ಪ್ರಾಕೃತಿಕ ಕೃಷಿ ಬದುಕನ್ನು ಮರುಸೃಷ್ಟಿಸಿ, ತುಳು ಪರಂಪರೆಯನ್ನು ಉಳಿಸಿ : ಡಾ. ವಿಶ್ವನಾಥ ಬದಿಕಾನ

Friday, December 13th, 2019
tulu

ಮಂಗಳೂರು : ಕೃಷಿ ಚಟುವಟಿಕೆಯಲ್ಲಿ ಯಾಂತ್ರಿಕರಣ ಹಾಗೂ ರಾಸಾಯನಿಕ ಬಳಕೆ ಮಾನವ ಜೀವ ಸಂಕುಲಕ್ಕೆ ಮಾರಕವಾಗಿದ್ದು, ಕೃಷಿ ಹಾಗೂ ಆಹಾರ ಪದ್ಧತಿಗಳ ಬದಲಾವಣೆಯ ಪ್ರಭಾವದಿಂದ ಜನಸಂಸ್ಕೃತಿ, ಜೀವನಾರ್ವತಕ ಮತ್ತು ವಾರ್ಷಿಕಾವರ್ತನ ಆಚರಣೆಗಳು ಮಹತ್ವವನ್ನು ಕಳೆದುಕೊಳ್ಳುತ್ತಿದ್ದು, ಜೀವ ವೈವಿಧ್ಯತೆಯಿಂದ ಕೂಡಿದ ತುಳುನಾಡಿನ ಭೌಗೋಳಿಕ ಪರಂಪರೆ, ಸಸ್ಯ ಸಂಪತ್ತು, ಪಾರಂಪರಿಕ ಕಸುಬುಗಳು, ವೈದ್ಯಪದ್ಧತಿಗಳು ಜನಜೀವನದಿಂದ ಮರೆಯಾಗುತ್ತಿದ್ದು, ನಗರೀಕರಣದ ಆಕರ್ಷಣೆಯಿಂದ ಆಧೀಮಾ ಸಂಸ್ಕೃತಿ ನಾಶವಾಗುತ್ತಿದೆ. ಪ್ರಾಕೃತಿಕ ಸಂಪನ್ಮೂಲ ಆಧಾರಿತ ಕೃಷಿ ಬದುಕನ್ನು ಮರುಸೃಷ್ಟಿಸುವ ಮೂಲಕ ತುಳು ಪರಂಪರೆಯನ್ನು ಉಳಿಸಬೇಕು ಎಂದು ತುಳು […]

ಉರ್ವಸ್ಟೋರ್‌ನಲ್ಲಿ ‘ತುಳು ಭವನ’ ನಿರ್ಮಾಣಕ್ಕೆ ಶಿಲಾನ್ಯಾಸ

Sunday, October 2nd, 2011
Foundation laying ceremony for the Tulu Bhavana

ಮಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಉರ್ವಸ್ಟೋರ್‌ನಲ್ಲಿ ಸುಮಾರು 5 ಕೋ. ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಅಕಾಡೆಮಿ  ಕಟ್ಟಡ ‘ತುಳು ಭವನ’ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜೆ. ಕೃಷ್ಣ ಪಾಲೆಮಾರ್‌ ಜಿಲ್ಲಾ ಉಸ್ತುವಾರಿ ಅವರು ಶನಿವಾರ ಶಿಲಾನ್ಯಾಸ ನೆರವೇರಿಸಿದರು. ಮೂರು ಮಹಡಿಗಳನ್ನು ಒಳಗೊಂಡಿರುವ ‘ತುಳು ಭವನ’ ಮೊದಲ ಮಹಡಿಯಲ್ಲಿ ಕಾರು ಪಾರ್ಕಿಂಗ್‌ ಹಾಗೂ ಕಚೇರಿ. ಎರಡನೇ ಮಹಡಿಯಲ್ಲಿ ಸಭಾಂಗಣ. ಮೂರನೇ ಮಹಡಿಯಲ್ಲಿ ಮ್ಯೂಸಿಯಂ, ಅತಿಥಿಗೃಹ, ದಾಸ್ತಾನು ಕೊಠಡಿಯನ್ನು ಹೊಂದಿದೆ. ‘ತುಳು […]