ಹಾಸ್ಯನಟ ಕೆ ಎಂ ರತ್ನಾಕರ್ ನಿಧನ

Tuesday, September 21st, 2010
ಹಿರಿಯ ಕಲಾವಿದ ಕೆ ಎಂ ರತ್ನಾಕರ್

ಮೈಸೂರು : ಹಾಸ್ಯನಟನಾಗಿ 350ಕ್ಕೂ ಹೆಚ್ಚು  ಚಿತ್ರಗಳಲ್ಲಿ ಅಭಿನಯಿಸಿದ ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಕೆ ಎಂ ರತ್ನಾಕರ್  ಇಂದು ಮಧ್ಯಾಹ್ನ ಮೈಸೂರಿನ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ.  ಅವರು ಮೂತ್ರ ಜನಕಾಂಗದ ವೈಫಲ್ಯದ ಅನಾರೋಗ್ಯದಿಂದ ಅಸ್ವಸ್ಥರಾಗಿದ್ದರು. ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ  ದಾಖಲಾಗಿದ್ದರು. ಇನ್ನು ಅಭಿಮಾನಿಗಳಿಗೆ ಅವರು ಬರಿ ನೆನಪಷ್ಟೆ. ಹಾಸ್ಯನಟನಾಗಿ ಅವರದೇ ಆದ ಪ್ರೇಕ್ಷಕ ವರ್ಗವನ್ನು ನಿರ್ಮಿಸಿದ್ದಾರೆ.  ಗುರು ಶಿಷ್ಯರು, ಅಣ್ಣಯ್ಯ, ಗಡಿಬಿಡಿ ಗಂಡ, ಕೆಂಪಯ್ಯ ಐಪಿಎಸ್, ಭಕ್ತ ಕನಕದಾಸ, ಬಯಲು ದೀಪ ಸಾಹಸ ಸಿಂಹ ವಿಷ್ಣುವರ್ಧನ್  […]