ಇರಾ ಸೋಮನಾಥೇಶ್ವರ ದೇವಸ್ಥಾನದ ಬಳಿ ನಿಧಿಗಾಗಿ ನಾಗ ಬನದ ಹುತ್ತ ಅಗೆದ ಕಳ್ಳರು

Monday, October 25th, 2021
Ira Hutta

ಮಂಗಳೂರು : ಬಂಟ್ವಾಳ ತಾಲೂಕಿನ ಪ್ರಸಿದ್ಧ ಇರಾ ಶ್ರೀ ಕುಂಡಾವು ಸೋಮನಾಥೇಶ್ವರ ದೇವಸ್ಥಾನಕ್ಕೆ ನಾಗ ಬನದ ಪಕ್ಕದ ಹುತ್ತವೊಂದರಲ್ಲಿ ಕಳ್ಳರು ನಿಧಿಗಾಗಿ ಭೂಮಿಯನ್ನು ಸುಮಾರು ಹತ್ತು ಅಡಿ ಆಗೆದಿದ್ದಾರೆ. ನಾಗಬನದ ಆಸುಪಾಸಿನಲ್ಲಿ ಕಂಬಳ ಗದ್ದೆ ಎಲ್ಲ ಧಾರ್ಮಿಕ ನೆಲೆಗಟ್ಟಿನಲ್ಲಿ ಕಾರಣಿಕ ಬೀರುತ್ತಿರುವುದರಿಂದ ಅಲ್ಲೆಲ್ಲ ಚಿನ್ನ ವಜ್ರಗಳಿರುವ ನಿಧಿ ಇರುತ್ತದೆ, ನಾಗ ಕಾವಲು ಕಾಯುತ್ತಾನೆ ಎಂಬ ಪ್ರತೀತಿ ಇದ್ದು, ನಿಧಿ ಆಸೆಯಿಂದ ಕಳ್ಳರು ಭೂಮಿ ಅಗೆಯುವ ಪ್ರಕರಣ ಆಗಾಗ್ಗೆ ಕೇಳಿಬರುತ್ತಿದೆ. ನಿಧಿಗಾಗಿ ಕಳ್ಳರು ಪುರಾತನ ಹುತ್ತವೊಂದನ್ನು ಶನಿವಾರ ವಾರ […]

ದುಷ್ಕರ್ಮಿಗಳ ತಂಡದಿಂದ ಮನೆಯವರನ್ನು ಕಟ್ಟಿ ಹಾಕಿ ನಿಧಿಗಾಗಿ ಶೋಧ

Tuesday, January 24th, 2017
Karopady

ಮಂಗಳೂರು: ಇನ್ನೊವಾ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಮನೆಯವರನ್ನು ಕಟ್ಟಿ ಹಾಕಿ ನಿಧಿಗಾಗಿ ಶೋಧ ನಡೆಸಿದ ಘಟನೆ ಇಂದು ನಸುಕಿನ ಜಾವ ಬಂಟ್ವಾಳ ತಾಲೂಕಿನ ವಿಟ್ಲದ ಕರೋಪಾಡಿಯಲ್ಲಿ ನಡೆದಿದೆ. ಕರೋಪಾಡಿಯ ವಿಘ್ನರಾಜ್ ಭಟ್ ಎಂಬುವರ ಮನೆಗೆ ನುಗ್ಗಿದ್ದ 9 ಜನರ ತಂಡ ಮನೆಯವರಲ್ಲಿ ನಿಧಿ ಎಲ್ಲಿದೆ ಎಂದು ವಿಚಾರಿಸಿ ಅವರನ್ನು ಕಟ್ಟಿ ಹಾಕಿದೆ. ಅವರ ಮನೆಯ ಹೊರಭಾಗದಲ್ಲಿ ಮನೆಯ ಗೇಟಿನ ಬಳಿ ನೆಲವನ್ನು ಅಗೆದು ನಿಧಿಗೆ ಹುಡುಕಾಡಿದ್ದಾರೆ. ಆದರೆ ನಿಧಿ ಸಿಗದೆ ವಾಪಸ್‌ ತೆರಳಿದ್ದಾರೆ. ದುಷ್ಕರ್ಮಿಗಳು ಕನ್ನಡ, […]