ಐಷಾರಾಮಿ ಕಳ್ಳರು : ಕಾರಲ್ಲಿ ತೆರಳಿ ಕಳವು ನಡೆಸುವ ಮೂವರ ಬಂಧನ

Sunday, July 3rd, 2016
thieves

ಬದಿಯಡ್ಕ: ರಾತ್ರಿ ಹೊತ್ತು ಕಾರಲ್ಲಿ ಸಂಚರಿಸಿ ಅಡಿಕೆ ಸಹಿತ ಕೃಷಿ ಉತ್ಪನ್ನಗಳನ್ನು ಕಳವು ನಡೆಸುವ ತಂಡದ ಮೂವರು ಐಷಾರಾಮಿ ಕಳ್ಳರನ್ನು ಬದಿಯಡ್ಕ ಪೋಲೀಸರು ಬಂಧಿಸಿದ್ದಾರೆ. ನೆಲ್ಲಿಕಟ್ಟೆ ಮೀನಾಡಿಪಳ್ಳದ ಅಬ್ದುಲ್ ರಹಿಮಾನ್(58),ಮಂಗಳೂರು ಜೋಕಟ್ಟೆಯ ಉಮರುಲ್ ಫಾರೂಖ್(44),ಉಳ್ಳಾಲ ಬಿ.ಸಿ.ರೋಡಿನ ಮೊಹಮ್ಮದ್ ಹನೀಫಾ(45)ಎಂಬವರನ್ನು ಬಂಧಿಸಲಾಗಿದೆ. ಬದಿಯಡ್ಕ ಬಾರಡ್ಕ ನಿವಾಸಿ, ಬದಿಯಡ್ಕದ ವ್ಯಾಪಾರಿ ಯೂಸುಫ್ ರವರ ಮನೆ ಬಳಿಯ ಅಡಿಕೆ ಕಳವು ನಡೆಸಲೆತ್ನಿಸಿದ ಪ್ರಕರಣದಲ್ಲಿ ಈ ಮೂವರನ್ನು ಬಂಧಿಸಲಾಗಿದೆ.ಜೂ.23 ರಂದು ರಾತ್ರಿ ಇನ್ನೋವಾ ಕಾರಲ್ಲಿ ಬಂದಿದ್ದ ಈ ಮೂವರ ತಂಡ ಬಾರಡ್ಕ ತಲಪಿ […]

ಎಸ್‌ಎಸ್‌ಎಫ್ ಜಿಲ್ಲಾಧ್ಯಕ್ಷ ನ ವಿರುದ್ಧ ದೌರ್ಜನ್ಯಕ್ಕೊಳಗಾದ ಅತ್ತಿಗೆಯಿಂದ ಕಮೀಷನರ್ ಅವರಿಗೆ ದೂರು ದಾಖಲು!

Sunday, November 15th, 2015
Afil Yakub Sahadi

ಮಂಗಳೂರು : ಅಫಿಲ್ ಯಾಕೂಬ್ ಸಹದಿ, ಈ ಹೆಸರನ್ನು ನೀವು ಕೇಳಿರಬಹುದು. ಯಾಕೆಂದರೆ ಅಫಿಲ್ ಯಾಕೂಬ್ ಸಹದಿ ಮುಸ್ಲಿಂ ಸಮುದಾಯದ ಒಬ್ಬ ದೊಡ್ಡ ವಿದ್ವಾಂಸ. ಅವನು ಪ್ರವಚನ ಮಾಡಲು ನಿಂತ ಎಂದರೆ ಕೇಳುತ್ತಿದ್ದವರಿಗೆ ಇವನು ನಮ್ಮ ಸಂಬಂಧಿಯೊ, ಅಣ್ಣನೊ, ತಮ್ಮನೊ ಆಗಿದ್ದಲ್ಲಿ ಎಷ್ಟು ಒಳ್ಳೆಯದಿತ್ತು ಎಂದು ಅನಿಸದೇ ಇರಲಾರದು. ಅಷ್ಟು ಪಾಂಡಿತ್ಯ, ನಿರರ್ಗಳ ಮತ್ತು ಯಾರೂ ತಲೆದೂಗುವಂತಹ ವಾಕ್ ಪಟುತ್ವ. ಅಫಿಲ್ ಯಾಕೂಬ್ ಸಹದಿ ಕಳೆದ ಎಂಟು ವರ್ಷಗಳಿಂದ ಹರೇಕಳ ಬೈತಾರ್ ಜುಮಾಮಸೀದಿಯಲ್ಲಿ ಖತೀಬನಾಗಿ ಕೆಲಸ ಮಾಡುತ್ತಿದ್ದಾನೆ. […]