ಕೊರೊನಾ ಪಾಸಿಟಿವ್ ಇದ್ದ ಯುವಕ ಕಟ್ಟಡದಿಂದ ಹಾರಿ ಆತ್ಮಹತ್ಯೆ

Saturday, May 29th, 2021
Jumping

ಮಂಗಳೂರು : ಕೊರೊನಾ ಪಾಸಿಟಿವ್ ಇದ್ದ ಯುವಕನೋರ್ವ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಪಡೀಲ್ ಬಳಿ ಮೇ 27 ರ ಗುರುವಾರ ರಾತ್ರಿ ನಡೆದಿದೆ. ಮೃತ ಯುವಕನನ್ನು ಸಮೀರ್ (30)ಎಂದು ಗುರುತಿಸಲಾಗಿದೆ. ಪಡೀಲ್ ನ 7 ನೇ ಮಹಡಿಯ ಫ್ಲ್ಯಾಟ್ ನಿಂದ ಸಮೀರ್ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ಸಮೀರ್ ಅವಿವಾಹಿತರಾಗಿದ್ದು, ಮೃತದೇಹ ಪರೀಕ್ಷಿಸಿದಾಗ ಕೊರೊನಾ ಪಾಸಿಟಿವ್ ಆಗಿರುವುದು ತಿಳಿದುಬಂದಿದೆ. ಕಂಕನಾಡಿ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮಂಗಳೂರು : ಮದುವೆ ಮನೆಗೆ ದಾರಿ ಕೇಳಿದ್ದಕ್ಕೆ ಹಲ್ಲೆ, ರೌಡಿಶೀಟರ್ ಮತ್ತು ಸಹಚರರ ಬಂಧನ

Wednesday, December 9th, 2020
Gowrish

ಮಂಗಳೂರು :  ಮದುವೆ ಮನೆಯಲ್ಲಿ ನಡೆದ ದಾಂಧಲೆಗೆ ಸಂಬಂಧಿಸಿ ರೌಡಿಶೀಟರ್ ಸಹಿತ ನಾಲ್ವರನ್ನು ಕಂಕನಾಡಿ ನಗರ ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯ ನಿವಾಸಿ ರೌಡಿಶೀಟರ್ ಗೌರೀಶ್, ಆತನ ಸ್ನೇಹಿತರಾದ ತಲಪಾಡಿಯ ಸುಮಂತ್, ಬಜಾಲ್ ಸುಮಂತ್ ಮತ್ತು ಆಶಿತ್ ಬಂಧಿತ ಆರೋಪಿಗಳು. ಇವರು ಪಡೀಲ್ ಬಡ್ಲಗುಡ್ಡೆಯಲ್ಲಿ ಸೋಮವಾರ ರಾತ್ರಿ ಮದುವೆಗೆ ಬಂದವರಿಗೆ ಹಲ್ಲೆ ನಡೆಸಿದ್ದರು. ಮುಂಬೈಯಿಂದ ಮದುವೆ ಕಾರ್ಯಕ್ರಮಕ್ಕೆ ಬಂದ ಅತಿಥಿಗಳನ್ನು ಗೌರೀಶ್ ತನ್ನ ಗೆಳೆಯರನ್ನು ಕರೆಸಿ ಮಹಿಳೆಯರನ್ನು ಸಹಿತ ಎಳೆದಾಡಿ, ಹೆಲ್ಮೆಟ್‌ನಿಂದ ಹಲ್ಲೆ ಮಾಡಿದ್ದಾನೆ ಎಂದು ದೂರಲಾಗಿದೆ. ಗೌರೀಶ್ ಬಳಿ ಮದುವೆ  ಮನೆಗೆ ದಾರಿ […]

ಹಿಲ್ ಸೆಂಟರ್ ಕಚೇರಿಯ ಕಳ್ಳತನ ಪ್ರಕರಣ: ಇಬ್ಬರ ಬಂಧನ

Tuesday, February 7th, 2017
Mangalore

ಮಂಗಳೂರು: ನಗರದ ಹಿಲ್ ಸೆಂಟರ್ ಕಚೇರಿಯ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಕನಾಡಿ ಪೋಲಿಸರು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಅಸ್ಸಾಂ ರಾಜ್ಯದ ರಂಜನ್ ಕಲಿಟಾ (22) ಮತ್ತು ಶಿವಶಂಕರ್ ದಾಸ ಅಲಿಯಾಸ್ ಅಶೋಕ್ ಕಬೀರ್ (23) ಎಂದು ಗುರುತಿಸಲಾಗಿದೆ. ಬಂಧಿತರಿಂದ ಪೋಲಿಸರು ಕಳವು ಮಾಡಿದ ನಾಲ್ಕು ಲ್ಯಾಪ್ ಟಾಪ್, ಐದು ಐಪಾಡ್, ಒಂದು ಕ್ಯಾಮರಾ, ಒಂದು ವಾಚ್ ಸೇರಿದಂತೆ ರು.2,87,500 ಮೊತ್ತದ ಮಾಲನ್ನು ವಶಪಡಿಸಿಕೊಂಡಿದ್ದಾರೆ ಫೆಬ್ರವರಿ 6ರ ಸಂಜೆ ಆರೋಪಿಗಳಾದ ರಜನಿ ಕ್ಯಾಲಿಟಾ ಮತ್ತು ಶಿವಶಂಕರ್ ಕಳುವಾದ […]