ಈಜಲು ಹೋದ ಯುವಕರಿಬ್ಬರು ನೀರುಪಾಲು

Wednesday, July 6th, 2016
maravoor-child

ಮಂಗಳೂರು: ಈಜಲು ಹೋದ ಯುವಕರಿಬ್ಬರು ನೀರುಪಾಲಾದ ಘಟನೆ ಮರವೂರು ಸಮೀಪ ನದಿಯಲ್ಲಿ ನಡೆದಿದೆ. ಮೃತರನ್ನು ಅವಿನಾಶ್ (26) ಮತ್ತು ಜೇಸನ್ (24) ಎಂದು ಗುರುತಿಸಲಾಗಿದೆ. ಮರವೂರು ಸೇತುವೆಯ ಕಿಂಡಿ ಅಣೆಕಟ್ಟಿಗೆ ಈಜಲು ಇಳಿದ ಇವರಿಬ್ಬರು ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದೆ. ಮೃತರ ಹೆಚ್ಚಿನ ವಿವರ ಲಭ್ಯವಾಗಿಲ್ಲ. ಮೃತದೇಹಕ್ಕಾಗಿ ಶೋಧ ನಡೆದಿದೆ. ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾವೂರು ಠಾಣೆ ಪೊಲೀಸರ ವಿರುದ್ದ ಹಿಂದೂ ಕಾರ್ಯಕರ್ತರ ಪ್ರತಿಭಟನೆ

Monday, October 13th, 2014
vhp protest

ಮಂಗಳೂರು : ವಿಶ್ವ ಹಿಂದು ಪರಿಷತ್, ಬಜರಂಗ ದಳ ಕಾರ್ಯಕರ್ತರು ಮೂಡುಶೆಡ್ಡೆ ಹಿಂದೂ ಕಾರ್ಯಕರ್ತನೊರ್ವನಿಗೆ ಕಾವೂರು ಠಾಣೆ ಇನ್ಸ್ ಫೆಕ್ಟರ್ ಹಾಗೂ ಪೇದೆಗಳಿಬ್ಬರು ಚಿತ್ರಹಿಂಸೆ ನೀಡಿರುವುದನ್ನು ಖಂಡಿಸಿ ಅ13 ಸೋಮವಾರ ಜಿಲ್ಲಾಧಿಕಾರಿ ಕಚೇರಿಯೆದುರು ಪ್ರತಿಭಟನೆ ನಡೆಸಿದರು. ವಿಹಿಂಪ ಮುಖ್ಯಸ್ಥ ಜಗದೀಶ್ ಶೇಣವ ಮಾತನಾಡಿ ಹಿಂದೂ ಕಾರ್ಯಕರ್ತ ಚರಣ್ ಈ ಹಿಂದೆ ಕೇಸೊಂದರಲ್ಲಿ ಠಾಣೆಗೆ ಹಾಜರಾಗದೆ, ನೇರ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದುಕೊಂಡಿದ್ದಾನೆ. ಇದನ್ನೇ ನೆಪವಾಗಿರಿಸಿ ಚರಣ್ ನನ್ನು ಬಂಧಿಸಿದ ಪೊಲೀಸರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಆತ ಎದ್ದು […]

ದೇರೆಬೈಲಿನ ಕೊಂಚಾಡಿಯ ಚರ್ಚ್ ಬಳಿ ಮಣ್ಣು ಕುಸಿದು ಓರ್ವ ಕಾರ್ಮಿಕ ಸಾವು

Wednesday, April 30th, 2014
construction

ಮಂಗಳೂರು: ದೇರೆಬೈಲಿನ ಕೊಂಚಾಡಿಯ ಚರ್ಚ್ ಬಳಿ ಬ್ಲೂಬೇರಿಸ್ ಕಂಪೆನಿಯ ಕಟ್ಟಡ ನಿರ್ಮಾಣದ ವೇಳೆ ಮಣ್ಣು ಕುಸಿದು ಕುಸಿದು ಓರ್ವ ಕಾರ್ಮಿಕ ಸಾವನ್ನಪ್ಪಿರುವ ದುರ್ಘ‌ಟನೆ ಎಪ್ರಿಲ್‌ 30ರಂದು ಸಂಭವಿಸಿದೆ. ಕಟ್ಟಡ ನಿರ್ಮಾಣಕ್ಕೆ ಮಣ್ಣು ಅಗೆಯುತ್ತಿದ್ದು ಮೇಲಿನಿಂದ ಮಣ್ಣು ಕುಸಿದು ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಮಣ್ಣಿನಡಿಯಲ್ಲಿ ಸಿಲುಕಿಕೊಂಡಿರುವ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತ ವ್ಯಕ್ತಿಯನ್ನು ಕಟ್ಟಡ ಕಾರ್ಮಿಕ ಬಾಗಲಕೋಟೆಯ ಕಾಶಿಯಪ್ಪ ಎಂದು ಗುರುತಿಸಲಾಗಿದೆ. ಕಾಶಯಪ್ಪ ಅವರ ಪತ್ನಿ ಮಹಾದೇವಿ ಹಾಗೂ ಸ್ವಾಮಿ ನಾಯಕ್‌ ಎನ್ನುವವರು ಗಾಯಗೊಂಡಿದ್ದು ಅವರಿಗೆ ಸ್ಥಳೀಯ […]