರೆ ಸಾಕು ನೀರು ಅಂತ ಬಂದವರಿಗೆ ದಾಹ ತೀರಿಸುತ್ತದೆ ಈ ‘ಭಗೀರಥ’ ಎಟಿಎಂ. ಸ್ವಯಂ ಚಾಲಿತ ಎಟಿಎಂ ಕಾರ್ಡ್ ಹಾಗೂ ಶುದ್ಧ ನೀರಿನ ಘಟಕ ಇದಾಗಿದ್ದು ಶಾಸಕಿ ಸೌಮ್ಯ ರೆಡ್ಡಿ ಹಾಗೂ ಕಾರ್ಪೊರೇಟರ್ ನಾಗರಾಜ್ ಸಹ […]

ಧರ್ಮಸ್ಥಳದಲ್ಲಿ ದೇವರ ದರ್ಶನಕ್ಕೆ ನಿಂತಿದ್ದ ವ್ಯಕ್ತಿಯ ಬಳಿಯಿಂದ ನಗದು ಕಳವು

Thursday, February 2nd, 2017
Shreenivasulu

ಮಂಗಳೂರು: ಧರ್ಮಸ್ಥಳ ದೇವರ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದ ವ್ಯಕ್ತಿಯ ಬಳಿ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಧರ್ಮಸ್ಥಳ ಪೊಲೀಸರು ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಶ್ರೀನಿವಾಸುಲು(25) ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿಯು ಡಿ. 25 ರಂದು ಬೆಂಗಳೂರಿನ ಲೋಕೇಶ್ ಎಂಬವರು ಧರ್ಮಸ್ಥಳದಲ್ಲಿ ದೇವರ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದಾಗ ಅವರ ಪ್ಯಾಂಟ್ ಕಿಸೆಯಿಂದ ಎಟಿಎಂ ಕಾರ್ಡ್ , 8700 ರೂ. ನಗದು ಕಳವು ಮಾಡಿದ್ದ. ಇನ್ನು ಕಳವು ಮಾಡಿದ್ದ ಎಟಿಎಂನಿಂದ ಮಂಗಳೂರಿನಲ್ಲಿ ಚಿನ್ನಾಭರಣವನ್ನು ಖರೀದಿಸಿದ್ದ. ಇದರ ಆಧಾರದಲ್ಲಿ ಬೆಳ್ತಂಗಡಿ […]