ಚಿಲ್ಲರೆ ಸಮಸ್ಯೆ ಪರಿಹಾರಕ್ಕೆ ದೇರೇಬೈಲು ಶಾಖೆ ಮ್ಯಾನೇಜರ್‌ ತೋರಿಸಿರುವ ಸ್ಪಂದನೆ

Wednesday, November 16th, 2016
Note-solution

ಮಂಗಳೂರು: ಬ್ಯಾಂಕ್‌ನಲ್ಲಿ 500 ರೂ., 1,000 ರೂ. ನೋಟು ವಿನಿಮಯ ಸಂದರ್ಭ ಎದುರಾಗುವ ಚಿಲ್ಲರೆ ಸಮಸ್ಯೆ ಪರಿಹಾರಕ್ಕೆ ಪ್ರತಿಷ್ಠಿತ ಬ್ಯಾಂಕೊಂದರ ದೇರೇಬೈಲು ಶಾಖೆ ಮ್ಯಾನೇಜರ್‌ ತೋರಿಸಿರುವ ಸ್ಪಂದನೆ ಸಾರ್ವತ್ರಿಕ ಪ್ರಶಂಸೆಗೆ ಪಾತ್ರವಾಗಿದೆ. ಬ್ಯಾಂಕ್‌ಗೆ ಹಿರಿಯ ನಾಗರಿಕರೋರ್ವರು ಹಳೆ ನೋಟು ವಿನಿಮಯಕ್ಕೆ ಬಂದಿದ್ದರು. ಚಿಲ್ಲರೆ ಸಮಸ್ಯೆಯಿಂದ 2,000 ರೂ. ಹೊಸ ನೋಟು ನೀಡುವುದು ಅನಿವಾರ್ಯವಾಯಿತು. ಇದನ್ನು ಚಿಲ್ಲರೆ ಮಾಡಲು ಸಮಸ್ಯೆಯಾಗುತ್ತಿದ್ದೆ ಎಂದು ಮ್ಯಾನೇಜರ್‌ ಅವರಲ್ಲಿ ತೋಡಿಕೊಂಡಾಗ ತನ್ನಲ್ಲಿದ್ದ ವೈಯಕ್ತಿಕ ಚಿಲ್ಲರೆ ಹಣವನ್ನು ಅವರಿಗೆ ನೀಡಿದರು. ಇದೇ ರೀತಿ ಸಮಸ್ಯೆ […]

ಬಿಜೆಪಿ ತನ್ನ ವಿರುದ್ಧ ಮಾಡಿರುವ ಆರೋಪದಲ್ಲಿ ಹುರುಳಿಲ್ಲ: ಯು. ಟಿ. ಖಾದರ್

Monday, November 14th, 2016
U-t-khadar

ಮಂಗಳೂರು: ತನ್ನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಿರಂತರ ನಡೆಯುತ್ತಿರುವ ಅಹಿತಕರ ಘಟನೆಯ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ವಿರುದ್ಧ ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು. ಟಿ. ಖಾದರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಹಿತಕರ ಘಟನೆಯಲ್ಲಿ ನನ್ನ ಪಾತ್ರವಿದೆ ಎಂದು ಬಿಜೆಪಿ ನಾಯಕ, ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ ಆರೋಪಿಸಿದ್ದಾರೆ. ಆರೋಪದಲ್ಲಿ ಹುರುಳಿಲ್ಲ. ಅಹಿತಕರ ಘಟನೆ ಯಾರೇ ಮಾಡಿದರೂ ಖಂಡನೀಯ. ಶಾಂತಿಯನ್ನು ಬಯಸುವ ಯಾವ ನಾಗರಿಕನೂ ಇಂತಹ […]