ಸಾಲಗಾರರ ಕಿರಿಕಿರಿ ತನ್ನ ಸ್ವಂತ ಬೈಕ್ ಗೆ ಶೋ ರೂಂ ಎದುರು ಬೆಂಕಿ ಹಚ್ಚಿದ ಯುವಕ

Tuesday, February 8th, 2022
Bike

ಬಂಟ್ವಾಳ : ವ್ಯಕ್ತಿಯೊಬ್ಬ ತನ್ನ ಸ್ವಂತ ಬೈಕ್ ಗೆ ಬೈಕ್ ಶೋ ರೂಂ ಎದುರೇ ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಘಟನೆ ಸೋಮವಾರ ಬಿ.ಸಿ.ರೋಡ್ ಕೈಕಂಬ ಸಮೀಪ ನಡೆದಿದೆ. ಫರಂಗಿಪೇಟೆ ನಿವಾಸಿ ಮುಹಮ್ಮದ್ ಹರ್ಷಾದ್ ಬೈಕ್ ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ವ್ಯಕ್ತಿ ಎನ್ನಲಾಗಿದೆ. ಹರ್ಷಾದ್ ಫೈನಾನ್ಸ್ ನಿಂದ ಸಾಲ ಮಾಡಿ ಬೈಕ್ ಕೊಂಡುಕೊಂಡಿದ್ದು ಸಾಲದ ಕಂತು ಪಾವತಿ ಮಾಡಿಲ್ಲ ಎಂಬ ಕಾರಣಕ್ಕೆ ಫೈನಾನ್ಸ್ ನವರು ಬೈಕ್ ಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಆತನ ಕೈಯಿಂದ […]

ಕ್ರೈಬ್ರಾಂಚ್ ಪೊಲೀಸರೆಂದು ನಂಬಿಸಿ ಚಿನ್ಮಾಭರಣ ದರೋಡೆ, ಇಬ್ಬರ ಬಂಧನ

Wednesday, November 11th, 2020
irani Gang

ಬಂಟ್ವಾಳ :  ಕ್ರೈಬ್ರಾಂಚ್ ಪೊಲೀಸರೆಂದು ನಂಬಿಸಿ ಬಿ.ಸಿ.ರೋಡಿನ ಕೈಕಂಬದಲ್ಲಿ ವ್ಯಕ್ತಿಯೊಬ್ಬರ ಚಿನ್ಮಾಭರಣ ದೋಚಿದ ಪ್ರಕರಣದಲ್ಲಿ ಬಂಧನಕ್ಕೊಳಗಾದ ಇಬ್ಬರು ಆರೋಪಿಗಳಿಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಮಹಾರಾಷ್ಟ್ರ ದ ಝಾಕಿರ್ ಹುಸೈನ್(26) ಮತ್ತು ಕಂಬರ್ ರಹೀಂ ಮಿರ್ಜಾ(32) ಬಂಧಿತ ಆರೋಪಿಗಳು. ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಿತ್ತಬೈಲು ಕೊಡಂಗೆ ನಿವಾಸಿ ಶಿವಪ್ರಸಾದ್ ಶರ್ಮ ಅವರು  2020ರ ಜ.18ರಂದು ಮಧ್ಯಾಹ್ನ  ಕೈಕಂಬದಲ್ಲಿ ನಡೆದುಕೊಂಡು ಹೋಗುವ ವೇಳೆ ಬೈಕಿನಲ್ಲಿ ಬಂದ ಇಬ್ಬರು ಹಿಂದಿ ಭಾಷೆಯಲ್ಲಿ ಮಾತನಾಡಿ, ನಾವು […]

ಮಂಗಳೂರು : ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ

Friday, October 18th, 2019
Pairoz

ಮಂಗಳೂರು : ಮಂಗಳೂರು ನಗರದ ರಾವ್ ಆ್ಯಂಡ್ ರಾವ್ ವೃತ್ತದ ಬಳಿ ಇರುವ ಪೆಟ್ರೋಲ್ ಪಂಪ್ ಎದುರು ಸಾರ್ವಜನಿಕ ಸ್ಥಳದಲ್ಲಿ ಗುರುವಾರದಂದು ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಎಕನಾಮಿಕ್ ಆ್ಯಂಡ್ ನಾರ್ಕೋಟಿಕ್ಸ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಗುರುಪುರ ಕೈಕಂಬದ ನಿವಾಸಿ ಮಹಮ್ಮದ್ ಪೈರೋಜ್ (23) ಎಂದು ಗುರುತಿಸಲಾಗಿದ್ದು, ಇತನಿಂದ ಸುಮಾರು 127 ಗ್ರಾಂ ತೂಕದ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ ಮೊಬೈಲ್ ಪೋನನ್ನು ವಶಕ್ಕೆ ಪಡೆಯಲಾಗಿದೆ.    

ರಮಾನಾಥ ರೈ ಪರ ಬಿ.ಸಿ.ರೋಡಿನಲ್ಲಿ ಕಾಂಗ್ರೆಸ್ ಭರ್ಜರಿ ‘ರೋಡ್ ಶೋ’..!

Thursday, May 10th, 2018
road-show

ಬಂಟ್ವಾಳ: ಸಚಿವ ರಮಾನಾಥ ರೈ ಪರ ಬಂಟ್ವಾಳ ಕ್ಷೇತ್ರದಾದ್ಯಂತ ವ್ಯಾಪಕ ಬೆಂಬಲ ವ್ರ್ಯಕ್ತವಾಗಿದೆ. ಕ್ಷೇತ್ರದ ಹೃದಯಭಾಗವಾದ ಬಿ.ಸಿ.ರೋಡಿನಲ್ಲಿ ಕಾಂಗ್ರೆಸ್ ಭರ್ಜರಿ ‘ರೋಡ್ ಶೋ’ ನಡೆಸುವ ಮೂಲಕ ಪಕ್ಷದ ಶಕ್ತಿ ಪ್ರದರ್ಶನ ನಡೆಸಿತು. ಸಚಿವ ರೈ ಬೆಂಬಲಿಗರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ಹಾಗೂ ನಾಗರಿಕರ ಉತ್ಸಾಹಹಾ ಹುಮ್ಮಸ್ಸಿನ ಸಂಕೇತವಾಗಿತ್ತು. ಸಾವಿರಾರು ಜನರ ‘ರೋಡ್ ಶೋ’ದಲ್ಲಿ ಕೇಂದ್ರ ಸಚಿವ ಗುಲಾಂನಬಿ ಅಜಾದ್ ಮುಖ್ಯ ಆಕರ್ಷಣೆಯಾಗಿದ್ದರು. ಸಾವಿರಾರು ಜನರಿಂದ ಕೈಕಂಬದಲ್ಲಿ ಆರಂಭವಾದ ರೋಡ್ ಶೋ ಪಾಣೆಮಂಗಳೂರು ಮೂಲಕ ಮೆಲ್ಕಾರ್ ನಲ್ಲಿ ಸಂಪನ್ನಗೊಂಡಿತು.